ಒಂದು ರಾಷ್ಟ್ರ-ಒಂದು ತೆರಿಗೆಯಿಂದ ಆರ್ಥಿಕ ದಕ್ಷತೆ ಹೆಚ್ಚಳ: ಸಾಯಿಪ್ರಸಾದ್‌

KannadaprabhaNewsNetwork |  
Published : Apr 02, 2026, 01:15 AM IST
ಫೋಟೋ- ಸಿಯುಕಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಜಿಎಸ್‍ಟಿ  ವ್ಯವಹಾರಕ್ಕೆ ಮತ್ತು ಸರ್ಕಾರಕ್ಕೆ ಪ್ರಯೋಜನಗಳು ವಿಕಸಿತ ಭಾರತ ಪ್ರಯಾಣ” ಸಮ್ಮೇಳನ ಕುಲಸಚಿವ ಪ್ರೊ. ಆರ್.ಆರ್.ಬಿರಾದಾರ ಉದ್ಘಾಟಿಸಿದರು. ಸಿಎಚ್ ವಿ ಸಾಯಿ ಪ್ರಸಾದ ಇತರರು ಇದ್ದರು. ೆ | Kannada Prabha

ಸಾರಾಂಶ

ಜಿಎಸ್‍ಟಿ ಸರ್ಕಾರಕ್ಕೆ ಆದಾಯವನ್ನು ಹೆಚ್ಚಿಸುವ ಮೂಲಕ, ವ್ಯಾಪಾರ ಸಂಸ್ಥೆಗಳಿಗೆ ವ್ಯವಹಾರ ಮಾಡುವ ಸುಲಭತೆಯನ್ನು ಸುಧಾರಿಸುವ ಮೂಲಕ ಮತ್ತು ಗ್ರಾಹಕರಿಗೆ ತೆರಿಗೆ ದರವನ್ನು ಕಡಿಮೆ ಮಾಡುವ ಮೂಲಕ ಸಹಾಯ ಮಾಡಿದೆ ಎಂದು ನವದೆಹಲಿಯ ಭಾರತ ಸರ್ಕಾರದ ಐಎನ್‍ಡಿಟಿ ಮತ್ತು ಸಿಇಎ ಮಾಜಿ ನಿರ್ದೇಶಕ ಸಿಎಚ್‌ವಿ ಸಾಯಿ ಪ್ರಸಾದ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಎಸ್‍ಟಿ ಸರ್ಕಾರಕ್ಕೆ ಆದಾಯವನ್ನು ಹೆಚ್ಚಿಸುವ ಮೂಲಕ, ವ್ಯಾಪಾರ ಸಂಸ್ಥೆಗಳಿಗೆ ವ್ಯವಹಾರ ಮಾಡುವ ಸುಲಭತೆಯನ್ನು ಸುಧಾರಿಸುವ ಮೂಲಕ ಮತ್ತು ಗ್ರಾಹಕರಿಗೆ ತೆರಿಗೆ ದರವನ್ನು ಕಡಿಮೆ ಮಾಡುವ ಮೂಲಕ ಸಹಾಯ ಮಾಡಿದೆ ಎಂದು ನವದೆಹಲಿಯ ಭಾರತ ಸರ್ಕಾರದ ಐಎನ್‍ಡಿಟಿ ಮತ್ತು ಸಿಇಎ ಮಾಜಿ ನಿರ್ದೇಶಕ ಸಿಎಚ್‌ವಿ ಸಾಯಿ ಪ್ರಸಾದ್‌ ಹೇಳಿದರು.

ಕರ್ನಾಟಕ ಕೇಂದ್ರೀಯ ವಿವಿ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗ ಮತ್ತು ವಾಣಿಜ್ಯ ವಿಭಾಗವು ಧಾರವಾಡದ ಬಹುಶಿಸ್ತೀಯ ಸಂಶೋಧನಾ ಕೇಂದ್ರದ (ಸಿಎಂಡಿಆರ್) ಸಹಯೋಗದೊಂದಿಗೆ ಆಯೋಜಿಸಿದ್ದ “ಜಿಎಸ್‍ಟಿ: ಜನರಿಗೆ, ವ್ಯವಹಾರಕ್ಕೆ ಮತ್ತು ಸರ್ಕಾರಕ್ಕೆ ಪ್ರಯೋಜನಗಳು ಮತ್ತು ವಿಕಸಿತ ಭಾರತ-2047ರ ಕಡೆಗೆ ಭಾರತದ ಪ್ರಯಾಣ” ಸಮ್ಮೇಳನದಲ್ಲಿ ಮಾತನಾಡಿದರು.

ಜಿಎಸ್‍ಟಿ ಕ್ಯಾಸ್ಕೇಡಿಂಗ್ ತೆರಿಗೆಗಳನ್ನು ಕಡಿಮೆ ಮಾಡಿದೆ, ಇದು ಬೆಲೆಗಳಲ್ಲಿ ಒಟ್ಟಾರೆ ಕಡಿತಕ್ಕೆ ಕಾರಣವಾಗಿದ್ದು, ಇದು ಒಂದೇ ಸಾಮಾನ್ಯ ರಾಷ್ಟ್ರೀಯ ಮಾರುಕಟ್ಟೆಯನ್ನು ಸೃಷ್ಟಿಸಿದೆ, ಇದು ಸಣ್ಣ ತೆರಿಗೆದಾರರಿಗೆ ಪ್ರಯೋಜನವನ್ನು ನೀಡಿದೆ, ಇದು ಮಾನವ ರಹಿತ ಎಲೆಕ್ಟ್ರಾನಿಕ್ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿದೆ, ಹಾಗೇ ತೆರಿಗೆ ಆಡಳಿತವನ್ನು ಸರಳಗೊಳಿಸಿದೆ, ತೆರಿಗೆಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ ಮತ್ತು ಇದು ದೇಶೀಯ ಕೈಗಾರಿಕೆಗಳನ್ನು ರಕ್ಷಿಸಿದೆ ಎಂದು ಹೇಳಿದರು.

ಕುಲಸಚಿವರಾದ ಆರ್ ಆರ್ ಬಿರದಾರ ಸಮ್ಮೇಳನವನ್ನು ಉದ್ಘಾಟಿಸಿ, ಒಂದು ರಾಷ್ಟ್ರ, ಒಂದು ತೆರಿಗೆ, ಒಂದು ಮಾರುಕಟ್ಟೆ ಸ್ಥಾಪಿಸುವ ಉದ್ದೇಶದಿಂದ 2017ರಿಂದ ಕೇಂದ್ರ ಮತ್ತು ರಾಜ್ಯಗಳ 23 ಪರೋಕ್ಷ ತೆರಿಗೆಗಳನ್ನು ಒಗ್ಗೂಡಿಸಿ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತರಲಾಯಿತು ಎಂದರು.

ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್‍ನ ಡೀನ್ ಪ್ರೊ. ಪಾಂಡುರಂಗ ಪತ್ತಿ, ತೆರಿಗೆ ವ್ಯವಸ್ಥೆಗಳು ವ್ಯವಹಾರ ಪರಿಸರದ ಮೇಲೆ ನೇರ ಪ್ರಭಾವ ಬೀರುತ್ತವೆ. ಜಿಎಸ್‍ಟಿ ಸುಧಾರಣೆಗಳು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವಲ್ಲಿ, ವಹಿವಾಟು ವೆಚ್ಚವನ್ನು ಕಡಿಮೆ ಮಾಡುವಲ್ಲಿ ಮತ್ತು ಸ್ಪರ್ಧಾತ್ಮಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.

ಸಮ್ಮೇಳನದ ನಿರ್ದೇಶಕ ಡಾ. ಬಸವರಾಜ ಎಂ.ಎಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಜಗತ್ತಿನಲ್ಲಿ 160ಕ್ಕೂ ಹೆಚ್ಚು ದೇಶಗಳು ಜಿಎಸ್‍ಟಿಯನ್ನು ಜಾರಿಗೆ ತಂದಿವೆ. 1950ರಲ್ಲಿ ಇದನ್ನು ಜಾರಿಗೆ ತಂದ ಮೊದಲ ದೇಶ ಫ್ರಾನ್ಸ್. ಭಾರತವು ರಾಜ್ಯಗಳ ಒಕ್ಕೂಟವಾಗಿರುವುದರಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರವನ್ನು ಅವುಗಳ ತೆರಿಗೆ ಅಧಿಕಾರಗಳ ಬಗ್ಗೆ ಮನವರಿಕೆ ಮಾಡಿಕೊಡುವುದು ಸವಾಲಿನ ಕೆಲಸವಾಗಿತ್ತು. ಆದ್ದರಿಂದ ಜಿಎಸ್‍ಟಿಯನ್ನು ಜಾರಿಗೆ ತರಲು ಹತ್ತು ವರ್ಷಗಳು ಬೇಕಾಯಿತು ಎಂದರು.

ಧಾರವಾಡದ ಬಹು ಶಿಸ್ತೀಯ ಸಂಶೋಧನಾ ಕೇಂದ್ರ (ಸಿಎಂಡಿಆರ್) ಪ್ರತಿನಿಧಿ ಡಾ. ಸಿದ್ದು ವಿ. ಹೊನಗೋಡಿಮಠ ಮತ್ತು ಸಿಯುಕೆಯ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಸ್ಕೇರಿಯಾ ಮಾತನಾಡಿದರು.

ಡಾ. ಗಣಪತಿ ಬಿ ಸಿನ್ನೂರ್, ಡಾ.ಎಂ.ಜೊಹೇರ್, ಡಾ.ಎಸ್.ಲಿಂಗಮೂರ್ತಿ, ಡಾ.ಶಿವಕುಮಾರ್ ಬೆಳ್ಳಿ, ಡಾ.ಸುಜಾತ್ ಎಸ್.ಕೆ, ಡಾ.ಜಿ.ಮಹೇಂದ್ರ, ಡಾ.ಶೈಲಜಾ ಕೊನೆಕ್, ಶರಣಬಸವ ವಿಶ್ವವಿದ್ಯಾಲಯ ಮತ್ತು ಸಿಯುಕೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡಬಳ್ಳಾಪುರ: ಶಾಸನಬದ್ದವಾಗಿ ದ್ವಿಭಾಷಾ ನೀತಿ ಜಾರಿ ಅಗತ್ಯ
ಖಮೇನಿಗೆ ಕಂಬನಿ: ಪಾಲಿಕೆ ವಿರುದ್ದ ಆಕ್ರೋಶ