ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು ಅಮಾನತು

KannadaprabhaNewsNetwork |  
Published : Jun 05, 2025, 01:26 AM ISTUpdated : Jun 05, 2025, 01:27 AM IST
ಆದೇಶ ಪ್ರತಿ | Kannada Prabha

ಸಾರಾಂಶ

ಗ್ರಾಪಂ ಸದಸ್ಯೆ ರೇಣುಕಾ ಸುಬೇದಾರ, ಹಿಂದಿನ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವಿಜಯಕುಮಾರ ರಾಘವಲು ಅವರ ಸದಸ್ಯತ್ವ ಸ್ಥಾನ ರದ್ದು ಮಾಡಲಾಗಿದೆ. ಸದಸ್ಯೆ ರೇಣುಕಾ, ಸರ್ಕಾರದ ನಿಯಮ ಉಲ್ಲಂಘಿಸಿ, ತಮ್ಮ ಮೈದುನನಿಗೆ (ಪತಿಯ ತಮ್ಮ) ಕಾಮಗಾರಿ ನಿರ್ವಹಣೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಕಾರಟಗಿ:

ತಾಲೂಕಿನ ಚಳ್ಳೂರು ಗ್ರಾಮ ಪಂಚಾಯಿತಿ ಇಬ್ಬರು ಸದಸ್ಯರ ಸದಸ್ಯತ್ವ ಅಮಾನತು ಮಾಡಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದಾರೆ.

ಗ್ರಾಪಂ ಸದಸ್ಯೆ ರೇಣುಕಾ ಸುಬೇದಾರ, ಹಿಂದಿನ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವಿಜಯಕುಮಾರ ರಾಘವಲು ಅವರ ಸದಸ್ಯತ್ವ ಸ್ಥಾನ ರದ್ದು ಮಾಡಲಾಗಿದೆ. ಸದಸ್ಯೆ ರೇಣುಕಾ, ಸರ್ಕಾರದ ನಿಯಮ ಉಲ್ಲಂಘಿಸಿ, ತಮ್ಮ ಮೈದುನನಿಗೆ (ಪತಿಯ ತಮ್ಮ) ಕಾಮಗಾರಿ ನಿರ್ವಹಣೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಹಾಲಿ ಸದಸ್ಯ ಹಾಗೂ ಈ ಹಿಂದಿನ ಅಧ್ಯಕ್ಷ ವಿಜಯಕುಮಾರ ಮೃತರ ಹೆಸರಿನಲ್ಲಿ‌ ಹಾಗೂ ಅರೆ ಸರ್ಕಾರಿ ನೌಕರರ ಹೆಸರಿನಲ್ಲಿ ನರೇಗಾ ಕೂಲಿ ಪಾವತಿ ಮಾಡಿದ್ದಾರೆ ಎಂಬ ಆರೋಪ ಕೇಳಿ‌ ಬಂದಿತ್ತು. ಈ‌ ಬಗ್ಗೆ ಕಾರಟಗಿ ತಾಪಂ ಇಒ ಮತ್ತು ‌ಜಿಪಂ ಸಿಇಒ ಅವರು ಸದಸ್ಯರ ಸ್ಥಾನ ರದ್ದು ಮಾಡುವಂತೆ ಕೋರಿ, ಪ್ರಾದೇಶಿಕ ‌ಆಯುಕ್ತರು, ಕಲಬುರಗಿ‌ ವಿಭಾಗ‌ಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಎದುರುದಾರರಿಗೆ ನೋಟಿಸ್ ನೀಡಿ, ವಿಚಾರಣೆ ಕೈಗೊಂಡ ನಂತರ, ವಿಭಾಗೀಯ ‌ಆಯುಕ್ತರು,‌ ಸದಸ್ಯತ್ವ ರದ್ದು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾಪ ‌ಸಲ್ಲಿಸಿದ್ದರು.

ವಿಭಾಗೀಯ ಆಯುಕ್ತರ ಪ್ರಸ್ತಾವನೆ ಆಧರಿಸಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ‌ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಈ ಇಬ್ಬರ ಸದಸ್ಯತ್ವ ಸ್ಥಾನ ರದ್ದು ಮಾಡಿ ಆದೇಶಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌