ಬ್ಯಾಂಕ್ ನೌಕರರ ಹಿತರಕ್ಷಣೆಗೆ ಮೊದಲ ಆದ್ಯತೆ : ಕುಮಾರ್

KannadaprabhaNewsNetwork |  
Published : Jun 03, 2025, 12:31 AM IST
ಚಿಕ್ಕಮಗಳೂರಿನ ಕದ್ರಿಮಿದ್ರಿಯಲ್ಲಿರುವ ಜೀವನ್‌ಸಂಧ್ಯಾ ವೃದ್ಧಾಶ್ರಮಕ್ಕೆ ಕೆನರಾ ಬ್ಯಾಂಕ್ ನೌಕರರ ಸಂಘದ ವತಿಯಿಂದ 50 ಛೇರ್‌ಗಳನ್ನು ಕೊಡುಗೆಯಾಗಿ ವಿತರಿಸಲಾಯಿತು. | Kannada Prabha

ಸಾರಾಂಶ

ಚಿಕ್ಕಮಗಳೂರು, ಬ್ಯಾಂಕ್ ನೌಕರರ ಹಿತರಕ್ಷಣೆ ಜೊತೆಗೆ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಸಾಮಾಜಿಕ ಕಳಕಳಿ ಕಾರ್ಯಕ್ರಮಗಳನ್ನು ಆಯೋಜಿಸುವುದು ನೌಕರರ ಸಂಘದ ಪ್ರಮುಖ ಆದ್ಯತೆ ಆಗಿದೆ ಎಂದು ಕೆನರಾ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ರಾಜ್ಯ ಉಪಾಧ್ಯಕ್ಷ ಆರ್. ಕುಮಾರ್ ಹೇಳಿದ್ದಾರೆ.

ಜೀವನಸಂಧ್ಯಾ ವೃದ್ಧಾಶ್ರಮಕ್ಕೆ 50 ಛೇರ್ ಕೊಡುಗೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬ್ಯಾಂಕ್ ನೌಕರರ ಹಿತರಕ್ಷಣೆ ಜೊತೆಗೆ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಸಾಮಾಜಿಕ ಕಳಕಳಿ ಕಾರ್ಯಕ್ರಮಗಳನ್ನು ಆಯೋಜಿಸುವುದು ನೌಕರರ ಸಂಘದ ಪ್ರಮುಖ ಆದ್ಯತೆ ಆಗಿದೆ ಎಂದು ಕೆನರಾ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ರಾಜ್ಯ ಉಪಾಧ್ಯಕ್ಷ ಆರ್. ಕುಮಾರ್ ಹೇಳಿದ್ದಾರೆ.

ಕದ್ರಿಮಿದ್ರಿಯಲ್ಲಿರುವ ಜೀವನಸಂಧ್ಯಾ ವೃದ್ಧಾಶ್ರಮಕ್ಕೆ ಕೆನರಾ ಬ್ಯಾಂಕ್ ನೌಕರರ ಸಂಘದಿಂದ 50 ಛೇರ್‌ಗಳ ಕೊಡುಗೆ ನೀಡಿ ಮಾತನಾಡಿದ ಅವರು, ಬ್ಯಾಂಕ್‌ನ ನೌಕರರ ಸಂಘದಿಂದ ಈ ಹಿಂದೆಯೂ ವೃದ್ಧಾಶ್ರಮಕ್ಕೆ 80 ಛೇರ್‌ಗಳನ್ನು ವಿತರಿಸ ಲಾಗಿದ್ದು, ಸ್ವಾಭೀಮಾನದ ಬದುಕಿಗೆ ಆಶ್ರಯ ನೀಡಿರುವ ವೃದ್ಧಾಶ್ರಮಕ್ಕೆ ಸಂಘ ಸ್ಪಂದಿಸಿದೆ ಎಂದು ತಿಳಿಸಿದರು. ಕೆನರಾ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಮಾತನಾಡಿ, 1951 ರಲ್ಲಿ ಸ್ಥಾಪನೆಗೊಂಡ ಕೆನರಾ ಬ್ಯಾಂಕ್‌ನ ಎಂಪ್ಲಾಯಿಸ್ ಯೂನಿಯನ್ ಸುವರ್ಣ ಮಹೋತ್ಸವವನ್ನು 2001ರಲ್ಲಿ ಆಚರಿಸಿಕೊಂಡ ಸಂದರ್ಭದಲ್ಲಿ ಸಮಾಜದಲ್ಲಿ ಕಷ್ಟದಲ್ಲಿರುವ ಸಂಘ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಸಹಾಯಹಸ್ತ ನೀಡುವ ಮೂಲಕ ಸಂಘ ಕಳೆದ 25 ವರ್ಷಗಳಿಂದಲೂ ಸಂಘದ ಸದಸ್ಯರ ನೆರವಿನಿಂದಲೇ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೀವನಸಂಧ್ಯಾ ವೃದ್ಧಾಶ್ರಮದ ಖಜಾಂಚಿ ಎ.ಸಿ. ಸಂತೋಷ್ ಮಾತನಾಡಿ, ಜೀವನ ಸಂಧ್ಯಾ ವೃದ್ಧಾಶ್ರಮಕ್ಕೆ ಅಗತ್ಯವಿರುವ 80 ಛೇರ್‌ಗಳನ್ನು ಈ ಹಿಂದೆಯೇ ಕೆನರಾ ಬ್ಯಾಂಕ್ ಯೂನಿಯನ್ ನಿಂದ ನೀಡಲಾಗಿದೆ. ಮತ್ತೆ ನೌಕರರ ಸಂಘ 50 ಛೇರ್‌ಗಳನ್ನು ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವುದು ಶ್ಲಾಘನೀಯ. ಬ್ಯಾಂಕ್ ನೌಕರರ ಸಂಘ ಬೇರೆ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು. ಮೇ 20 ರಂದು ಸೇವೆಯಿಂದ ನಿವೃತ್ತರಾದ ಬ್ಯಾಂಕ್ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಕಾರ್ಯಕ್ರಮದ ಆಯೋಜಕ ಕೆ. ಆರ್. ಬಸವರಾಜ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜೀವನಸಂಧ್ಯಾ ಇನ್ನರ್ ವ್ಹೀಲ್ ಟ್ರಸ್ಟ್‌ನ ಸ್ಥಾಪಕ ಕಾರ್ಯದರ್ಶಿ ನಸ್ರುಲ್ಲಾ ಷರೀಫ್, ವೃದ್ಧಾಶ್ರಮದ ಮೇಲ್ವಿಚಾರಕ ಹರಿಸಿಂಗ್, ಕೆನರಾ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್‌ನ ಕೇಂದ್ರ ಸಮಿಸಿ ಸದಸ್ಯ ಕುಶಾಲ್‌ಕುಮಾರ್, ರಾಜ್ಯ ಸಮಿತಿ ಸದಸ್ಯರಾದ ಎಂ.ಪಿ. ಪ್ರದೀಪ್‌ಕುಮಾರ್, ಜಿ. ಉಮೇಶ್ ಹಾಗೂ ಸಂಘದ ಸದಸ್ಯರಾದ ಕೆ.ಎಚ್. ಗಣೇಶ್, ಆರ್. ಸುರೇಶ್, ಜಿ.ಎ. ಕೌಶಿಕ್. ಎಂ.ಟಿ. ಪ್ರಕಾಶ್, ಎಚ್.ಎನ್. ಮಂಜುನಾಥ್, ಅಶೋಕ್, ಪವಿತ್ರ ಉಪಸ್ಥಿತರಿದ್ದರು.

2 ಕೆಸಿಕೆಎಂ 1ಚಿಕ್ಕಮಗಳೂರಿನ ಕದ್ರಿಮಿದ್ರಿಯಲ್ಲಿರುವ ಜೀವನ್‌ಸಂಧ್ಯಾ ವೃದ್ಧಾಶ್ರಮಕ್ಕೆ ಕೆನರಾ ಬ್ಯಾಂಕ್ ನೌಕರರ ಸಂಘದಿಂದ 50 ಛೇರ್‌ಗಳನ್ನು ಕೊಡುಗೆಯಾಗಿ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!