ಕನ್ನಡಪ್ರಭ ವಾರ್ತೆ ನಾಪೋಕ್ಲು
ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಪರದಂಡ ಸುಬ್ರಮಣಿ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.
ಈ ಸಂದರ್ಭ ಸುದೀರ್ಘ 15 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಕಾಂಡಂಡ ಜೋಯಪ್ಪ ಅವರು ನೂತನ ಸಮಿತಿಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಿ ಶುಭಕೋರಿದರು. ಅಧ್ಯಕ್ಷರಾಗಿ ಪರದಂಡ ಸುಬ್ರಮಣಿ ಕಾವೇರಿಯಪ್ಪ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಕಲ್ಯಾಟಂಡ ಟಿ. ಅಪ್ಪಣ್ಣ(ರಾಜ), ಕಾರ್ಯದರ್ಶಿಯಾಗಿ ಚೋಂದಮ್ಮ ಮೇದಪ್ಪ, ಖಜಾಂಚಿಯಾಗಿ ಅಂಜಪರವಂಡ ಕೆ. ಕುಶಾಲಪ್ಪ ಅವರನ್ನು ಆಯ್ಕೆ ಮಾಡಲಾಯಿತು.ಆಡಳಿತ ಮಂಡಳಿಯ ನಿರ್ದೇಶಕರಾಗಿ ಪರದಂಡ ಸದಾ ನಾಣಯ್ಯ, ಅನ್ನಡಿಯಂಡ ದಿಲೀಪ್ ಕುಮಾರ್, ಕಲಿಯoಡ ಎಸ್. ಗಣೇಶ್, ಕೇಲೇಟ್ಟಿರ ಎ. ರಂಜನ್, ಕಾಂಡಂಡ ಎ. ಪೂವಯ್ಯ (ಸಜನ್), ಕುಟ್ಟಂಜ್ಜೆಟ್ಟಿರ ಎಸ್ ಬೋಪಣ್ಣ (ಶ್ಯಾಮ್), ಅಪ್ಪಾರಂಡ ಪಿ. ಮಂದಣ್ಣ, ಕುಲ್ಲೇಟ್ಟಿರ ಬೇಬ (ಅರುಣ್), ಅಲ್ಲಾರಂಡ ಎಸ್.ಅಯ್ಯಪ್ಪ (ಸನ್ನು). ಪ್ರಧಾನ ಅರ್ಚಕರಾದ ಯೆಲ್ಚಿತ್ತಾಯ ಕುಶ ಭಟ್ ಮತ್ತು ದೇವಾಲಯದ ಪಾರುಪತ್ಯಗಾರ ಪರದಂಡ ಪ್ರಿನ್ಸ್ ತಮ್ಮಪ್ಪ ಅವರನ್ನು ಆಯ್ಕೆ ಮಾಡಲಾಯಿತು.