ಕನ್ನಡಪ್ರಭ ವಾರ್ತೆ ಕಾರವಾರ
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್ಗಳ ವೃತ್ತಿ, ಅವರ ಸೃಜನಶೀಲತೆ ಮತ್ತು ಸಮಾಜದಲ್ಲಿ ಛಾಯಾಚಿತ್ರಗಳ ಮಹತ್ವದ ಕುರಿತು ಚರ್ಚಿಸಲಾಯಿತು. ಛಾಯಾಗ್ರಹಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೃತ್ತಿಪರರು ಹಾಗೂ ಅವರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಮಾಜಿ ಶಾಸಕಿ ರೂಪಾಲಿ ನಾಯ್ಕ ಉದ್ಘಾಟನೆ ನೆರವೇರಿಸಿ, ಫೊಟೊಗ್ರಾಪರ್ ಗಳು ಕಷ್ಟದ ನಡುವೆಯೂ ಸಮಾಜಕ್ಕೆ ಉಪಯುಕ್ತ ಸೇವೆ ಸಲ್ಲಿಸುತ್ತಿದ್ದಾರೆ. ನಿಮ್ಮೊಂದಿಗೆ ಸದಾ ತಾವು ಇರುವುದಾಗಿ ಭರವಸೆ ನೀಡಿದರು.ನಗರಸಭೆ ಮಾಜಿ ಅಧ್ಯಕ್ಷ ರವಿರಾಜ ಅಂಕೋಲೆಕರ್, ಆರ್.ಡಿ. ಬ್ರದರ್ಸ್ನ ರಾಹುಲ್ ದೇವಿದಾಸ ನಾಯ್ಕ್, ಐಎನ್ಎಸ್ ಕದಂಬ ಅಗ್ನಿಶಾಮಕ ಠಾಣಾಧಿಕಾರಿ ಹಾಗೂ ‘ಬ್ಲಡ್ ಡೋನರ್ಸ್ ಕಾರವಾರ್’ ಸಂಸ್ಥೆಯ ಸಂಸ್ಥಾಪಕ ವಿನಾಯಕ ನಾಯ್ಕ್ ಮತ್ತು ಕನ್ನಡಪ್ರಭ ಮುಖ್ಯ ವರದಿಗಾರ ವಸಂತಕುಮಾರ ಕತಗಾಲ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್ಗಳ ವೃತ್ತಿಗೆ ಗೌರವ ಸಲ್ಲಿಸುವ ಜೊತೆಗೆ, ಅವರ ಕುಟುಂಬಗಳೊಂದಿಗೆ ಸಂಭ್ರಮ ಹಂಚಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕಾರವಾರ ತಾಲೂಕು ತಜ್ಞ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್ಗಳ ಸಂಘದ ಅಧ್ಯಕ್ಷರು ಬಾಲಚಂದ್ರ ತಾಮ್ಸೆ, ಉಪಾಧ್ಯಕ್ಷ ಶೈಲೇಶ್, ಕಾರ್ಯದರ್ಶಿ ಅಕ್ಷಯ ರೇವಂಡಿಕರ್, ಖಜಾಂಚಿ ಸೂರೇಶ ಶೇಣ್ವಿ, ದಿಲೀಪ ರೇವಣಕರ ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಇದ್ದರು.