ಕನ್ನಡಪ್ರಭ ವಾರ್ತೆ ಬ್ಯಾಕೋಡು
ಶರಾವತಿ ಹಿನ್ನೀರಿನ ತುಮರಿ ಗೋಪಾಲಗೌಡ ರಂಗಮಂದಿರದಲ್ಲಿ ಬುಧವಾರ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗಿಂತ ಬಿಜೆಪಿ ಜನಪ್ರಿಯ ಯೋಜನೆಗಳು ಹೆಚ್ಚು ಜನಪರವಾಗಿದ್ದು, ದೇಶದ ಆರ್ಥಿಕ ಭದ್ರತೆಗೆ ಬಗ್ಗೆ ಜನರು ಯೋಚಿಸಿ ಮತದಾನ ಮಾಡಿ ಎಂದು ಸಲಹೆ ನೀಡಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಕಾಂಗ್ರೆಸ್ ಹಲವು ವರ್ಷಗಳಿಂದ ಆಡಳಿತ ಮಾಡಿದ್ದರು, ಕಾಗೋಡು ತಿಮ್ಮಪ್ಪನವರಿಗೆ ಈ ಭಾಗದ ಹಲ್ಕೆ - ಮುಪ್ಪಾನೆ ಬಳಿ ಚಿಕ್ಕ ಲಾಂಚ್ ಸೇವೆ ಒದಗಿಸಲು ಏಕೆ ಸಾಧ್ಯವಾಗಲಿಲ್ಲ.ಭಾರತೀಯ ಜನತಾ ಪಾರ್ಟಿ ದೇಶದಲ್ಲಿ ಸರ್ವರ ಏಳಿಗೆಗೆ ಶ್ರಮಿಸುವ ಪಕ್ಷವಾಗಿದ್ದು ಸೀಮೀತ ಜಾತಿಯ ಹೆಸರಿನಲ್ಲಿ ಮತ ಕೆಳಲು ಬರುವವರಿಗೆ ಮತ ನೀಡಬೇಡಿ ಎಂದು ಹೇಳಿದರು.
ಬಿಜೆಪಿ ಮುಖಂಡ ಪ್ರಸನ್ನ ಕೆರಕೈ ಮಾತನಾಡಿ, ಸಿಗಂದೂರು ಸೇತುವೆ, ನೆಟ್ವರ್ಕ್, ಸೇರಿದಂತೆ, ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯಡಿಯೂರಪ್ಪನವರ ಕೊಡುಗೆ ಅಪಾರ. ಶರಾವತಿ ನದಿಯಲ್ಲಿ ಗಣನೀಯವಾಗಿ ನೀರು ಕಡಿಮೆಯಾಗು ತ್ತಿದ್ದು, ಇನ್ನೂ ನಾಲ್ಕು ಐದು ಮೀಟರ್ ಕಡಿಮೆ ಆದರೆ ಲಾಂಚ್ ಅನ್ನು ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ದ್ವೀಪದ ಜನರಿಗೆ ತಾಲೂಕು ಕೇಂದ್ರವಾದ ಸಾಗರಕ್ಕೆ ಹೋಗಲು ಹಾಗೂ ಒಂದು ದಡದಿಂದ ಇನ್ನೊಂದು ದಡಕ್ಕೆ ದಾಟುವ ಸಲುವಾಗಿ ಈ ಹಿಂದೆ ಪ್ರವಾಸಿಗರು ಮತ್ತು ಸ್ಥಳೀಯ ನಾಗರಿಕರ ನಡುವೆ ದಿನನಿತ್ಯ ನಡೆಯುವ ಗದ್ದಲ ಗುದ್ದಾಟ, ಇವೆಲ್ಲ ಸಮಸ್ಯೆಗಳಿಗೆ ಸೇತುವೆ ಈ ಉದ್ಘಾಟನೆಯಾದ ಬಳಿಕ ವಿರಾಮ ಬೀಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಭಾರಿ ಕೆ.ಎಸ್.ಪ್ರಶಾಂತ್, ಬಿಜೆಪಿಯ ತಾಲೂಕು ಉಪಾಧ್ಯಕ್ಷ ನಾಗರಾಜ ಬೊಬ್ಬಿಗೆ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಸುವರ್ಣ ಟೀಕಪ್ಪ, ಕುದರೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸರಸ್ವತಿ. ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಗಾಯತ್ರಿ ಮಲ್ಲಪ್ಪ ಮತ್ತಿತರರು ಹಾಜರಿದ್ದರು.ಸಿಗಂದೂರು ಚೌಡೇಶ್ವರಿಗೆ ವಿಶೇಷ ಪೂಜೆ