ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಬೈಲಹೊಂಗಲ ಜನತೆಯ ಆಶಯದಂತೆ ವಿಜಯೋತ್ಸವ ಆಚರಣೆಗೆ ಭವ್ಯವಾದ ಪೆಂಡಾಲ್ ನಿರ್ಮಿಸುವ ಮೂಲಕ ಮಹಾಮಾತೆಯ ಶೌರ್ಯ ಸಾಹಸಗಾಥೆಗೆ ನಮನ ಸಲ್ಲಿಸುವ ಕಾರ್ಯ ಜರುಗಲಿದೆ.
ಚನ್ನಮ್ಮ ಸ್ಮರಣೋತ್ಸವ ಸಮಿತಿ ಒತ್ತಾಯಕ್ಕೆ ಮಣಿದು ನಡೆಯುತ್ತಿರುವ ಈ ಸಮಾರಂಭ ಕಣ್ತುಂಬಿಕೊಳ್ಳಲು ಜನತೆ ಕಾತರದಿಂದ ಕಾಯುತ್ತಿದ್ದಾರೆ.200 ಅಡಿ ಉದ್ದ, 80 ಅಡಿ ಅಗಲ ಅಳತೆಯಲ್ಲಿ ಪೆಂಡಾಲ್ ಹಾಕಲಾಗುತ್ತಿದ್ದು, ವಿದ್ಯುತ್ ದೀಪಾಲಂಕಾರಗೊಳಿಸಿದ 30* 45 ಅಳತೆಯ ವೇದಿಕೆಗೆ ಚನ್ನಮ್ಮನ ಜೀವನ ಚರಿತ್ರೆ ಸಂಶೋಧಕ ದೊಡ್ಡಬಾವೆಪ್ಪ ಮೂಗಿ ಅವರ ಹೆಸರಿಡಲಾಗಿದೆ. ಸುಮಾರು 10 ಸಾವಿರ ಅಸನಗಳ ವ್ಯವಸ್ಥೆ ಹೊಂದಿರಲಿದ್ದು, ಎಲ್ಇಡಿ ಪರದೆಯ ಹೊಂದಿರಲಿದೆ.
ಅಂದು ಬೆಳಗ್ಗೆ 8ಕ್ಕೆ ಚನ್ನಮ್ಮನ ವೃತ್ತದಿಂದ ಐಕ್ಯ ಸ್ಥಳದವರೆಗೆ ನೂರಾರು ಯುವಕ, ಯುವತಿಯರಿಂದ ಬೃಹತ್ ಬೈಕ್ ರ್ಯಾಲಿ ನಡೆಯಲಿದೆ. ಪೂರ್ಣ ಕುಂಭ ಹೊತ್ತ ಮಹಿಳೆಯರು, ಜಾನಪದ ಕಲಾತಂಡಗಳು ಭಾಗವಹಿಸಲಿವೆ.
ಸಂಜೆ 6.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಲಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಎಸ್ಪಿ ಡಾ.ಭಿಮಾಶಂಕರ ಗುಳ್ಳೇದ, ಜಿಪಂ ಸಿಇಒ ರಾಹುಲ್ ಶಿಂಧೆ, ಎಸಿ ಪ್ರಭಾವತಿ ಫಕೀರಪೂರ ಹಾಗೂ ಜಿಲ್ಲೆಯ ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ.
-ಪ್ರಭಾವತಿ ಫಕೀರಪೂರ, ಉಪವಿಭಾಗಾಧಿಕಾರಿಚನ್ನಮ್ಮಾಜೀ ಉತ್ಸವವನ್ನು ಮಾತೆಯ ಸಮಾಧಿ ಸ್ಥಳದಲ್ಲೂ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ನಾಡಿನೆಲ್ಲಡೆಯ ಜನತೆ ಬಂದು ಉತ್ಸವ ಪಾಲ್ಗೊಂಡು ಯಶಸ್ವಿಗೊಳಿಸಬೇಕು.
-ಮುರುಗೇಶ ಗುಂಡ್ಲೂರ ಚನ್ನಮ್ಮಾಜೀ ಸ್ಮರಣೋತ್ಸವ ಸಮಿತಿ ಅಧ್ಯಕ್ಷ