ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದೇ ಮೊದಲ ಬಾರಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ನೇರಲಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಸುಮಾರು 8 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಈ ಹಿಂದೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಜೆಡಿಎಸ್ ಪಕ್ಷದ ನಾಯಕರು ಚುನಾವಣೆಯನ್ನೇ ನಡೆಸದೆ ಅವರಿಗೆ ಬೇಕಾದವರನ್ನು ನಿರ್ದೇಶಕರನ್ನಾಗಿ ಮಾಡಿಕೊಂಡು ಅಧಿಕಾರ ನಡೆಸುತ್ತಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಚುನಾವಣೆಗೆ ಸ್ಪರ್ಧಿಸುವ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬದಲಾವಣೆ ತಂದಿದ್ದಾರೆ. ಮುಂಬರುವ ದಿನಗಳಲ್ಲಿ ತಾಲೂಕಿನ ಅನೇಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಉತ್ತಮ ಆಡಳಿತ ನೀಡುವ ಸಲುವಾಗಿ ಮುಂಬರುವ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ತಾವು ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಕುಷ್ಮನ್ನೇಗೌಡ, ಕೃಷ್ಣೆಗೌಡ, ತಿಮ್ಮೇಗೌಡ, ನಾಗರಾಜ್, ಬೈರೇಗೌಡ ( ಕುಮ್ಮಿ), ರಾಮೇಗೌಡ, ರಂಗಮ್ಮ, ಲಿಂಗರಾಜು ( ಸ್ವಾಮಿಗೌಡ ), ಮುಖಂಡರಾದ ಹಿರಿಯಣ್ಣ ಗೌಡ ( ಮಂಜಣ್ಣ), ಕೊಬ್ಬರಿ ವರ್ತಕ ಸ್ವಾಮಿ, ಬೈರೇಗೌಡ ಎನ್ ಜೆ, ಜಯಣ್ಣ ಎನ್ ಎಸ್, ಗಣೇಶ್, ಡಿಎಸ್ಎಸ್ ಯುವ ಮುಖಂಡ ಪ್ರವೀಣ್, ಬಸವರಾಜು ಎನ್ಎ, ದ್ವಾರಕೆ ಎನ್ ಆರ್, ನಂಜುಂಡೇಗೌಡ ( ಪಟೇಲ್ ), ದಿನೇಶ್ ಎಚ್ ಆರ್, ಶೇಖರಚಾರ್, ಸೇರಿದಂತೆ ಇತರರು ಹಾಜರಿದ್ದರು.