ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಪಶ್ಚಿಮವಾನಿ ಬಳಿಯ ಕಾವೇರಿ ನದಿಯಿಂದ ಉತ್ಸವ ಮೂರ್ತಿಯನ್ನು ಮಡಿ ಮಾಡಿ ನಂತರ ಮಂಗಳವಾದ್ಯ ಸಮೇತ ಗ್ರಾಮದ ಶ್ರೀಶಂಭುಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಈಡುಗಾಯಿ ಹೊಡೆದು ಭಕ್ತರು ಪೂಜೆ ಸಲ್ಲಿಸಿದರು.
ರಾತ್ರಿಯಿಡಿ ಗ್ರಾಮದ ಪೇಟೆ ಬೀದಿ, ಕರಿಮಂಠಿ ಬೀದಿ, ಹಳ್ಳದಕೇರಿ, ಕುಂಬಾರಗೇರಿ, ಕ್ರಿಶ್ಚಿಯನ್ ಬೀದಿ, ಕಳ್ಳಿಕೊಪ್ಪಲು ಬೀದಿಗಳಲ್ಲಿ ಉತ್ಸವ ಮೆರವಣಿಗೆ ಜರುಗಿತು. ಮನೆ ಬಾಗಿಲಿಗೆ ಉತ್ಸವ ಬಂದ ವೇಳೆ ಭಕ್ತರು ಹಣ್ಣು, ಕಾಯಿ ಒಡೆದು, ಆರತಿ ಎತ್ತಿ ಪೂಜೆ ಸಲ್ಲಿಸಿದರು.ಮುಂಜಾನೆ ಶ್ರೀಶಂಭುಲಿಂಗೇಶ್ವರಸ್ವಾಮಿ ದೇವಾಲಯಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ಉತ್ಸವಕ್ಕೆ ದೇವಾಲಯದ ಅರ್ಚಕರು ಅಗ್ರ ಪೂಜೆ ಸಲ್ಲಿಸಿದರು.
ನಂತರ ಮಂಗಳವಾರ ಮುಂಜಾನೆ ದೇಗುಲದ ಮುಂದೆ ಸಿದ್ಧಪಡಿಸಿದ್ದ ಬೆಂಕಿ ಕೊಂಡವನ್ನು ದೇವರ ಗುಡ್ಡಪ್ಪ ಸೇರಿದಂತೆ ಹರಿಕೆ ಹೊತ್ತ ಭಕ್ತರು ಸೇರಿದಂತೆ ಗ್ರಾಮಸ್ಥರು ಕೊಂಡಹಾಯ್ದರು. ಕೊಂಡ ಹಾಯುವ ವೇಳೆ ನೆರೆದಿದ್ದವರು ಉಘೇ ಶಂಭುಲಿಂಗಪ್ಪ ಎಂಬ ಘೋಷಣೆ ಕೂಗಿ ದೇವರ ಪ್ರಾರ್ಥನೆ ಸಲ್ಲಿಸಿದರು.
ಕಾರೆಮೆಳೆ ಸಿಂಗಮ್ಮ ಜಾತ್ರೆಗೆ ಕಾಡಿದ ಕಗ್ಗತ್ತಲು
ಹೋಬಳಿಯ ಪ್ರಸಿದ್ಧ ಕಾರೆಮೆಳೆ ಸಿಂಗಮ್ಮನ ಜಾತ್ರೆಗೆ ವಿದ್ಯುತ್ ಇಲ್ಲದೆ ಇಡೀ ದಿನ ಕಗ್ಗತ್ತಲಿನಲ್ಲಿ ಭಕ್ತರು ಕಾಯುವಂತಾಯಿತು.
ಬೋರೆ ದೇವಿಯಮ್ಮ ಎಂದು ಕರೆಯುವ ಕಾರೆಮೆಳೆ ಸಿಂಗಮ್ಮನ ಜಾತ್ರೆಗೆ ಹೋಬಳಿಯಲ್ಲದೆ ತಾಲೂಕಿನ ವಿವಿಧ ಮೂಲೆಗಳಿಂದ ಸಾವಿರಾರು ಮಂದಿ ಭಾಗವಹಿಸಿದ್ದರು.
ಪ್ರತಿ ವರ್ಷದಂತೆ ದೇವಿಯ ಗುಡಿ ಮುಂದೆ ಗುಮಚಿಕಟ್ಟೆಯ ಬಳಿ ಕೋಳಿ ಬಲಿ ಯಾವುದೇ ಅಡೆತಡೆ ಇಲ್ಲದೆ ನಡೆಯಿತು.