ಮರಳು ವಾಹನಕ್ಕೆ ನವಲಿ-ಕರಡೋಣಿ ರಸ್ತೆಯಲ್ಲಿ ಹೊಂಡ

KannadaprabhaNewsNetwork |  
Published : Aug 24, 2025, 02:00 AM IST
23ುಲು12 | Kannada Prabha

ಸಾರಾಂಶ

ನವಲಿಯಿಂದ 10 ಕಿಲೋ ಮೀಟರ್‌ ದೂರದಲ್ಲಿರುವ ಕರಡೋಣಿ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಈ ರಸ್ತೆಯು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಕ್ಷೇತ್ರವಾಗಿದ್ದರೂ ಅಭಿವೃದ್ಧಿ ಮಾತ್ರ ಗೌನವಾಗಿದೆ.

ರಾಮಮೂರ್ತಿ ನವಲಿ

ಗಂಗಾವತಿ:

ಮರಳು ವಾಹನಗಳ ಸಂಚಾರದಿಂದ ನವಲಿ-ಕರಡೋಣಿ ರಸ್ತೆ ತಗ್ಗು ದಿಣ್ಣೆಗಳಿಂದ ಕೂಡಿದ್ದು ಸವಾರರು ಪರದಾಡುವಂತೆ ಆಗಿದೆ. ರಸ್ತೆ ಅಭಿವೃದ್ಧಿಗೆ ಟೆಂಡರ್‌ ಕರೆದು ಆರು ತಿಂಗಳು ಗತಿಸಿದರೂ ಕಾಮಗಾರಿ ಆರಂಭಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನವಲಿಯಿಂದ 10 ಕಿಲೋ ಮೀಟರ್‌ ದೂರದಲ್ಲಿರುವ ಕರಡೋಣಿ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಈ ರಸ್ತೆಯು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಕ್ಷೇತ್ರವಾಗಿದ್ದರೂ ಅಭಿವೃದ್ಧಿ ಮಾತ್ರ ಗೌನವಾಗಿದೆ. ಈ ಮಾರ್ಗದಲ್ಲಿ ನವಲಿ ತಾಂಡ, ಐತಿಹಾಸಿಕ ಕ್ಷೇತ್ರವಾಗಿರುವ ಭೋಗಾಪುರೇಶ ದೇಗುಲ, ಪುರದ ಕೋಟಿ ಲಿಂಗಗಳನ್ನು ಸಂಪರ್ಕಿಸಲಿದೆ.

ಮರಳು ವಾಹನಗಳ ಆರ್ಭಟ:

ಈ ರಸ್ತೆಯಲ್ಲಿ ಭಾರೀ ಗಾತ್ರದ ಮರುಳು ತುಂಬಿಕೊಂಡು ವಾಹನಗಳು ಸಂಚರಿಸುತ್ತಿರುವುದರಿಂದ ತೆಗ್ಗುಗಳು ಸೃಷ್ಟಿಯಾಗಿವೆ. ಇದೀಗ ಮಳೆ ಬಂದ ಪರಿಣಾಮ ಅದರಲ್ಲಿ ನೀರು ನಿಂತುಕೊಂಡು ಮತ್ತಷ್ಟು ಅಸ್ತವ್ಯಸ್ಥವಾಗಿವೆ. ಕ್ಯಾರಿಹಾಳ, ಉದ್ದಿಹಾಳ, ಈಚನಾಳ ಗ್ರಾಮದ ಹಳ್ಳದ ಮರಳನ್ನು ಅನಧಿಕೃತವಾಗಿ ನೂರಾರು ವಾಹನಗಳು ತುಂಬಿಕೊಂಡು ಹೋದರು ಸಂಬಂಧಿಸಿದ ಇಲಾಖೆಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಅವರಿಗೆ ಸಾಥ್‌ ನೀಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವುದು ಒಂದೆಡೆಯಾದರೆ, ಇತ್ತ ರಸ್ತೆಗಳು ಸಹ ಹಾಳಾಗುತ್ತಿವೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ ರೈತರು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರಂಭವಾಗದ ರಸ್ತೆ:

ನವಲಿ-ಕರಡೋಣಿ ರಸ್ತೆಯ ಡಾಂಬರೀಕರಣಕ್ಕಾಗಿ ಸರ್ಕಾರದಿಂದ 50-50 ಅನುದಾನದಲ್ಲಿ ₹ 2.70 ಕೋಟಿ ಮೀಸಲಿಟ್ಟು, ಲೋಕೋಪಯೋಗಿ ಇಲಾಖೆಯಿಂದ ಮಾರ್ಚ್ ತಿಂಗಳಲ್ಲಿ ಟೆಂಡರ್ ಕರೆದು ಗುತ್ತಿಗೆದಾರರಿಗೆ ಜವಾಬ್ದಾರಿ ವಹಿಸಿದೆ. ಆದರೆ, 6 ತಿಂಗಳು ಗತಿಸಿದರು ಕಾಮಗಾರಿ ಪ್ರಾರಂಭವಾಗದೆ ವಿಳಂಬಕ್ಕೆ ಕಾರಣವಾಗಿದೆ. ಇನ್ನಾದರು ಈ ಕ್ಷೇತ್ರದ ಜಿಲ್ಲಾ ಉಸ್ತುವಾರಿ ಸಚಿವರು ಈ ಗ್ರಾಮಗಳ ಕಡೆ ಗಮನ ಹರಿಸಿ ರಸ್ತೆ ಅಭಿವೃದ್ಧಿಗೆ ವೇಗ ನೀಡಬೇಕಿದೆ.ನವಲಿ-ಕರಡೋಣಿ ರಸ್ತೆಯ ಡಾಂಬರೀಕರಣಕ್ಕೆ ಮಾರ್ಚ್ ತಿಂಗಳಲ್ಲಿ ಟೆಂಡರ್‌ ಕರೆದು ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿದೆ. ಇದಕ್ಕಾಗಿ ₹ 2.70 ಕೋಟಿ ಅನುದಾನ ಮಂಜೂರಿಯಾಗಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಗಂಗಾವತಿ ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ ಹೇಳಿದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!