ಕಾರಟಗಿ: ಜಗತ್ತಿಗೆ ಮಾನವೀಯತೆ ಬೆಳಕು ಪಸರಿಸಿದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ೧೫೦೧ ನೇ ಜನ್ಮ ದಿನಾಚರಣೆ ತಾಲೂಕಿನಾದ್ಯಂತ ಮುಸ್ಲಿಂ ಭಾಂಧವರು ಇಸ್ಲಾಂ ಧರ್ಮದ ಪವಿತ್ರ ಧಾರ್ಮಿಕ ಸ್ಥಳಗಳಾದ ಮೆಕ್ಕಾ ಹಾಗೂ ಮದೀನಾ ಸ್ಥಳಗಳ ರೂಪಕದ ಭವ್ಯ ಮೆರವಣಿಗೆಯೊಂದಿಗೆ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಈ ವೇಳೆ ಮಾಜಿ ಶಾಸಕ ಬಸವರಾಜ ದಢೇಸ್ಗೂರು ಮಾತನಾಡಿ, ಜೀವನ ಶಾಶ್ವತವಲ್ಲ. ಮರಣದ ಬಳಿಕ ಬರುವ ಜೀವನವೇ ಶಾಶ್ವತ. ಜನಸೇವೆ ಮಾಡುವ ಮೂಲಕ ದೇವರ ಪ್ರೀತಿಯಿಂದ ಗೌರವಾರ್ಹ ಸ್ಥಾನ ಗಳಿಸಲು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಮಹಮ್ಮದ್ ಪೈಗಂಬರ್. ಶಾಂತಿ, ಸೌಹಾರ್ಧತೆ, ಭ್ರಾತೃತ್ವ ಮತ್ತು ಮಾನವೀಯತೆ ಮಂತ್ರ ಸಾರಿದ ಮಹಮ್ಮದ್ ಪೈಗಂಬರ್ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದರು.
ಬಳಿಕ ಕಾಂಗ್ರೇಸ್ ಮುಖಂಡ ರವಿ ತಂಗಡಗಿ ಮಾತನಾಡಿ ಮಾತನಾಡಿ, ಪ್ರೀತಿ, ಅನುಕಂಪ, ಅತ್ಯತ್ತಮ ಒಳಿತಿನ ಮೂಲಕ ದ್ವೇಷ ಜಯಿಸಿ ತೋರಿಸದವರೇ ಪೈಗಂಬರ ಮಹಮ್ಮದ್ ರು. ಅವರ ಬದುಕಿನ ಮಹತ್ವದ ಕ್ಷಣ ಸ್ಮರಿಸುವ ಅವಕಾಶ ಇಂದು ನಮಗೆ ಒದಗಿ ಬಂದ ಸುವರ್ಣಾವಕಾಶ ಎಂದು ಸಂತಸ ವ್ಯಕ್ತಪಡಿಸಿದರು.ಪ್ರಮುಖರಾದ ಶಿವರೆಡ್ಡಿ ನಾಯಕ, ನಾಗರಾಜ ಬಿಲ್ಗಾರ ಸೇರಿದಂತೆ ಮುಸ್ಲೀಂ ಸಮಾಜದ ಪ್ರಮುಖರು ಮಾತನಾಡಿ, ಮಹಮ್ಮದ್ ಪೈಗಂಬರ್ ಕುರಿತು. ಗುಣಗಾನ ಮಾಡಿದರು.
ಈ ಪುರಸಭೆ ಮಾಜಿ ಅಧ್ಯಕ್ಷ ಶರಣೇಶ್ ಸಾಲೋಣಿ, ಉಮೇಶ್ ಭಂಗಿ, ಪ್ರಭುರಾಜ ಬೂದಿ, ಅಬ್ದುಲ್ ಗನಿ ಸಾಬ್, ಡಾ.ಎಂ.ಐ.ಮುದುಗಲ್, ಬಾಬು ಬಳಿಗಾರ್, ಜಿಲಾನಿ ಸಾಬ್ ಗುಜರಿ, ಅಮ್ಜದ್ ಕಪಾಲಿ, ಅಮೃಲ್ ಹುಸೇನ್, ಅಜಗರ್ ಮುಸ್ತಾಪಾ, ಹುಸೇನ್ ಕೆಎಸಾರ್ಟಿಸಿ, ಇನಾಯತ್, ಶಾಮಿದ್ ರಾಮನಗರ, ಜಿಲ್ಲು ಬಳಿಗಾರ್, ಗೌಸ್ ಮೋಹಿನುದ್ದಿನ್, ರಬ್ಬಾನಿ, ಮಹಮದ್ಅಲಿ ಬಳಿಗಾರ, ಹುಸೇನ್ ಭಾಷಾ, ಸಿರಾಜ್ ಹುಸೇನ್, ಮಹಿಬೂಬ್ ಮೇಸ್ತ್ರಿ, ಮೋಹಿನುದ್ದಿನ್ ಟೀ ಸ್ಟಾಲ್, ಜಹಾಂಗೀರ್ ಸಾಬ್, ಮಹಿಬುಲಿ ಬಳಿಗಾರ್, ಶಂಶುದ್ದೀನ್, ಮೇಸ್ತ್ರಿ, ಭಾಷಾ, ಮುಜಾಹಿದ್ ಕಪಾಲಿ, ರಬ್ಬಾನಿ ಪಟೇಲ್, ಹನೀಫ್ ಮೇಸ್ತ್ರಿ, ದಾದಾ ಕಲಂದರ್ ಸೇರಿದಂತೆ ವಿವಿಧ ಸಮಾಜದ ಮುಖಂಡರು ಇದ್ದರು.