ಚನ್ನಪಟ್ಟಣ: ನಗರದ ಬಡಾಮಖಾನ್ ದರ್ಗಾದಲ್ಲಿ ಹಜರತ್ ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ ಅವರ ಗಂಧ ಮಹೋತ್ಸವದ ಕೊನೆ ದಿನವಾದ ಶುಕ್ರವಾರ ರಾತ್ರಿ ನಡೆದ ಕವ್ವಾಲಿ ಕಾರ್ಯಕ್ರಮದಲ್ಲಿ ಆಯೋಜಕರು ಚನ್ನಪಟ್ಟಣದ ಮೂವರು ಪೊಲೀಸರನ್ನು ಸನ್ಮಾನಿಸಿ, ಅವರ ಮೇಲೆ ನೋಟು ಎರಚಿದ ಘಟನೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ ಗೌಡ ಮೂವರಿಗೂ ಷೋಕಾಸ್ ನೋಟಿಸ್ ನೀಡಿದ್ದಾರೆ.
ಚನ್ನಪಟ್ಟಣ ಟೌನ್ ಠಾಣೆಯ ಪಿಎಸ್ಐ ಹರೀಶ್ ಸಿ.ಎಂ, ಎಎಸ್ಐ ಫೈರೋಜ್ ಹಾಗೂ ಪೂರ್ವ ಠಾಣೆಯ ದುರ್ಗಪ್ಪ ಅವರನ್ನು ಸನ್ಮಾನಿಸಿದ ಆಯೋಜಕರು ಅವರ ಮೇಲೆ ನೋಟುಗಳನ್ನು ಎರುಚಿದ್ದಾರೆ.ನಾಲ್ಕು ದಿನಗಳ ಗಂಧ ಮಹೋತ್ಸವದ ಕಡೆಯ ದಿನವಾದ ಶುಕ್ರವಾರ ರಾತ್ರಿ ಕವ್ವಾಲಿ ಕಾರ್ಯಕ್ರಮವಿತ್ತು. ಅದು ಮುಗಿದ ಬಳಿಕ ಮಹೋತ್ಸವಕ್ಕೆ ಶ್ರಮಿಸಿದವರಿಗೆ ಆಯೋಜಕರು ವೇದಿಕೆಗೆ ಕರೆದು ಸನ್ಮಾನಿಸಿದ್ದು, ಅದರಂತೆ, ಮಹೋತ್ಸವಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಸಿದ ಕಾರಣಕ್ಕೆ ಮೂವರೂ ಅಧಿಕಾರಿಗಳನ್ನು ವೇದಿಕೆಗೆ ಕರೆದಿದ್ದಾರೆ. ಈ ವೇಳೆ ಪೊಲೀಸ್ ಸಮವಸ್ತ್ರದಲ್ಲಿದ್ದ ಮೂವರಿಗೂ ದೊಡ್ಡ ಹೂವಿನಹಾರ ಮತ್ತು ಟ್ರೋಫಿ ಕೊಟ್ಟು ಸನ್ಮಾನಿಸಿದ್ದು, ಇದೇ ವೇಳೆ ೨೦ರೂ.ನ ನೋಟುಗಳನ್ನು ಮೂವರ ಮೇಲೂ ಎರಚಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ಮೂವರಿಗೂ ಷೋಕಾಸ್ ನೋಟಿಸ್ ನೀಡಿದ್ದಾರೆ.
ಕೋಟ್..................ದೊಡ್ಡ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ಅಚಾತುರ್ಯಕ್ಕೆ ಅವಕಾಶವಿಲ್ಲದಂತೆ ಪೊಲೀಸರು ಬಂದೋಬಸ್ತ್ ಒದಗಿಸಿದ್ದಾರೆಂಬ ಕಾರಣಕ್ಕೆ ಅಭಿಮಾನದಿಂದ ಜನ ಸನ್ಮಾನಿಸುತ್ತಾರೆ. ಆದರೆ, ಗಂಧ ಮಹೋತ್ಸವದ ಕಡೆಯ ದಿನ ಸನ್ಮಾನಿಸಿ ಹಣ ಎರಚಿರುವುದು ತಪ್ಪು. ಘಟನೆಗೆ ಸಂಬಂಧಿಸಿದಂತೆ ಪಿಎಸ್ಐಗಳಾದ ಹರೀಶ್ ಸಿ.ಎಂ, ದುರ್ಗಪ್ಪ ಹಾಗೂ ಎಎಸ್ಐ ಫೈರೋಜ್ಗೆ ಷೋಕಾಸ್ ನೋಟಿಸ್ ನೀಡಲಾಗಿದೆ.
-ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ