ರಾಸಾಯನಿಕ ಬಳಸಿ ಬಾಳೆ ಹಣ್ಣಾಗಿಸುವ ಜಾಲ ಪತ್ತೆ

KannadaprabhaNewsNetwork |  
Published : Aug 21, 2026, 03:45 AM IST
20ಬಾಳೆ | Kannada Prabha

ಸಾರಾಂಶ

ಕಾಯಿ ಬಾಳೆ ಗೊನೆಗಳನ್ನು ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಕೃತಕವಾಗಿ ಹಣ್ಣು ಮಾಡುತಿದ್ದ ಜಾಲವೊಂದನ್ನು ಉಡುಪಿಯ ಆಹಾರ ಇಲಾಖೆ ಅಧಿಕಾರಿಗಳು ಬಯಲಿಗೆಳೆದಿದ್ದಾರೆ.

ಮಣಿಪಾಲ: ಕಾಯಿ ಬಾಳೆ ಗೊನೆಗಳನ್ನು ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಕೃತಕವಾಗಿ ಹಣ್ಣು ಮಾಡುತಿದ್ದ ಜಾಲವೊಂದನ್ನು ಉಡುಪಿಯ ಆಹಾರ ಇಲಾಖೆ ಅಧಿಕಾರಿಗಳು ಬಯಲಿಗೆಳೆದಿದ್ದಾರೆ.

ಬುಧವಾರ ಮುಂಜಾನೆ ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್. ನೇತೃತ್ವದಲ್ಲಿ ಅಧಿಕಾರಿಗಳು ಇಲ್ಲಿನ ಅಲೆವೂರು, ಕೆಮ್ತೂರು ಮತ್ತು ದುಗ್ಲಿಪದವು ಎಂಬಲ್ಲಿನ 3 ಬಾಳೆ ಹಣ್ಣು ಗೋದಾಮುಗಳಿಗೆ ದಿಢೀರ್ ದಾಳಿ ನಡೆಸಿ ಈ ಕುಕೃತ್ಯ ಬಹಿರಂಗ ಮಾಡಿದ್ದಾರೆ.

ದಾಳಿ ಸಂದರ್ಭ ಅಧಿಕಾರಿಗಳು ಬಾಳೆಕಾಯಿಗಳನ್ನು ಕೃತಕವಾಗಿ ಮಾಗಿಸಲು ಬಳಸುತ್ತಿದ್ದ ವಿಷಕಾರಿ ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಆರೋಪಿಗಳು ತಾವು ಅಂತಹ ಯಾವುದೇ ಕಾನೂನಬಾಹಿರ ಕೆಲಸ ಮಾಡುತ್ತಿಲ್ಲ ಎಂದು ಯಾಮಾರಿಸಲು ಪ್ರಯತ್ನಿಸಿದ್ದಾರೆ. ಅವರನ್ನು ಎಸಿ ರಶ್ಮಿ ಅವರು ಸ್ಥಳದಲ್ಲೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಂತರ ಆರೋಪಿಗಳು ತಪ್ಪನ್ನು ಒಪ್ಪಿಕೊಂಡು, ತಾವು ಈ ಬಾಳೆ ಗೊನೆಗಳನ್ನು ಕಾರ್ಕಳ, ಮೂಡುಬಿದಿರೆ ಮುಂತಾದ ಕಡೆಗೆ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ವಾಹನಗಳಲ್ಲಿ ತುಂಬಿಸಿಟ್ಟಿದ್ದ ಬಾಳೆ ಕಾಯಿಗಳನ್ನು ಮತ್ತು ಹಾನಿಕಾರಕ ರಾಸಾಯನಿಕ ಮತ್ತು ಕೃತಕ ಬಣ್ಣಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿ ವಿವೇಕ್, ಉಡುಪಿ ತಹಸೀಲ್ದಾರ್ ಗುರುರಾಜ್ ಹಾಗೂ ವಿವಿಧ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ಇಕ್ಕೆಲ 75 ಮೀ.ನಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುವಂತಿಲ್ಲ: ಕೋಟ
ಯಕ್ಷಗಾನಕ್ಕೆ ಗಡಿನಾಡು ಕನ್ನಡಿಗರ ಕೊಡುಗೆ ಅಪಾರ: ಡಾ. ತಲ್ಲೂರು