ಪೇಟೆಕೆರೆ ಭೈರವೇಶ್ವರ, ಬಂಡಿ ಚೌಡೇಶ್ವರಿ ಸುಗ್ಗಿಹಬ್ಬ

KannadaprabhaNewsNetwork |  
Published : May 06, 2024, 12:35 AM IST
೦೫ಬಿಹೆಚ್‌ಆರ್ ೨: ಬಾಳೆಹೊನ್ನೂರು  ಪೇಟೆಕೆರೆ ಬೈರವೇಶ್ವರ ಮತ್ತು ಬಂಡಿ ಚೌಡೇಶ್ವರಿ ಪರಿವಾರ ದೇವರ ಸುಗ್ಗಿಹಬ್ಬ ವಿಜೃಂಭಣೆಯಿಂದ  ನಡೆಯಿತು. | Kannada Prabha

ಸಾರಾಂಶ

ಬಾಳೆಹೊನ್ನೂರು ಪೇಟೆಕೆರೆ ಬೈರವೇಶ್ವರ ಮತ್ತು ಬಂಡಿ ಚೌಡೇಶ್ವರಿ ಪರಿವಾರ ದೇವರ ಸುಗ್ಗಿಹಬ್ಬ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಪಟ್ಟಣದ ಪೇಟೆಕೆರೆ ಭೈರವೇಶ್ವರ, ಮಾಸ್ತಮ್ಮ ಹಾಗೂ ಬಂಡಿಚೌಡೇಶ್ವರಿ ಅಮ್ಮನವರ ಹಾಗೂ ಪರಿವಾರ ದೇವತೆಗಳ ವಾರ್ಷಿಕ ಸುಗ್ಗಿಹಬ್ಬ ವಿಜೃಂಭಣೆಯಿಂದ ಭಾನುವಾರ ನಡೆಯಿತು.

ಗುರುವಾರ ಆರಂಭಗೊಂಡ ಬೈರವೇಶ್ವರ, ಮಾಸ್ತಮ್ಮ, ಮಣಬೂರು ಚೌಡಿ, ಬೆಳ್ಳಿಕಟ್ಟೆ ಚೌಡಿ, ಬಂಡಿ ಚೌಡೇಶ್ವರಿ, ಚಿಕ್ಕಮ್ಮ, ದೊಡ್ಡಮ್ಮ ದೇವರು, ನಾಗರ ಮಾದಗಿರಿ ಚೌಡಿ, ಉರಿ ಚೌಡಿ, ಜಟ್ಟಿಗ, ಕೆಂಚರ ಹುಲಿಚೌಡಿ ದೇವರುಗಳ ಸುಗ್ಗಿ ಹಬ್ಬದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.

ಸುಗ್ಗಿ ಹಬ್ಬದ ಪ್ರಯುಕ್ತ ಒಂದು ವಾರಗಳಿಗೂ ಮೊದಲೆ ಚೌತ (ವ್ರತ) ಪ್ರಾರಂಭಿಸಿದ ಗ್ರಾಮಸ್ಥರು ವಿವಿಧ ವಾದ್ಯಗೋಷ್ಠಿಗೆ ಸಂಭ್ರಮದಿಂದ ಸುಗ್ಗಿ ಕುಣಿದು ಸಂಭ್ರಮಿಸಿ, ಭಾನುವಾರ ದೇವರ ಉತ್ಸವ ಮೂರ್ತಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಭದ್ರಾನದಿಗೆ ತೆರಳಿ ಗಂಗೆ ಪೂಜೆ ಮಾಡಿ ಗಂಗೆಯನ್ನು ದೇವಸ್ಥಾನಕ್ಕೆ ತಂದು ಸುಗ್ಗಿಗದ್ದೆಯಲ್ಲಿ ಹೊಂತೆ ಹೊತ್ತಿಸಿ, ಆರತಿ ಎತ್ತಿಸಿ ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.

ದೇವಸ್ಥಾನದಲ್ಲಿ ಹರಕೆ, ದರ್ಶನ ಹಾಗೂ ಪಾತ್ರಿಯಿಂದ ಹೇಳಿಕೆ ಕೇಳಿಕೆ ನಡೆಯಿತು. ಸುಗ್ಗಿ ಹಬ್ಬದಲ್ಲಿ ಹಲಸೂರು, ಕಡ್ಲೇಮಕ್ಕಿ, ಬೈರನಮಕ್ಕಿ, ಹುಯಿಗೆರೆ, ಬನ್ನೂರು, ಮೆಣಸುಕುಡಿಗೆ ಕಾಲೋನಿ, ಸೇರಿ ಸುತ್ತ ಮುತ್ತಲಿನ ನೂರಾರು ಭಕ್ತರು ಭಾಗವಹಿಸಿ ಧಾರ್ಮಿಕ ಪೂಜಾ ವಿಧಿವಿದಾನಗಳಲ್ಲಿ ಪಾಲ್ಗೊಂಡು ಮುಡಿಗಂಧ ಪ್ರಸಾದ ಸ್ವೀಕರಿಸಿದರು. ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ