ಕನ್ನಡಪ್ರಭ ವಾರ್ತೆ ಖಾನಾಪುರ
ಪಿಡಿಒಗಳ ಸಂಘದ ಜಿಲ್ಲಾಧ್ಯಕ್ಷ ಉಸ್ಮಾನ್ ನದಾಫ ಮನವಿ ಸಲ್ಲಿಸಿ ಮಾತನಾಡಿ, ಪಿಡಿಒ ಮಕ್ತುಮಸಾಬ್ ಕರಡಿಗುಡ್ಡ ಇತ್ತೀಚೆಗೆ ಅಸಹಜ ಸಾವಿಗೀಡಾಗಿದ್ದು, ಜೊತೆಗೆ ಇತ್ತೀಚೆಗೆ ಪಿಡಿಒಗಳ ಮೇಲೆ ಒತ್ತಡ ಮತ್ತು ಹಲ್ಲೆಯ ಪ್ರಕರಣಗಳು ಹೆಚ್ಚಾಗಿವೆ. ಕೆಲಸದ ಒತ್ತಡ, ರಾಜಕೀಯ ಪ್ರಭಾವ, ಮೇಲಧಿಕಾರಿಗಳ ಕಿರುಕಳ ಮತ್ತಿತರ ಕಾರಣಗಳಿಂದ ಪಿಡಿಒಗಳ ಅಸಹಜ ಸಾವು ಪ್ರಕರಣಗಳು ವರದಿಯಾಗುತ್ತಿವೆ. ಕೆಲವು ಗ್ರಾಮ ಪಂಚಾಯತಿಗಳಲ್ಲಿ ಪಿಡಿಒಗಳ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿವೆ. ಇದರಿಂದ ಪಿಡಿಒಗಳು ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸುವಂತಾಗಿದೆ. ಪಿಡಿಒಗಳ ಈ ಎಲ್ಲ ಸಮಸ್ಯೆಗಳ ಕುರಿತು ಬೆಳಗಾವಿ ಜಿಪಂ ಸಿಇಒ ಹಾಗೂ ಎಲ್ಲ ತಾಲೂಕುಗಳ ಇಒಗಳ ಮೂಲಕ ರಾಜ್ಯಪಾಲರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗುತ್ತಿದೆ. ರಾಜ್ಯಪಾಲರಿಂದ ಪಿಡಿಒಗಳಿಗೆ ನ್ಯಾಯ ಸಿಗುವ ನಿರೀಕ್ಷೆಯಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪಿಡಿಒಗಳ ಸಂಘದ ರಾಜ್ಯ ಉಪಾಧ್ಯಕ್ಷ ಜಯಗೌಡ ಪಾಟೀಲ, ರಾಜ್ಯ ಸಮಿತಿ ಸದಸ್ಯ ಆನಂದ ಹೊಳೆಣ್ಣವರ, ಜಿಲ್ಲಾ ಪರಿಷತ್ ಸದಸ್ಯೆ ಲಕ್ಷ್ಮಿ ಕಾಂಬಳೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಸ್ಸಿ, ಎಸ್ಟಿ ನೌಕರರ ಹಾಗೂ ಅಧಿಕಾರಿಗಳ ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ ಬಾಲರಾಜ ಭಜಂತ್ರಿ, ಗೌರವಾಧ್ಯಕ್ಷ ರವಿಕಾಂತ್ ಸಿ.ಎಂ ಸೇರಿದಂತೆ ವಿವಿಧ ಗ್ರಾಪಂಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ವಿಜಯಕುಮಾರ ಕೋತಿನ ಮನವಿ ಸ್ವೀಕರಿಸಿ ಮನವಿಯನ್ನು ರಾಜ್ಯಪಾಲರಿಗೆ ರವಾನಿಸುವುದಾಗಿ ತಿಳಿಸಿದರು.5ಖಾನಾಪುರ2