ಕನ್ನಡಪ್ರಭ ವಾರ್ತೆ ಗುರುಮಿಠಕಲ್
ಸಂತೆ ಆವರಣ ಅವ್ಯವಸ್ಥೆಯಿಂದ ಕೂಡಿದ್ದು, ಸ್ವಚ್ಛತೆಯ ಕೊರತೆಯಿಂದ ಕುಡಿಯುವ ನೀರಿನ ಅಭಾವ ಹಾಗೂ ನಿರ್ವಹಣೆಯ ಲೋಪದಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ರೈತರು ಇದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪಿಸಿದ ಬೆನ್ನಲ್ಲೇ, ಧನಗಳ ಸಂತೆ ಸ್ಥಳಕ್ಕೆ ಅಧಿಕಾರಿಗಳ ದಂಡು ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿದ ಪುರಸಭೆ ಮುಖ್ಯಅಧಿಕಾರಿ ಶರಣಪ್ಪ ಸ್ಥಳದಲ್ಲಿದ ಅಧಿಕಾರಿ ಸಿಬ್ಬಂದಿಗಳಿಗೆ ಜೆಸಿಬಿ ಮತ್ತು ಟ್ರಾಕ್ಟರ್ ನಿಂದ ಕಾರ್ಮಿಕರ ಕರೆಸಿ ಸ್ಥಳದಲ್ಲೇ ಸ್ವಚ್ಛತೆ ಮಾಡಲು ಮುಂದಾದರು ನಂತರ ಬ್ಲಿಚಿಂಗ್ ಪೌಡರ್ ಸಿಂಪಡಿಸಿ ಎಂದು ಸ್ಥಳದಲ್ಲಿದ ಅಧಿಕಾರಿ ಸಿಬ್ಬಂದಿಗೆ ಸೂಚನೆ ನೀಡಿದರು.
ನಂತರ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಪ್ರತಿ ಸೋಮವಾರ ನಡೆವ ಧನಗಳ ಸಂತೆಯಲ್ಲಿ ಮೂಲಸೌಲಭ್ಯ ಸ್ಚಚ್ಛತೆ ಕುಡಿವ ನೀರಿನ ಪಾಚುಗಟ್ಟಿದ ನೀರಿನಿಂದ ಧನಕರಗಳಿಗೋ ರೋಗ ರುಜಿನ ಬರುತ್ತವೆಂದು ಹೋರಾಟದ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಪುರಸಭೆ ಮತ್ತು ಕೃಷಿ ಉತ್ಪನ್ನ ಅಧಿಕಾರಿಗಳು ಜಂಟಿಯಾಗಿ ಧನಗಳ ಸಂತೆ ಸಪೂರ್ಣ ಸ್ವಚ್ಛತೆ ಮಾಡಲು ಮುಂದಾಗಿರುವುದು ನನ್ನ ಹೋರಾಟಕ್ಕೆ ತಕ್ಷಣ ಸ್ಪಂದಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಧನ್ಯವಾದ ತಿಳಿಸಿದ್ದಾರೆ.ಇದೇ ಸಂಧರ್ಭದಲ್ಲಿ ಪುರಸಭೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಾದ ಅಶೋಕ, ರಾಮುಲು, ಜಗದೀಶ, ಹಾಗೂ ವಿನೋದ, ಡಿಸಿ ಕಾಮಿನಿ ,ಪವನ, ಮಲ್ಲೇಶಿ ರೈತರು ಸೇರಿದಂತೆ ಪೌರಕಾರ್ಮಿಕರು ಮತ್ತು ಕೂಲಿ ಕಾರ್ಮಿಕರು ಇದ್ದರು.
- ಉಮೇಶ್ ಕೆ. ಮುದ್ನಾಳ, ಸಾಮಾಜಿಕ ಹೋರಾಗಾರ.