ಅಂಚೆ ಕಚೇರಿ ಯೋಜನೆಗಳ ಜಾಗೃತಿ ಅಭಿಯಾನ

KannadaprabhaNewsNetwork |  
Published : Feb 25, 2024, 01:46 AM IST
ಸುರಪುರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದ ಅಂಚೆ ಕಚೇರಿಯ ವಿವಿಧ ಯೋಜನೆಗಳ ಜನಜಾಗೃತಿ ಅಭಿಯಾನಕ್ಕೆ ಯಾದಗಿರಿ ಅಂಚೆ ವಿಭಾಗದ ಮುಖ್ಯಸ್ಥ ಆರ್.ಹೆಚ್. ಶಿವಾನಂದ ಚಾಲನೆ ನೀಡಿದರು. | Kannada Prabha

ಸಾರಾಂಶ

ವಿವಿಧ ಯೋಜನೆಗಳ ಜನಜಾಗೃತಿ ಅಭಿಯಾನಕ್ಕೆ ಯಾದಗಿರಿ ಅಂಚೆ ವಿಭಾಗದ ಮುಖ್ಯಸ್ಥ ಆರ್.ಹೆಚ್. ಶಿವಾನಂದ ಚಾಲನೆ.

ಕನ್ನಡಪ್ರಭ ವಾರ್ತೆ ಸುರಪುರ

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಚಾರ್ ದಿನ್‌ ಚಾರ್ ಲಾಕ್ ಯೋಜನೆಯಡಿಯಲ್ಲಿ ಎಂಡಿಜಿಯ ಪೋಸ್ಟ್ ಆಫೀಸ್ ವತಿಯಿಂದ ನಡೆದ ವಿವಿಧ ಯೋಜನೆಗಳ ಜನಜಾಗೃತಿ ಅಭಿಯಾನಕ್ಕೆ ಯಾದಗಿರಿ ಅಂಚೆ ವಿಭಾಗದ ಮುಖ್ಯಸ್ಥ ಆರ್.ಹೆಚ್. ಶಿವಾನಂದ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಪ್ರತಿ ಬಿಪಿಎಂ ಪೋಸ್ಟ್ ಮ್ಯಾನ್, ಎಂಟಿಎಸ್ ಹಾಗೂ ಬಿಪಿಎಂ, ಎಬಿಪಿಎಂ ಅವರು ತಲಾ ಮೂವತ್ತು ಹೊಸ ಖಾತೆಗಳನ್ನು ಮೂರು ದಿನಗಳಲ್ಲಿ ತೆರೆಯಬೇಕು. ಅದರಂತೆ ಸಿಬ್ಬಂದಿಗಳು ಶಕ್ತಿಮೀರಿ ಕಾರ್ಯನಿರ್ವಹಿಸಬೇಕು. ಅಂಚೆ ಯೋಜನೆಗಳು ಜನರ ಜೀವನಕ್ಕೆ ತುಂಬ ಉಪಯೋಗವಾಗಿವೆ. ಆದ್ದರಿಂದ ಅಂಚೆ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸುರಪುರದ ಪೋಸ್ಟ್ ಮಾಸ್ಟರ್ ಕುಪೇಂದ್ರ ವಠಾರ, ಲಕ್ಷ್ಮಣ ಠಾಣಗುಂದಿ, ವಿಶ್ವರಾಧ್ಯ, ಶ್ರೀದೇವಿ ಭಜಂತ್ರಿ, ಸರಸ್ವತಿ, ನೀಲಕಂಠರಾಯ ಗೌಡ, ವೈಜಿನಾಥ ಗೌಡ, ರಾಮನಗೌಡ, ಶಿವಣ್ಣ ಪೂಜಾರಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?