ಪ್ರಸ್ತುತ್‌ ಕೌಶಲ ಅವಶ್ಯಕ

KannadaprabhaNewsNetwork |  
Published : Jul 18, 2024, 01:36 AM IST
(ಪೊಟೋ 16ಬಿಕೆಟಿ6, ಬಾಗಲಕೋಟೆಯ ಟಿ.ಟಿ.ಸಿ. ಹಾಗೂ ಪಿ.ಎನ್.ಜಿಯಕ್ಯಾಂಪಸ್ಅಂಬಾಸಿಡರ್ ಪೂರ್ಣಿಮಾ ಮನ್ನುರಮಠ ಮಾತನಾಡಿದರು) | Kannada Prabha

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೌಶಲ ಅಭಿವೃದ್ಧಿಯ ಮಹತ್ವವನ್ನು ಅರಿಯಬೇಕಿದೆ. ತಮ್ಮ ಶೈಕ್ಷಣಿಕ ಮತ್ತು ವೃತ್ತಿ ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಕೌಶಲ್ಯಾಧಾರಿತ ಕಲಿಕೆಯನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಬಾಗಲಕೋಟೆಯ ಟಿ.ಟಿ.ಸಿ ಹಾಗೂ ಪಿ.ಎನ್.ಜಿಯ ಕ್ಯಾಂಪಸ್ ಅಂಬಾಸಿಡರ್ ಪೂರ್ಣಿಮಾ ಮನ್ನುರಮಠ ಹೇಳಿದರು.

ಬಾಗಲಕೋಟೆ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೌಶಲ ಅಭಿವೃದ್ಧಿಯ ಮಹತ್ವವನ್ನು ಅರಿಯಬೇಕಿದೆ. ತಮ್ಮ ಶೈಕ್ಷಣಿಕ ಮತ್ತು ವೃತ್ತಿ ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಕೌಶಲ್ಯಾಧಾರಿತ ಕಲಿಕೆಯನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಬಾಗಲಕೋಟೆಯ ಟಿ.ಟಿ.ಸಿ ಹಾಗೂ ಪಿ.ಎನ್.ಜಿಯ ಕ್ಯಾಂಪಸ್ ಅಂಬಾಸಿಡರ್ ಪೂರ್ಣಿಮಾ ಮನ್ನುರಮಠ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ವೃತ್ತಿ ಮಾರ್ಗದರ್ಶನ ಮತ್ತು ಕೌನ್ಸಲಿಂಗ್ ಸೆಲ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾಫ್ಟ್ ಸ್ಕಿಲ್ ವಿಷಯದ ವಿಶೇಷ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು. ತಾಳ್ಮೆ ಬಹಳ ಮುಖ್ಯ.ಅದನ್ನು ಬೆಳೆಸಿಕೊಳ್ಳುವುದು ಅವಶ್ಯಕ. ಇತ್ತೀಚಿನ ವರ್ಷಗಳಲ್ಲಿ ನಿರುದ್ಯೋಗವು ತುಲನಾತ್ಮಕವಾಗಿ ಕಡಿಮೆಯಾಗಿದ್ದರೂ ಸಹ, ಕಿರಿಯ ವೃತ್ತಿಪರರ ಉದ್ಯೋಗ ಮಾರುಕಟ್ಟೆಯು ಎಂದಿನಂತೆ ಸ್ಪರ್ಧಾತ್ಮಕವಾಗಿದೆ. ಭವಿಷ್ಯದ್ಲಿ ನಿರುದ್ಯೋಗವನ್ನು ಹೋಗಲಾಡಿಸಲು ಕೌಶಲಗಳಿಂದ ಮಾತ್ರ ಸಾಧ್ಯ. ಅತ್ಯಾಧುನಿಕ ತಾಂತ್ರಿಕ ಕೌಶಲಗಳ ಜೊತೆಗೆ ಕೆಲವು ಡೇಟಾ ಸೈನ್ಸ್‌ಗಳನ್ನು ಕಲಿತುಕೊಳ್ಳಿ, ಸಂದರ್ಶನಗಳಲ್ಲಿ ಹೇಗೆ ವರ್ತಿಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಆರ್.ಮೂಗನೂರಮಠ ಮಾತನಾಡಿ. ಇಂದಿನ ವೇಗದ ಜಗತ್ತಿನಲ್ಲಿ ಕೆಲಸದ ಸ್ಥಳದಲ್ಲಿ ಅಂಕಗಳಿಗಿಂತ ಕೌಶಲಗಳ ಜ್ಞಾನದ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ಅವರು ತಮ್ಮ ಸೃಜನಶೀಲ ಸಾಮರ್ಥ್ಯವನ್ನು ಅರ್ಥಸಿಕೊಳ್ಳುತ್ತಾರೆ. ಮಾತಾನಾಡುವ ಹಾಗೂ ಬರೆವಣಿಗೆಯಲ್ಲಿ ಕೌಶಲ ಇರಬೇಕು. ಭಾಷೆಯ ಪ್ರಭಾವದ ಹಿಂದಿನ ಧ್ವನಿ ಮೇಲೆ ಹಿಡಿತವಿರಬೇಕು. ಇನ್ನೊಬ್ಬರೊಂದಿಗೆ ಹೇಗೆ ವರ್ತಿಸಬೇಕು ಎಂಬುದು ತಿಳಿದುಕೊಳ್ಳುವುದು ಆವಶ್ಯಕವಾಗಿದ್ದು, ಮೃದು ಕೌಶಲವು ನಮ್ಮ ನೈಜತೆಯನ್ನು ಸೂಚಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಸ್.ವಿ.ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಘಟಕದ ಸಂಯೋಜಕರಾದ ಡಾ.ಎ.ಯು. ರಾಠೋಡ, ಮಾದರಿ ವಿದ್ಯಾರ್ಥಿ ವಿದ್ಯಾರ್ಥಿನಿಗಳಾದ ವಿಜಯ ಲಮಾಣಿ, ಐಶ್ವರ್ಯ ಕೊಡೆಕಲ್ಲ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ