ರಾಜಧಾನಿಯ ಪಾದಚಾರಿ ಮಾರ್ಗ, ರಸ್ತೆಗಳಲ್ಲಿ ನಾಯಿಯನ್ನು ವಾಕಿಂಗ್ ಕರೆದೊಯ್ಯುವಾಗ ನಾಯಿ ಮಲವಿಸರ್ಜನೆ ಮಾಡಿದರೆ ತ್ಯಾಜ್ಯವನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು ಎಂಬ ನಿಯಮವಿದ್ದು, ಈ ಬಗ್ಗೆ ಶ್ವಾನಗಳ ಮಾಲೀಕರಿಗೆ ವ್ಯಾಪಕ ಅರಿವು ಮೂಡಿಸಲು ಬಿಬಿಎಂಪಿ ಪಶುಸಂಗೋಪನಾ ವಿಭಾಗ ಮುಂದಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಧಾನಿಯ ಪಾದಚಾರಿ ಮಾರ್ಗ, ರಸ್ತೆಗಳಲ್ಲಿ ನಾಯಿಯನ್ನು ವಾಕಿಂಗ್ ಕರೆದೊಯ್ಯುವಾಗ ನಾಯಿ ಮಲವಿಸರ್ಜನೆ ಮಾಡಿದರೆ ತ್ಯಾಜ್ಯವನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು ಎಂಬ ನಿಯಮವಿದ್ದು, ಈ ಬಗ್ಗೆ ಶ್ವಾನಗಳ ಮಾಲೀಕರಿಗೆ ವ್ಯಾಪಕ ಅರಿವು ಮೂಡಿಸಲು ಬಿಬಿಎಂಪಿ ಪಶುಸಂಗೋಪನಾ ವಿಭಾಗ ಮುಂದಾಗಿದೆ.
ರಸ್ತೆ, ಪಾದಚಾರಿ ಮಾರ್ಗ ಸೇರಿದಂತೆ ಎಲ್ಲೆಂದರಲ್ಲಿ ನಾಯಿ ತ್ಯಾಜ್ಯ ಹೆಚ್ಚಾದ ಕಾರಣ ಮನುಷ್ಯರ ಆರೋಗ್ಯದ ದೃಷ್ಟಿಯಿಂದ ಈ ನಿಯಮವನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದು, ನಾಯಿಗಳನ್ನು ವಾಕಿಂಗ್ಗೆ ಕರೆತರುವಾಗ ಜೊತೆಯಲ್ಲಿ ಬ್ಯಾಗ್ ಸಹ ತರಬೇಕು. ನಾಯಿ ಮಲವಿಸರ್ಜನೆ ಮಾಡಿದರೆ ಅದನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು ಎಂದು ಅರಿವು ಮೂಡಿಸಲು ಈಗಾಗಲೇ ಬಿಬಿಎಂಪಿಯಿಂದ ಹಲವೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇಷ್ಟು ದಿವಸ ಈ ನಿಯಮವನ್ನು ಕಬ್ಬನ್ ಪಾರ್ಕ್ನಲ್ಲಿ ಮಾತ್ರ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು. ನಾಗರಿಕರು ಮತ್ತು ಇತರ ಪ್ರಾಣಿಗಳ ಆರೋಗ್ಯದ ಹಿತದೃಷ್ಟಿಯಿಂದಾಗಿ ನಗರದ ಶ್ವಾನಗಳ ಮಾಲೀಕರಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಬಿಬಿಎಂಪಿ ಮುಂದಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.