ದೊಡ್ಡಕೆರೆ ಕಾಯಕಲ್ಪಕ್ಕೆ ನಿರ್ಲಕ್ಷ್ಯ!

KannadaprabhaNewsNetwork |  
Published : Feb 25, 2025, 12:47 AM IST
23ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಕೇತಗಾನಹಳ್ಳಿ ಕೆರೆಯ ಏರಿ ಕೊಚ್ಚಿ ಹೋಗಿದ್ದರೂ ದುರಸ್ಥಿ ಕಂಡಿಲ್ಲ. | Kannada Prabha

ಸಾರಾಂಶ

ಕೆಜಿಎಫ್‌ನ ಬೆಟ್ಟ ಗುಡ್ಡೆಗಳಲ್ಲಿ ಸುರಿಯುವ ಮಳೆಯ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ಗ್ರಾಮದ ದೊಡ್ಡಕೆರೆಯನ್ನು 1926 ರಲ್ಲಿ ಮೈಸೂರಿನ ದಿವಾನರು ನಿರ್ಮಿಸಿದ್ದರು. ಆದರೆ ಈಗ ಕೆರೆಯ ಏರಿ ಕೊಚ್ಚಿ ಹೋಗಿದೆ ಮತ್ತು ಕೋಡಿ ಪ್ರದೇಶಗಳು ಶಿಥಿಲವಾಗಿವೆ. ಇದರಿಂದ ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಚಿನ್ನದನಾಡಿನ ಬೆಟ್ಟದ ತಪ್ಪಲಿನಲ್ಲಿ ಮಳೆ ನೀರನ್ನು ಸಂಗ್ರಹಿಸಬಲ್ಲ ಬೆರಳೆಣಿಕೆಯಷ್ಟು ಕೆರೆಗಳನ್ನು ಬಿಟ್ಟರೆ ಉಳಿದಂತೆ ಸಾಕಷ್ಟು ಕೆರೆಗಳು ಅವನತಿಯ ಅಂಚಿನಲ್ಲಿವೆ. ಮೂಲ ಸೌಂದರ್ಯ ಮತ್ತು ಅಸ್ತಿತ್ವವನ್ನು ಕಳೆದುಕೊಂಡಿವೆ.ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ 82 ರಲ್ಲಿ 46.10 ಎಕರೆ ವಿಸ್ತೀರ್ಣವನ್ನು ಹೊಂದಿರತಕ್ಕಂತಹ ವಿಶಾಲವಾದ ಕೆರೆಯಾಗಿದೆ, ಈ ಕೆರೆಯಲ್ಲಿ 0.25 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಕೆರೆ ಇದಾಗಿದೆ. ಕಾಮಸಮುದ್ರ ಹೋಬಳಿಯ ಮೂರನೇ ಅತಿದೊಡ್ಡ ಕೆರೆಯಾಗಿದೆ.

1926ರಲ್ಲಿ ನಿರ್ಮಿಸಿದ ಕೆರೆ

ಕೆಜಿಎಫ್‌ನ ಬೆಟ್ಟ ಗುಡ್ಡೆಗಳಲ್ಲಿ ಸುರಿಯುವ ಮಳೆಯ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ಗ್ರಾಮದ ದೊಡ್ಡಕೆರೆಯನ್ನು 1926 ರಲ್ಲಿ ಮೈಸೂರಿನ ದಿವಾನರು ನಿರ್ಮಿಸಿದ್ದರು. ಆದರೆ ಈಗ ಕೆರೆಯ ಏರಿ ಕೊಚ್ಚಿ ಹೋಗಿದೆ ಮತ್ತು ಕೋಡಿ ಪ್ರದೇಶಗಳು ಶಿಥಿಲವಾಗಿವೆ. ಇದರಿಂದ ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಆದರೂ ಈ ಕೆರೆ ಪುನಶ್ಚೇತನಕ್ಕೆ ಸಂಬಂಧಪಟ್ಟವರು ಮುಂದಾಗುತ್ತಿಲ್ಲ.

ಕೆರೆ ತುಂಬಾ ಹೂಳು ತುಂಬಿಕೊಂಡಿದ್ದು ಕೆರೆಯ ಕಟ್ಟೆಯು ಕಿತ್ತು ಹೋಗಿರುವುದರಿಂದ ಸದ್ಯಕ್ಕೆ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಕೆರೆಯ ತುಂಬಾ ಜಾಲಿ ಮರಗಳು , ಮುಳ್ಳಿನ ಗಿಡಗಳು ಪೊದೆಗಳು,ಗಿಡಗಂಟಿಗಳು ಬೆಳೆದು ಕೆರೆಯ ಸ್ವರೂಪವೇ ಬದಲಾಗಿದೆ.

ಸಣ್ಣ ನೀರಾವರಿ ಇಲಾಖೆ ಮೌನ

ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ಈ ಕೆರೆಯಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸಿ ಕೆರೆಗೆ ಕಟ್ಟೆಯನ್ನು ನಿರ್ಮಿಸಿ ಕೆರೆಯನ್ನು ರಕ್ಷಿಸುವುದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ವೃದ್ದಿಗೆ ಅನುಕೂಲವಾಗುತ್ತದೆ, ಆದರೆ ಯಾರೂ ಇತ್ತ ಗಮನಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕೆರೆಯ ನೀರಿನಿಂದ ಸುತ್ತಮುತ್ತಲಿನ ಸುಮಾರು ಐದಾರು ಹಳ್ಳಿಗಳಲ್ಲಿ ರೈತರ ಜಮೀನುಗಳಿಗೆ ನೀರಾವರಿ ವ್ಯವಸ್ಥೆಯನ್ನು ಒದಗಿಸುತ್ತಿತ್ತು, ಆದರೆ ಕೆರೆಯ ಅವಸಾನದಿಂದಾಗಿ ಅಂತರ್ಜಲ ಕುಸಿದಿದ್ದು ಬೋರ್‌ವೆಲ್‌ಗಳಲ್ಲೂ ನೀರು ಸಿಗುತ್ತಿಲ್ಲ. ಈಗಲಾದರೂ ಸಂಬಂಧಪಟ್ಟ ಇಲಾಖೆ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್