ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ನಗರದಲ್ಲಿ ಜೀವನ ಆರ್ ಆರ್ ಆಸ್ಪತ್ರೆಯ ಹೊರ ರೋಗಿಗಳ ವಿಶ್ರಾಂತಿ ಕೊಠಡಿಯ ಉದ್ಘಾಟನೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನು ನೂತನ ಸಚಿವ ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗಿ ಖಾತೆಯನ್ನು ಸಮರ್ಥವಾಗಿ ಹೇಗೆ ನಿರ್ವಹಿಸುತ್ತಾರೆ ಎಂದು ನೋಡೋಣ? ಎಂದರು. ಜಿಲ್ಲೆಗೆ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಹಿರಿಯ ಸ್ತ್ರೀರೋಗ ತಜ್ಞ ಡಾ.ಐ.ಎಸ್.ರಾವ್ ರವರು ತಮ್ಮ ಜೀವನ್ ಆಸ್ಪತ್ರೆಯ ಸೇವೆಯ ಮುಂದುವರಿದ ಭಾಗವಾಗಿ, ಜೀವನ ಆರ್ ಆರ್ ಆಸ್ಪತ್ರೆ ಎಂಬ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಳನ್ನು ಒಳಗೊಂಡು ಆರಂಭ ಮಾಡಿದ್ದಾರೆ. ಈ ಆಸ್ಪತ್ರೆಯನ್ನು ಡಾ.ಐ.ಎಸ್.ರಾವ್ ರವರ ತಂದೆ ಶತಾಯುಷಿ ಐ.ಎಂ.ರಾವ್ ರವರು ಲೋಕಾರ್ಪಣೆ ಗೊಳಿಸಿದ್ದು, ಇದು ಜಿಲ್ಲೆಯ ಜನರಿಗೆ ಮತ್ತೊಂದು ಸಂತಸ ಮತ್ತು ಆರೋಗ್ಯ ರಕ್ಷಣೆಗೆ ಕೊಡುಗೆಯಾಗಿದೆ ಎಂದರು.
ಬೆಂಗಳೂರಿನಲ್ಲೂ ಇಂತಹ ಆಸ್ಪತ್ರೆ ಇಲ್ಲವೇನೋ ಎನ್ನುವ ಮಟ್ಟಿಗೆ ಕಾರ್ಪೋರೇಟ್ ಮಾದರಿಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ನೂರು ಬೆಡ್ ಆಸ್ಪತ್ರೆ ಇದಾಗಿದ್ದು 16 ಬೆಡ್ ಎನ್ ಐ ಸಿ ಯು ಕಾಲೇಜು ಘಟಕ ಹೊಂದಿರುವ ಸುಸಜ್ಜಿತ ಆಸ್ಪತ್ರೆ ಇದಾಗಿದೆ.ದ್ದು, ಇಂತಹ ಭವ್ಯವಾದ ಕಟ್ಟಡ ನಿರ್ಮಿಸಿ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿರುವ ಡಾ.ಐ.ಎಸ್.ರಾವ್ ಮತ್ತು ಡಾ. ರಾಜಲಕ್ಷ್ಮಿಯವರಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.ಆರೋಗ್ಯ ಸಮತೋಲನಕ್ಕೆ ಯೋಗ ಸಹಕಾರಿ
ಈ ವೇಳೆ ಡಾ.ಐ.ಎಸ್.ರಾವ್, ಡಾ. ರಾಜಲಕ್ಷ್ಮಿ ಮತ್ತಿತರರು ಇದ್ದರು.
ನಗರದಲ್ಲಿ ಜೀವನ ಆರ್ ಆರ್ ಆಸ್ಪತ್ರೆಯ ಹೊರ ರೋಗಿಗಳ ವಿಶ್ರಾಂತಿ ಕೊಠಡಿಯನ್ನು ಸಂಸದ ಡಾ.ಕೆ. ಸುಧಾಕರ್ ಉದ್ಘಾಟಿಸಿದರು