ರಾಮನಗರ: ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಪ್ರೌಢಶಾಲೆಗಳಿಗಷ್ಟೇ ಸೀಮಿತಗೊಳಿಸಬೇಕು. ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಅದರೊಂದಿಗೆ ವಿಲೀನಗೊಳಿಸಬಾರದು. ಈ ಬಗ್ಗೆ ರಾಜ್ಯ ಸರ್ಕಾರ ಮರು ಚಿಂತನೆ ನಡೆಸಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಸಲಹೆ ನೀಡಿದರು.
ಹಳ್ಳಿಗಳಲ್ಲಿರುವ ಕಿರಿಯ ಮತ್ತು ಹಿರಿಯ ಪ್ರಾಥಮಿಕಗಳು ಶೈಕ್ಷಣಿಕ ವ್ಯವಸ್ಥೆಯ ಜೀವನಾಡಿಗಳು. ಶಿಕ್ಷಕರ ಕೊರತೆಯ ನೆಪವೊಡ್ಡಿ ಅವುಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳೊಂದಿಗೆ ವಿಲೀನಗೊಳಿಸುವುದರಲ್ಲಿ ಅರ್ಥವಿಲ್ಲ. 5 ಮಕ್ಕಳೇ ಇರಲಿ ಕಿರಿಯ - ಹಿರಿಯ ಪ್ರಾಥಮಿಕ ಶಾಲೆಗಳ ಬಾಗಿಲು ಮುಚ್ಚಬಾರದು ಎಂದು ಒತ್ತಾಯಿಸಿದರು.
ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಕರೆತಂದು ಕರೆದೊಯ್ಯಬಹುದು. ಆದರೆ, ಪ್ರಾಥಮಿಕ ಶಾಲಾ ಮಕ್ಕಳನ್ನು ಕರೆತರುವುದು ಕಷ್ಟ. ಅಲ್ಲದೆ, ಆ ಮಕ್ಕಳ ರಕ್ಷಣೆ, ಆರೈಕೆ, ಸಾರಿಗೆ ವ್ಯವಸ್ಥೆ ಬಗ್ಗೆಯೂ ಎಚ್ಚರ ವಹಿಸಬೇಕಾಗುತ್ತದೆ. ಹೀಗಾಗಿಯೇ ಕೆಪಿಎಸ್ ಶಾಲೆಗಳು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸೀಮಿತಗೊಳಿಸುವುದು ಸೂಕ್ತವಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದು ಮಂಜುನಾಥ್ ಸಲಹೆ ನೀಡಿದರು.ಶಿಕ್ಷಕರ ಜೊತೆಗೆ ಆಯಾಗಳು ಮತ್ತು ಅಟೆಂಡರ್ ಗಳ ನೇಮಕಾತಿಯನ್ನೂ ಮಾಡಬೇಕು. ಶಾಲಾ ಕೊಠಡಿಗಳು ಮಾತ್ರವಲ್ಲದೆ ಶೌಚಾಲಯಗಳು, ವಿದ್ಯಾರ್ಥಿನಿಲಯಗಳ ನಿರ್ಮಾಣದ ಬಗ್ಗೆಯೂ ಗಮನ ಹರಿಸಬೇಕು. ಶಾಲೆಗಳಲ್ಲಿ ಇಂಟರ್ ನೆಟ್ ವ್ಯವಸ್ಥೆ ಅಳವಡಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಮಕ್ಕಳೇ ಭವ್ಯ ಭಾರತದ ರಾಯಭಾರಿಗಳು :
ಈಗ ಬಡವನೂ ತನ್ನ ಮಗನನ್ನು ಖಾಸಗಿ ಶಾಲೆಗೆ ಸೇರಿಸಲು ಉತ್ಸಾಹ ತೋರುತ್ತಿದ್ದಾನೆ. ಆದರೆ, ಯಾವ ಶಾಲೆಯಲ್ಲಿ ಓದುತ್ತೇವೆ ಎಂಬುದಕ್ಕಿಂತ ಪಡೆದ ಶಿಕ್ಷಣ ಮುಖ್ಯವಾಗುತ್ತದೆ. ಶಿಕ್ಷಣ ಕದಿಯಲಾಗದ ಬಂಗಾರ. ಶಿಕ್ಷಣ ನಮ್ಮ ಬದುಕು, ಭವಿಷ್ಯ, ಬದುಕಿನ ರಕ್ಷಾ ಕವಚ. ಮಕ್ಕಳೇ ಭವ್ಯ ಭಾರತದ ರಾಯಭಾರಿಗಳು ಎಂದರು.
ಯಾವ ಮನುಷ್ಯವು ಪದವಿಯಿಂದ ದೊಡ್ಡವನಾಗಲ್ಲ. ಅಧಿಕಾರ ಮತ್ತು ಹಣ ಬಂದಾಗ ಬದಲಾಗದವನು ಒಳ್ಳೆಯ ಮನುಷ್ಯ. ಮೌನವಾಗಿ ಸಾಧನೆ ಮಾಡಿ ಮೇಲೆ ಬರಬೇಕೇ ಹೊರತು ಗದ್ದಲ ಮಾಡಿ ಪ್ರಸಿದ್ಧರಾಗಬಾರದು. ಮಕ್ಕಳ ಕಣ್ಣುಗಳು ಚಿಕ್ಕದಾಗಿರಬಹುದು. ಆದರೆ, ನಿಮ್ಮ ಕನಸುಗಳು ದೊಡ್ಡದಾಗಿರಬೇಕು. ನಿಮಗಾಗಿ ದೊಡ್ಡ ಭವಿಷ್ಯದ ಬಾಗಿಲು ಕಾಯುತ್ತಿದೆ ಎಂದು ಮಂಜುನಾಥ್ ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಿದರೆ, ಶಾಲೆಗೆ ಅಗತ್ಯ ಪರಿಕರ ಸವಲತ್ತುಗಳನ್ನು ಒದಗಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ ಮಾಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ಮಾಜಿ ಸದಸ್ಯೆ ವೖಶಾಲಿ ಚೆನ್ನಪ್ಪ, ಎಸ್ ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖ್ಯ ಶಿಕ್ಷಕಿ ಜಯಶ್ರೀ, ಬ್ರಿಟಾನಿಯಾ ಕಂಪನಿ ಕೃಷ್ಣಪ್ಪ,
7ಕೆಆರ್ ಎಂಎನ್ 5.ಜೆಪಿಜಿ
ರಾಮನಗರ ತಾಲೂಕು ಬಿಡದಿ ಹೋಬಳಿಯ ತೊರೆದೊಡ್ಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಬಯಲು ರಂಗ ಮಂದಿರವನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಿದರು.