ಕ್ರಿಸ್ಮಸ್ ಹಿನ್ನೆಲೆ ಕ್ರೈಸ್ತ ಸಮುದಾಯವರಿಂದ ಪ್ರಾರ್ಥನೆ

KannadaprabhaNewsNetwork |  
Published : Dec 26, 2024, 01:02 AM IST
 ಚಿತ್ರ ಸುದ್ದಿ:   ಬೇಲೂರು ತಾಲೂಕು ಅರೇಹಳ್ಳಿಯ  ಸಂತ ಯೊವಾನ್ನರ ಕ್ರೈಸ್ತ ದೇವಾಲಯದಲ್ಲಿ ಕ್ರಿಸ್ಮಸ್ ಹಿನ್ನಲೆಯಲ್ಲಿ ಜರುಗಿದ ಮಹೋತ್ಸವ ಪೂಜೆಯನ್ನು ಆಧ್ಯಾತ್ಮಿಕ ಧರ್ಮಗುರು ಫಾ.ಮ್ಯಾಕ್ಸಿಮ್ ಪ್ರಬೋಧನೆ ನೀಡಿದರು | Kannada Prabha

ಸಾರಾಂಶ

ಬೇಲೂರು ತಾಲೂಕು ಅರೇಹಳ್ಳಿಯ ಸಂತ ಯೊವಾನ್ನರ ದೇವಾಲಯದಲ್ಲಿ ಕ್ರಿಸ್ಮಸ್ ಅಂಗವಾಗಿ ಮಂಗಳವಾರ ರಾತ್ರಿ ಮಹೋತ್ಸವ ಪೂಜೆ ಜರುಗಿತು. ಆಧ್ಯಾತ್ಮಿಕ ಗುರು ಫಾ. ಮ್ಯಾಕ್ಸಿಮ್ ಪ್ರಬೋಧನೆ ನೀಡಿದರು. ಕ್ರೈಸ್ತ ಭಕ್ತಾದಿಗಳು ಕುಟುಂಬ ಸಮೇತರಾಗಿ ದೇವಾಲಯಕ್ಕೆ ಆಗಮಿಸುವುದರ ಮೂಲಕ ಮಹೋತ್ಸದವ ಪೂಜೆಯಲ್ಲಿ ಪಾಲ್ಗೊಂಡರು.

ಅರೇಹಳ್ಳಿ: ಬೇಲೂರು ತಾಲೂಕು ಅರೇಹಳ್ಳಿಯ ಸಂತ ಯೊವಾನ್ನರ ದೇವಾಲಯದಲ್ಲಿ ಕ್ರಿಸ್ಮಸ್ ಅಂಗವಾಗಿ ಮಂಗಳವಾರ ರಾತ್ರಿ ಮಹೋತ್ಸವ ಪೂಜೆ ಜರುಗಿತು. ಆಧ್ಯಾತ್ಮಿಕ ಗುರು ಫಾ. ಮ್ಯಾಕ್ಸಿಮ್ ಪ್ರಬೋಧನೆ ನೀಡಿದರು. ಕ್ರೈಸ್ತ ಭಕ್ತಾದಿಗಳು ಕುಟುಂಬ ಸಮೇತರಾಗಿ ದೇವಾಲಯಕ್ಕೆ ಆಗಮಿಸುವುದರ ಮೂಲಕ ಮಹೋತ್ಸದವ ಪೂಜೆಯಲ್ಲಿ ಪಾಲ್ಗೊಂಡರು. ಈ ವೇಳೆ ನೆರೆದಿದ್ದವರು ಪರಸ್ಪರ ಅಪ್ಪಿ, ಹಸ್ತ ಲಾಘವ ಮಾಡುವುದರೊಂದಿಗೆ ಕ್ರಿಸ್ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಬುಧವಾರ ಬೆಳಗ್ಗೆ ಅರೇಹಳ್ಳಿ ಕ್ರೈಸ್ತ ದೇವಾಲಯದ ಧರ್ಮಗುರು ಫಾ.ಕಿರಣ್ ಮೆಲ್ವಿನ್ ವಿಶೇಷ ಪೂಜೆಯನ್ನು ನಡೆಸಿಕೊಟ್ಟರು. ಕ್ರೈಸ್ತ ಬಾಂಧವರು ಹೊಸ ಉಡುಗೆಗಳನ್ನು ಧರಿಸಿಕೊಂಡು ದೇವಾಲಯಕ್ಕೆ ಆಗಮಿಸಿ ಧಾರ್ಮಿಕ ಕಾರ‍್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!