ಕನ್ನಡಪ್ರಭ ವಾರ್ತೆ ನಾಪೋಕ್ಲು
ಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕೊಡಗು ಮೂಲ ನಿವಾಸಿ ಅರಮನೆಪಾಲೆ ಸಮಾಜದ ಹತ್ತನೇ ವರ್ಷದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವೇ ಅಭಿವೃದ್ದಿಯ ಮೂಲವಾಗಿದೆ. ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಸಮುದಾಯ ಪರಸ್ಪರ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು.ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜನಿಕಂಡ ಸಿ. ಮಹೇಶ್ ನಾಚಯ್ಯ ಮಾತನಾಡಿ, ಅರಮನೆಪಾಲೆ ಸಮುದಾಯ ಬಾಂಧವರಿಗೆ ಅಕಾಡೆಮಿಯಿಂದ ಮೂಲ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಅಗತ್ಯ ಪರಿಕರ ಮತ್ತು ಕ್ರೀಡಾಕೂಟಕ್ಕಾಗಿ ಅನುದಾನವನ್ನು ಅಕಾಡೆಮಿಯಿಂದ ಒದಗಿಸಿ ಕೊಡುವುದಾಗಿ ಹೇಳಿದರು.
ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಮಾತನಾಡಿ, ಅರಮನೆಪಾಲೆ ಸಮುದಾಯ ಕೊಡಗಿನ 21 ಮೂಲನಿವಾಸಿ ಸಮುದಾಯಗಳಲ್ಲಿ ಒಂದಾಗಿದ್ದು, ವರ್ಷಂಪ್ರತಿ ಕ್ರೀಡಾಕೂಟ ಆಯೋಜಿಸುತ್ತಿರುವುದು ವಿಶೇಷ ಎಂದರು.
ಕೊಡಗು ಅರಮನೆ ಪಾಲೆ ಮೂಲ ನಿವಾಸಿಗಳ ಅಧ್ಯಕ್ಷ ಅರಮನೆ ಪಾಲೆಯರ ಜಿ. ಚೆನಿಯ್ಯ ಅಧ್ಯಕ್ಷತೆ ವಹಿಸಿದ್ದರು.
ಕಕ್ಕಬೆ, ಕುಂಜಿಲ ತಂಡ, ಕಬ್ಬಡಿ ಪಂದ್ಯಾಟಗಳಲ್ಲಿ ಪ್ರಥಮ ಸ್ಥಾನವನ್ನು ಪೆರೂರು, ನಾಪೋಕ್ಲು ತಂಡ ದ್ವಿತೀಯ ಸ್ಥಾನ, ಮಾದಾಪುರ ತಂಡ ಮಹಿಳೆಯರ ಥ್ರೋ ಬಾಲ್ ಪ್ರಥಮ ಸ್ಥಾನ, ಕಂಡಿಮಕ್ಕಿ ತಂಡ ದ್ವಿತೀಯ ಸ್ಥಾನ, ಮಹಿಳೆಯರ ಹಗ್ಗ ಜಗ್ಗಾಟ ಪ್ರಥಮ ಸ್ಥಾನ ಚೆಯ್ಯಂಡಣ್ಣೆ ತಂಡ, ದ್ವಿತೀಯ ಸ್ಥಾನವನ್ನು ಪೆರೂರು, ನಾಪೋಕ್ಲು ತಂಡ ಪಡೆದುಕೊಂಡಿತು.
ದ್ವಿತೀಯ ರಿತೇಶ್ ಪಾಲೆಮಾಡು, ಬಾಲಕಿಯರ ಓಟದ ಸ್ಪರ್ದೆ 5-7 ನೇ ತರಗತಿ
ಮಹಿಳಾ ಮತ್ತು ಪುರುಷ ವಯಸ್ಕರ ಸ್ಪರ್ಧೆಗಳಲ್ಲಿ ಶಶಿ ಚೆಯ್ಯಂಡಣ್ಣೆ ಪ್ರಥಮ, ದ್ವಿತೀಯ ದೇವಕಿ ಚೆಯ್ಯಂಡಣೆ, ಪುರುಷರ ಸ್ಪರ್ಧೆಗಳಲ್ಲಿ ರಮೇಶ್ ಬಾಳುಗೋಡು ಪ್ರಥಮ ಸ್ಥಾನ, ರವಿ ಪೆರೂರು ದ್ವಿತೀಯ ಸ್ಥಾನ ಪಡೆದುಕೊಂಡರು.
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ಕಪಿಲ್ ಕುಮಾರ್ ದುಗ್ಗಳ, ದೈಹಿಕ ಶಿಕ್ಷಣ ಶಿಕ್ಷಕ ತೇಜಸ್ ಕೊಚನ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ದೈಹಿಕ ನಿರ್ದೇಶಕ ರಮೇಶ್, ಮೂರ್ನಾಡು ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್, ನಾಗೇಶ್ ಮೂರ್ನಾಡು ಮುಂತಾದವರು ಭಾಗವಹಿಸಿದ್ದರು.
ಸಮಾಜದ ಕಾರ್ಯದರ್ಶಿ ದೇವಯ್ಯ ಹಾಕತೂರು, ಯತೀಶ್ ಬಿದ್ದಪ್ಪ ಅಧ್ಯಕ್ಷರು ಮರಣ ಧನ ಸಹಾಯ ನಿಧಿ, ಬಾಳುಗೋಡು, ರಘು ಹಾಕತೂರು ಕ್ರಿಕೆಟ್ ಪಂದ್ಯಗಳ ಕಾರ್ಯದರ್ಶಿ, ವಿವಿಧ ಗ್ರಾಮ ಸಮಿತಿ ಅಧ್ಯಕ್ಷರಾದ ಮುತ್ತಪ್ಪ ಪೆರೂರು, ಶಿವಪ್ಪ ಕಂಡಿಮಕಿ, ದೇವಯ್ಯ ಹಾಕತೂರು, ನಿಶಾನ್ ಮಾದಾಪುರ, ಪೂವಣ್ಣ ಚೆಲವಾರ, ಬೀನಾ ಆನಂದ ಚೆಯ್ಯಂಡಣ್ಣೆ, ಡಾಲು ಕುಂಜಿಲ್ಲಾ, ರಮೇಶ್ ನಾಗಬಾಣ್ಣೆ, ನಾಣಿ ಬಾಳುಗೋಡು ಮತ್ತಿತರರಿದ್ದರು.