ಸುಮಾರು ೧೦ ಕಿಮೀ ದೂರದ ರಾಮದುರ್ಗದ ಕೆರೆಗೆ ಹೋಗಿ ಬರಲು ದಿನನಿತ್ಯ ₹೬೦ ಖರ್ಚಾಗಿದೆ
ಕನಕಗಿರಿ: ಸಮರ್ಪಕ ನರೇಗಾ ಕೂಲಿ ಹಣ ನೀಡದ್ದಕ್ಕೆ ಆಕ್ರೋಶಗೊಂಡ ತಾಲೂಕಿನ ಹಿರೇಮಾದಿನಾಳದ ಕೂಲಿ ಕಾರ್ಮಿಕರು ಗುರುವಾರ ಚಿಕ್ಕಮಾದಿನಾಳ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹಿರೇಮಾದಿನಾಳ ಗ್ರಾಮದ ಸುಮಾರು ೪೦೦ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ನರೇಗಾ ಕಾಮಗಾರಿಯಡಿ ರಾಮದುರ್ಗದ ಕೆರೆಯಲ್ಲಿ ೧೪ ದಿನಗಳ ಕಾಲ ಹೂಳು ತೆಗೆಯುವ ಕೆಲಸ ಮಾಡಿದ್ದೇವೆ. ಆದರೆ, ಕಾರ್ಮಿಕರ ಖಾತೆಗೆ ದಿನಕ್ಕೆ₹೩೧೦ನಂತೆ ಕೂಲಿ ಹಣ ಜಮೆಯಾಗಿದೆ. ಸುಮಾರು ೧೦ ಕಿಮೀ ದೂರದ ರಾಮದುರ್ಗದ ಕೆರೆಗೆ ಹೋಗಿ ಬರಲು ದಿನನಿತ್ಯ ₹೬೦ ಖರ್ಚಾಗಿದೆ. ಸರ್ಕಾರದ ಯೋಜನೆಯಲ್ಲಿ ಕೂಲಿ ಹಣ ದಿನಕ್ಕೆ ₹೩೭೫ ಇದ್ದು, ನಮಗೆ ಕೇವಲ ₹೩೧೦ನಂತೆ ಜಮೆಯಾಗಿದೆ. ಈ ಬಗ್ಗೆ ಕೇಳಿದರೆ ನೀವು ಕೆಲಸ ಮಾಡಿದಷ್ಟು ಕೂಲಿ ದೊರೆತಿದೆ ಎಂದು ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕ ಹುಲುಗಪ್ಪ ತಳವಾರ ಆರೋಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.