ಯಲಬುರ್ಗಾ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರಿಂದ ಈದ್-ಮಿಲಾದ್ ಹಬ್ಬ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ತಾಲೂಕಿನ ಮುಧೋಳದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನ ಅಂಗವಾಗಿ ಮುಸ್ಲಿಂ ಸಮಾಜದ ಹಜರತ್ ಸಯ್ಯದ್ ಶಾವಲಿ ಅಂಜುಮನ್ ಕಮಿಟಿಯ ಹಾಗೂ ನೌ ಜವಾನ್ ಯೂಥ್ ಕಮಿಟಿ ಮತ್ತು ಜಾಮಿಯಾ ಮಜೀದ್ ಇವರಿಂದ ಈದ್ ಮಿಲಾದ್ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಜಾಮೀಯಾ ಮಸೀದಿಯಿಂದ ಮದಿನಾ ಸ್ತಬ್ಧ ಮೆರವಣಿಗೆ ಭಾವಚಿತ್ರದೊಂದಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಮಕ್ಕಳು, ಯುವಕರು ಸೇರಿದಂತೆ ಇತರರು ಹಬ್ಬದ ನಿಮಿತ್ತ ಝಲಸಾ ಘೋಷಣೆ ಕೂಗಿದರು.ಹಜರತ್ ಮೌಲಾನ ಆಫೀಜ್ ದಾನೇಶ್ ಖಾಜಿ ಮಾತನಾಡಿ, ಪ್ರವಾದಿ ಮುಹ್ಮದ್ ಪೈಗಂಬರರ ಜಯಂತಿ ಸಮಾಜದ ಏಕತೆ, ಶಾಂತಿ ಕಾಪಾಡುವ ಸುದಿನವಾಗಿದ್ದು ಸಮಾಜ ಸುಧಾರಣೆಯಲ್ಲಿ ಪೈಗಂಬರರ ಕೊಡುಗೆ ಅನನ್ಯವಾದದು ಮತ್ತು ಈ ಸಮಾಜದಲ್ಲಿ ಪ್ರತಿಯೊಬ್ಬರೂ ಸ್ನೇಹ, ಶಾಂತಿ ಹಾಗೂ ಸೌಹಾರ್ದತೆಯಿಂದ ಬದುಕಬೇಕು. ಪ್ರವಾದಿ ಮುಹಮ್ಮದ್ ಪೈಗಂಬರ್ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ್ದಾರೆ. ಅವರ ಆದರ್ಶ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.