ನಡಗುವ ಹೆಚ್ಚಿದ ಚಳಿಗೆ ಬೆಚ್ಚಿದ ಜನತೆ

KannadaprabhaNewsNetwork |  
Published : Dec 13, 2025, 03:15 AM IST
ಚಳಿಗೆ ಬೆಂಕಿಗೆ ಕಾಯಿಸುತ್ತಿರುವ ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ರಬಕವಿ-ಬನಹಟ್ಟಿ: ತಾಲೂಕಿನ ಕನಿಷ್ಠ ತಾಪಮಾನದಲ್ಲಿ ಏರಿಳಿತ ಮುಂದುವರಿದಿದ್ದು, ಶುಕ್ರವಾರ ೧೧ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ರಬಕವಿ-ಬನಹಟ್ಟಿ: ತಾಲೂಕಿನ ಕನಿಷ್ಠ ತಾಪಮಾನದಲ್ಲಿ ಏರಿಳಿತ ಮುಂದುವರಿದಿದ್ದು, ಶುಕ್ರವಾರ ೧೧ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಗುರುವಾರ ರಾತ್ರಿಯಿಂದಲೇ ಚಳಿಯ ತೀವ್ರತೆ ಹೆಚ್ಚಿದೆ. ಶುಕ್ರವಾರ ಬೆಳಗ್ಗೆ ೧೦ ಗಂಟೆಯಾದರೂ ಚಳಿಯ ಪ್ರಮಾಣ ಕಡಿಮೆಯಾಗಿರಲಿಲ್ಲ. ಬುಧವಾರ ೧೩ ಡಿಗ್ರಿಯಷ್ಟು ವಾತಾವರಣ ಒಮ್ಮೆಲೆ ೨ ಡಿಗ್ರಿಯಷ್ಟು ಕುಸಿದ್ದರಿಂದ ಚಳಿಯ ತೀವ್ರತೆ ಹೆಚ್ಚಿದ್ದು, ಇನ್ನಷ್ಟು ಚಳಿಯ ತೀವ್ರತೆ ಹೆಚ್ಚಾಗಲಿದೆಯೆಂಬುದು ತಜ್ಞರ ಹೇಳಿಕೆಯಾಗಿದೆ. ಚಳಿಯ ಪ್ರಮಾಣ ತಗ್ಗಿಸಲು ಮನೆ ಬಳಿ ಸೇರಿದಂತೆ ಇತರೆಡೆ ಜನರು ಬೆಂಕಿ ಮೈ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗೆ ವಾಯು ವಿಹಾರಿಗಳಂತೂ ಚಳಿಯ ತೀವ್ರತೆ ಎದುರಿಸಲಾಗದೆ ನಡುಗಿದರು.

ರೈತರು ಒಟ್ಟುಗೂಡಿ ಹೊಲದಲ್ಲಿ ಬೆಂಕಿ ಹಾಕಿ ಮೈ ಕಾಯಿಸಿದರೂ, ಬೆಂಕಿ ಕಾವು ಕಡಿಮೆಯಾಗುತ್ತಿದ್ದಂತೆ ಚಳಿಯ ತೀವ್ರತೆ ಹೆಚ್ಚಾಗಿ ಎಲ್ಲರನ್ನೂ ನಡುಗಿಸುತ್ತಿದೆ. ರಬಕವಿ-ಬನಹಟ್ಟಿ ತಾಲೂಕಿನ ರೈತ ಸುಭಾಸ ಮಧುರಖಂಡಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ