ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
* ಹತ್ತರ ನೋಟಿನ ಕೊರತೆ ಕಾಡುತ್ತಿದ್ದರೂ ನಾಣ್ಯಗಳ ಚಲಾವಣೆಗೆ ನಿರಾಸಕ್ತಿ:ಪ್ರಸಕ್ತ ಮಾರುಕಟ್ಟೆಯಲ್ಲಿ ಆನ್ಲೈನ್ ಪೇಮೆಂಟ್ನಿಂದಾಗಿ ಸಣ್ಣ ಮೊತ್ತದ ನೋಟುಗಳು ಬಳಕೆಯಾಗುತ್ತಿರುವುದೇ ಕಡಿಮೆಯಾಗುತ್ತಿದ್ದು, ಇದರಿಂದಾಗಿ ವ್ಯಾಪಾರ ಕೇಂದ್ರಗಳಲ್ಲಿ ಹತ್ತರ ನೋಟುಗಳ ಕೊರತೆ ಕಾಡುತ್ತಿದೆ. ಈ ಸಮಯದಲ್ಲಿ ಹತ್ತರ ನಾಣ್ಯಗಳನ್ನು ನೀಡಲು ಮುಂದಾದರೆ ನಿರ್ದಾಕ್ಷಿಣ್ಯವಾಗಿ ನಾಣ್ಯ ಬೇಡವೆಂದು ತಿರಸ್ಕರಿಸುತ್ತಿರುವ ಪ್ರಸಂಗಗಳೇ ನಡೆಯುತ್ತಿದೆ. ಈ ವೇಳೆ ಗ್ರಾಹಕರೊಂದಿಗೆ ಕಾನೂನು ಮಾತನಾಡಿದರೆ ಗ್ರಾಹಕನನ್ನು ಕಳೆದುಕೊಳ್ಳಬೇಕಾಗುವುದೆಂಬ ಭೀತಿಯಿಂದ ವ್ಯಾಪಾರಿಗಳು ಅಸಹಾಯಕತೆಯಿಂದ ಮೌನ ವಹಿಸುತ್ತಾರೆ. ಈ ಕಾರಣದಿಂದ ಸರ್ಕಾರ ಚಲಾವಣೆಗೆ ತಂದಿರುವ ನಾಣ್ಯಗಳನ್ನು ವಿನಾಃ ಕಾರಣ ತಿರಸ್ಕರಿಸುವ ನಾಗರಿಕರ ನಿಲುವನ್ನು ತಿದ್ದುವ ಕಾರ್ಯ ನಡೆಯಬೇಕಾಗಿದೆ.---
ಹತ್ತರ ನೋಟು ಯಥೇಚ್ಛ ಲಭ್ಯವಿಲ್ಲ. ವ್ಯವಹಾರದಲ್ಲಿ ಮೊತ್ತವನ್ನು ಹಿಂತಿರುಗಿಸುವ ಸನ್ನಿವೇಶದಲ್ಲಿ ಹತ್ತರ ನಾಣ್ಯವನ್ನು ನೀಡಿದರೆ ಹಾವು ಕಂಡತೆ ಬೆಚ್ಚಿ ಬೀಳುತ್ತಾರೆ. ಇದು ಚಲಾವಣೆಯಾಗದ ನಾಣ್ಯವೆಂದು ಅವರೇ ವಾದಿಸುತ್ತಾರೆ. ಈ ಬಗ್ಗೆ ನಾವೆಷ್ಟೇ ಅರಿವು ಮೂಡಿಸಲು ಯತ್ನಿಸಿದರೂ ಬೇರೆ ನೋಟು ಕೊಡಿ ಎಂದು ನಮ್ಮ ಮಾತನ್ನು ಕೊನೆಗೊಳಿಸುತ್ತಾರೆ. ದಯವಿಟ್ಟು ಆಡಳಿತ ವ್ಯವಸ್ಥೆ ೧೦ ಮತ್ತು ೨೦ ರ ಚಲಾವಣೆಯಲ್ಲಿ ಜನರ ಮನದಲ್ಲಿ ಉಂಟಾಗಿರುವ ಅಪನಂಭಿಕೆಯನ್ನು ಹೋಗಲಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.। ವಿವೇಕಾನಂದ ಪ್ರಭು, ಉಪ್ಪಿನಂಗಡಿಯ ಯುವ ವರ್ತಕ
ರವಿ ಬಿ.ಎಸ್. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ