ನವೋದಯ ಪರೀಕ್ಷೆ: ಪುತ್ರನಿಗೆ ನಕಲು ನೀಡಿ ಸಿಕ್ಕಿಬಿದ್ದ ಅತಿಥಿ ಶಿಕ್ಷಕ

KannadaprabhaNewsNetwork |  
Published : Dec 14, 2025, 03:15 AM IST
ಪ್ರತಿಭಟನಾನಿರತ ಹಲವು ಪಾಲಕರು ಮುಖ್ಯೋಧ್ಯಾಪಕರಿಗೆ ದೂರು ಸಲ್ಲಿಸಿದರು. | Kannada Prabha

ಸಾರಾಂಶ

ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಕೇಂದ್ರದ ನವೋದಯ ಶಾಲೆಯ ಪ್ರವೇಶಾತಿ ಪರೀಕ್ಷೆಯಲ್ಲಿ ಶಾಲೆಯ ಶಿಕ್ಷಕ ತನ್ನ ಮಗನಿಗೆ ನಕಲು ನೀಡಿ ಸಿಕ್ಕಿಬಿದ್ದು ಪಾಲಕರ ಆಕ್ರೋಶಕ್ಕೆ ಕಾರಣವಾಗಿ ತೀವ್ರ ಪ್ರತಿಭಟನೆ ಎದುರಿಸಿದ ಘಟನೆ ನಡೆಯಿತು. ೨೦೨೬ನೇ ಸಾಲಿಗೆ ಜವಾಹರ್ ನವೋದಯ ವಿದ್ಯಾಲಯಕ್ಕೆ ಪ್ರವೇಶಾತಿಗಾಗಿ ಪರೀಕ್ಷೆ ನಡೆಸಲಾಗುತ್ತಿದ್ದು, ಹಳಿಯಾಳದ ಕಾರ್ಮೆಲ್ ಪ್ರಾಥಮಿಕ ಶಾಲೆ ಮತ್ತು ಪಕ್ಕದ ಮಿಲಾಗ್ರೀಸ್ ಪ್ರಾಥಮಿಕ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿತ್ತು.

ಕನ್ನಡಪ್ರಭ ವಾರ್ತೆ ಹಳಿಯಾಳ

ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಕೇಂದ್ರದ ನವೋದಯ ಶಾಲೆಯ ಪ್ರವೇಶಾತಿ ಪರೀಕ್ಷೆಯಲ್ಲಿ ಶಾಲೆಯ ಶಿಕ್ಷಕ ತನ್ನ ಮಗನಿಗೆ ನಕಲು ನೀಡಿ ಸಿಕ್ಕಿಬಿದ್ದು ಪಾಲಕರ ಆಕ್ರೋಶಕ್ಕೆ ಕಾರಣವಾಗಿ ತೀವ್ರ ಪ್ರತಿಭಟನೆ ಎದುರಿಸಿದ ಘಟನೆ ನಡೆಯಿತು. ೨೦೨೬ನೇ ಸಾಲಿಗೆ ಜವಾಹರ್ ನವೋದಯ ವಿದ್ಯಾಲಯಕ್ಕೆ ಪ್ರವೇಶಾತಿಗಾಗಿ ಪರೀಕ್ಷೆ ನಡೆಸಲಾಗುತ್ತಿದ್ದು, ಹಳಿಯಾಳದ ಕಾರ್ಮೆಲ್ ಪ್ರಾಥಮಿಕ ಶಾಲೆ ಮತ್ತು ಪಕ್ಕದ ಮಿಲಾಗ್ರೀಸ್ ಪ್ರಾಥಮಿಕ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿತ್ತು.

ಕಾರ್ಮೆಲ್ ಶಾಲೆಯಲ್ಲಿ ಗುರುತಿಸಲಾದ ೧೦ ಬ್ಲಾಕ್‌ಗಳಲ್ಲಿ ೨೪೦ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ೩ ಬ್ಲಾಕ್‌ಗಳಲ್ಲಿ ತಮಗೆ ಬೇಕಾದ ಕೆಲವು ಮಕ್ಕಳಿಗೆ ಶಿಕ್ಷಕ ನಕಲು ಮಾಡಲು ಅವಕಾಶ ನೀಡಿದ್ದಾನೆಂಬ ದೂರು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಂದ ಕೇಳಿಬಂದವು. ಅತಿಥಿ ಶಿಕ್ಷಕ ತನ್ನ ಮಗನೂ ಪರೀಕ್ಷೆ ಬರೆಯುತ್ತಿದ್ದುದರಿಂದ ತನ್ನ ಸೇವೆಯ ದುರ್ಬಳಕೆ ಮಾಡಿಕೊಂಡಿರುವುದು ಪಾಲಕರಿಗೂ ಗೊತ್ತಾಗಿ ಗದ್ದಲದ ಸನ್ನಿವೇಶ ನಿರ್ಮಾಣವಾಗಿತ್ತು. ಶಿಕ್ಷಕ ಚರ್ಚಿಲ್ ಸಂತಾನ ದಾಲ್ಮೆತ್ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ರಿಲೀವರ್ ಆಗಿ ಬಂದು ಮಗನ ಪ್ರಶ್ನೆ ಪತ್ರಿಕೆಯನ್ನು ಹೊರಗೆ ತಂದು ಉತ್ತರ ಗುರುತಿಸಿ ನಕಲು ಮಾಡಿದ್ದು, ಇದನ್ನು ಆತ ತಪ್ಪೊಪ್ಪಿಗೆಯಲ್ಲಿ ಒಪ್ಪಿಕೊಂಡಿರುವುದು ಇಡೀ ಪರೀಕ್ಷಾ ವ್ಯವಸ್ಥೆಯನ್ನೇ ಅಣುಕಿಸಿದಂತಾಗಿದೆ. ಈತನ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಪ್ರತಿಭಟನಾನಿರತ ಹಲವು ಪಾಲಕರು ಆಗ್ರಹಿಸಿ ಮುಖ್ಯೋಧ್ಯಾಪಕರಿಗೆ ದೂರು ಸಲ್ಲಿಸಿದರು. ನಕಲು ಮಾಡಿದ ವಿದ್ಯಾರ್ಥಿಯ ಮಾಹಿತಿ ನೀಡಿ ಆತನ ಫಲಿತಾಂಶ ತಡೆಹಿಡಿಯಬೇಕು. ತಪ್ಪು ಮಾಡಿರುವ ಶಿಕ್ಷಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಪಾಲಕರು ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಭಟನಾನಿರತ ಹಲವು ಪಾಲಕರು ಮುಖ್ಯೋಧ್ಯಾಪಕರಿಗೆ ದೂರು ಸಲ್ಲಿಸಿದರು.

ನಮ್ಮ ಶಾಲೆಯ ಪರಿಸರದಲ್ಲಿ ಜರುಗಿದ ನವೋದಯ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ನಕಲು ನಡೆಯಲು ತಮ್ಮ ಶಾಲೆಯ ಅತಿಥಿ ಶಿಕ್ಷಕ ಭಾಗಿಯಾಗಿರುವುದು ಅಕ್ಷಮ್ಯವಾಗಿದ್ದು, ತಪ್ಪೊಪ್ಪಿಗೆ ಹೇಳಿಕೆಯಿಂದ ಸಾಬೀತಾಗಿದ್ದು ಘಟನೆಯನ್ನು ನಮ್ಮ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರ ಗಮನಕ್ಕೆ ತಂದು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಕಾರ್ಮೆಲ್ ಶಾಲೆಯ ಮುಖ್ಯೋಧ್ಯಾಪಕಿ ಸಿಸ್ಟರ್ ಜಾನೆಟ್ ಕಾರ‍್ಮಿನ್ ಮಿನೆಜಸ್ ತಿಳಿಸಿದ್ದಾರೆ.

ಪರೀಕ್ಷಾ ನಿಯಮಾವಳಿಯಂತೆ ನೋ ರಿಲೇಷನ್ ಸರ್ಟಿಫಿಕೇಟ್ ಕೊಡುವುದು ಕಡ್ಡಾಯವಿದ್ದು ಅದರಂತೆ ಪಾಲನೆಯಾಗದಿರುವುದು ತಪ್ಪು. ಆದ್ದರಿಂದ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ