)
ಸರ್ಕಾರ ಬಹಳ ದಿನ ಉಳಿಯಲ್ಲ: ಆರ್. ಆಶೋಕ್ ವಾಗ್ದಾಳಿ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇದೇ ಶಿವಾನಂದ ಪಾಟೀಲ್ ಅವರು ಈ ಹಿಂದೆ ಜಾಸ್ತಿ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಪ್ರೇಮ ಪ್ರಕರಣಗಳನ್ನೂ ರೈತರ ಆತ್ಮಹತ್ಯೆ ಎಂಬಂತೆ ಬಿಂಬಿಸಲಾಗುತ್ತಿದೆ. ಮೊದಲು ಒಂದು ಲಕ್ಷ ಪರಿಹಾರ ಇತ್ತು. ಈಗ 5 ಲಕ್ಷ ರು. ಕೊಡ್ತಾರೆ. ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದರು ಎಂದು ನೆನಪಿಸಿದರು.
ಶಿವಾನಂದ ಪಾಟೀಲರು ಹಿಂದೆ ರೈತರ ಬಗ್ಗೆ ಹಗುರವಾಗಿ ಮಾತನಾಡಿದಾಗಲೂ ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಗಳಾದರೂ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು. ರೈತರನ್ನು ಕಡೆಗಣಿಸಿದ್ರೆ ರೈತರ ಶಾಪಕ್ಕೆ ಸರ್ಕಾರ ಗುರಿಯಾಗುತ್ತದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಹೇಳಿದರು.ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಸಹಜವಾಗಿ ಈ ಸರ್ಕಾರ ರೈತರ ಪರವಾದ ಸರ್ಕಾರವಲ್ಲ. ಬರಗಾಲಕ್ಕೆ ಸಂಬಂಧಪಟ್ಟಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ರೈತರನ್ನ ಅಪಮಾನ ಮಾಡು ವಂತ ಕೆಲಸ ಮಾಡುತ್ತಲೇ ಬರುತ್ತಿದೆ ಎಂದರು.
ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ಸಚಿವ ಶಿವಾನಂದ ಪಾಟೀಲರು ಹಿರಿಯರು, ಸರ್ಕಾರದಲ್ಲಿ ಬಹಳ ವರ್ಷ ಕೆಲಸ ಮಾಡಿದ ಅನುಭವಿ ಮಂತ್ರಿ. ಅವರ ಬಾಯಲ್ಲಿ ಬರುವ ಇಂತಹಾ ಮಾತು ಸಹನೀಯವಲ್ಲ. ಶಿವಾನಂದ ಪಾಟೀಲರು ಈ ಹಿಂದೆ ಮದುವೆ ಕಾರ್ಯಕ್ರಮದಲ್ಲಿ ಹಣ ತೂರಿದ್ದನ್ನು ನಾವು ನೋಡಿದ್ದೇವೆ. ಇಂಥವರು ರೈತರು ಬರ ಬರಲಿ ಎಂದು ಕಾಯುತ್ತಾರೆ ಎಂದು ಹೇಳಿರುವುದು ರೈತರಿಗೆ ಮಾಡಿರುವ ಅಪಮಾನ ಎಂದು ಹೇಳಿದರು.
ರೈತ ಮಳೆಗಾಗಿ ಕಾಯುತ್ತಾನೆ, ಇವರ ಭಿಕ್ಷೆಗೆ ಕಾಯುವುದಿಲ್ಲ. ಒಂದು ಬೆಳೆ ಬೆಳೆಸಲು ಬದುಕನ್ನು ತಪಸ್ಸಿನ ರೀತಿಯಲ್ಲಿ ಮಾಡುತ್ತಾನೆ. ರಕ್ತವನ್ನು ಬೆವರಿನಂತೆ ಹರಿಸುತ್ತಾನೆ. ಅಂತಹಾ ರೈತರಿಗೆ ಅಪಮಾನ ಮಾಡಿ ದ್ದನ್ನು ಸಹಿಸಲಾಗದು. ಇಂಥವರು ಸಚಿವ ಸ್ಥಾನದಲ್ಲಿ ಇರಲು ಅರ್ಹರಲ್ಲ. ಅವರನ್ನು ಕಿತ್ತು ಹಾಕಬೇಕು ಎಂದು ಒತ್ತಾಯಿಸಿದರು.