ಕನ್ನಡಪ್ರಭ ವಾರ್ತೆ, ತುಮಕೂರು
ದುಃಖಗಳಿಂದ ಮಾತ್ರವೇ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳಲು, ನಮ್ಮೊಳಗಿನ ಸೃಜನಶೀಲತೆಯನ್ನು ಉದ್ದೀಪಿಸಲು, ಮತ್ತೊಬ್ಬರ ನೋವಿಗೆ ಮಿಡಿಯುವಂತೆ ನಮ್ಮನ್ನು ಅಣಿಗೊಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕಿ ಕೆ.ವಿ. ವಿವೇಕ, ಮಾತಾಡುವ ದೇವರು ಕೃತಿಯನ್ನು ಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ, ಮಾನವೀಯ ಮೌಲ್ಯಗಳನ್ನು ಕನ್ನಡದ ಪ್ರಾದೇಶಿಕತೆಗೆ ಹೊಂದಿಸಿ ಅನುವಾದಿಸಲಾಗಿದೆ. ಈ ಕೃತಿ, ಕನ್ನಡದ್ದೇ ನಮ್ಮದೇ ಬದುಕಿನ ಕಥೆ ಎಂತೆ ಮೂಡಿಬಂದಿದೆ ಎಂದರು.ಅವಳಿಗೆ ಹೇಳಿ ಕೃತಿ ಕುರಿತು ಮಾತನಾಡಿದ ದರ್ಶನ್ ಎಸ್.ಆರ್. ಇವರು, ಸುತ್ತಲೂ ಕತ್ತಲೆ ಆವರಿಸಿರುವಾಗ, ಕವಿತೆ ಒಂದು ಬೆಳಕು. ನಮ್ಮ ಸುತ್ತ ಇರುವ ಶೋಷಣೆ, ದೌರ್ಜನ್ಯ, ಅಸಮಾನತೆಗಳೇ ಈ ಕತ್ತಲೆ. ಅದೇ ಬೆಳಕು. ಮೌನಕ್ಕೆ ಹೊಸ ಭಾಷ್ಯವನ್ನು ಈ ಕವಿತೆಗಳು ಕಟ್ಟಿ ಕೊಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್. ಕಲಾಧರ್, ಧನಪಾಲ್ ನಾಗರಾಜಪ್ಪ, ಮೇಘನ ಸಿ ಎಸ್., ದಾದಾಪೀರ್ ಬಿ. ಕೆ., ಅನೀಸ., ರಜಿನಿ, ರಂಜಿತ ಎಂ.ಎನ್, ಮಾನಸ ಎ.ಪಿ., ನವೀನ್ ಕುಮಾರ್ ಪಿ.ಆರ್., ಧನುಷ್ ಎಚ್ ಶೇಖರ್., ಪಾತಲಿಂಗಯ್ಯ ಡಿ.ಪಿ., ಹರಿಕೃಷ್ಣ ಕೆ.ಎಸ್., ಮಾರುತಿ ಟಿ., ಜ್ಞಾನೇಶ್ ಕೆ., ಸೇರಿದಂತೆ ಜಿಲ್ಲೆಯ ಕವಿಗಳು, ದಾರಿಬುತ್ತಿ ಹಾಗೂ ಅಂಗಳ ಟ್ರಸ್ಟ್ ನ ಸದಸ್ಯರು ಹಾಜರಿದ್ದರು.