ರಂಗೂಪುರ ಶಿವಕುಮಾರ್ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಟಿಜಿಟಲ್ ಸ್ಟಾರ್ಟರ್ ರಿಪೇರಿಯಾದ ಬಳಿಕ ಗುಂಡ್ಲುಪೇಟೆಗೆ ಕಬಿನಿ ನೀರು ಬಂದಿಲ್ಲ. ಕಬಿನಿ ನೀರಿಲ್ಲದೆ ಪಟ್ಟಣದ ನಾಗರೀಕರು ಪರದಾಡುತ್ತಿದ್ದಾರೆ. ಪುರಸಭೆ ನಿರ್ಲಕ್ಷ್ಯದ ಫಲವಾಗಿ ಜನ ಕಬಿನಿ ನೀರಿಲ್ಲದೆ ಇದ್ರೂ ಜಿಲ್ಲಾಡಳಿತ ಪುರಸಭೆ ನಿರ್ಲಕ್ಷ್ಯದ ಬಗ್ಗೆ ಮೃದು ದೋರಣೆ ತೋರಿದೆ ಎಂದು ನಾಗರೀಕರು ಆರೋಪಿಸಿದ್ದಾರೆ. ಡಿಜಿಟಲ್ ಸ್ಟಾರ್ಟರ್ ರಿಪೇರಿಯಾಗಿ ಬರೋಬ್ಬರಿ ಒಂದು ತಿಂಗಳಾಗುತ್ತಿದೆ. ಡಿಜಿಟಲ್ ಸ್ಟಾರ್ಟರ್ ಕೆಟ್ಟ ಬಳಿಕ ಸ್ಟಾರ್ಟರ್ ರಿಪೇರಿ ಆಗುವ ಹೆಚ್ಚುವರಿ ಸ್ಟಾರ್ಟರ್ ಹೆಚ್ಚುವರಿಯಾಗಿ ಇಟ್ಟುಕೊಂಡಿದ್ದರೆ ಪಟ್ಟಣದ ಜನತೆಗೆ ನೀರಿನ ಹಾಹಾಕಾರ ಇರುತ್ತಿರಲಿಲ್ಲ!ಸಿಂಧುವಳ್ಳಿ, ದೇಬೂರು ಡಿಜಿಟಲ್ ಸ್ಟಾರ್ಟರ್ ರಿಪೇರಿಯಾಗಿತ್ತು. 25 ದಿನಗಳಾದರೂ ರಿಪೇರಿ ಆಗಲಿಲ್ಲ. ಸ್ಟಾರ್ಟರ್ ರಿಪೇರಿ ಮಾಡುತ್ತಿದ್ದ ಗುತ್ತಿಗೆದಾರನಿಗೆ ಪುರಸಭೆ ಹಣ ನೀಡದ ಕಾರಣ ಆಕ್ರೋಶಗೊಂಡ ಗುತ್ತಿಗೆದಾರ ಕೂಡ ಮೊದಲು ರಿಪೇರಿ ಮಾಡಲಿಲ್ಲ. ನಂತರ 25 ದಿನಗಳ ನಂತರ ಗುತ್ತಿಗೆದಾರನ ಮನವೊಲಿಸಿ ಹಳೆಯ ಬಾಕಿ ಹಣ ನೀಡುತ್ತೇವೆ ಎಂದು ಭರವಸೆ ನೀಡಿದ ಬಳಿಕ 2 ಡಿಜಿಟಲ್ ಸ್ಟಾರ್ಟರ್ ರಿಪೇರಿ ಆಗಿವೆ. ರಿಪೇರಿ ಆದ ಬಳಿಕ ನೀರು ಕೂಡ ತಗ್ಗಲೂರು ಪಂಪ್ ಹೌಸ್ ಗೆ ಬಂದಿತು. ತಗ್ಗಲೂರಿನ ಡಿಜಿಟಲ್ ಸ್ಟಾರ್ಟರ್ ರಿಪೇರಿಗೊಂಡಿತು. ರಿಪೇರಿ ಆದರೂ ಮತ್ತೆ ಕೆಟ್ಟು ನಿಂತಿತು. ಈಗ ಹೊಸ ಸ್ಟಾರ್ಟರ್ ಖರೀದಿಗೆ ಟೆಂಡರ್ ಕರೆದ ಬಳಿಕ ಮಾ.15 ರಂದು ಟೆಂಡರ್ ಕೂಡ ಓಪನ್ ಆಗಿದೆ. ಹೊಸ ಸ್ಟಾರ್ಟರ್ ಖರೀದಿಸಿ ತರುವ ತನಕ ಗುಂಡ್ಲುಪೇಟೆಗೆ ಕಬಿನಿ ನೀರು ಕನಸಿನ ಮಾತೇ ಸರಿ.
ಕೆ.ಪಿ.ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ