ಮ್ಯಾಕ್ಸಿಕ್ಯಾಬ್‌ ಚಾಲಕರಿಂದ ಪ್ರತಿಭಟನೆ

KannadaprabhaNewsNetwork |  
Published : Jul 25, 2024, 01:23 AM IST
23ಡಿಡಬ್ಲೂಡಿ13ಮ್ಯಾಕ್ಸಿಕ್ಯಾಬ್ ಹಾಗೂ ಮೋಟರ್ ಕ್ಯಾಬ್ ವಾಹನಗಳಿಗೆ ಪ್ಯಾನಿಕ್ ಬಟನ್ ಜಿಪಿಎಸ್ ಸಾಧನ ಅಳವಡಿಸುವ ಆದೇಶ ರದ್ದುಪಡಿಸಬೇಕೆಂದು ಆಗ್ರಹಿಸಿ ಉತ್ತರ ಕರ್ನಾಟಕ ಮ್ಯಾಕ್ಸಿಕ್ಯಾಬ್ ಮತ್ತು ಮೋಟರ್ ಕ್ಯಾಬ್ ಚಾಲಕರ ಹಾಗೂ ಮಾಲೀಕರ ಒಕ್ಕೂಟದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಜಿಪಿಎಸ್ ಸಾಧನ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆಯ ಆದೇಶ ನುಂಗಲಾರದ ತುಪ್ಪವಾಗಿದೆ ಎಂದು ಚಾಲಕರು ಹೇಳಿದ್ದಾರೆ. ಅವೈಜ್ಞಾನಿಕ ಈ ಸಾಧನಗಳನ್ನು ಅಳವಡಿಸಲು ₹ 6 ಸಾವಿರ ವೆಚ್ಚವಾಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಧಾರವಾಡ:

ಮ್ಯಾಕ್ಸಿಕ್ಯಾಬ್ ಹಾಗೂ ಮೋಟರ್ ಕ್ಯಾಬ್ ವಾಹನಗಳಿಗೆ ಜಿಪಿಎಸ್ ಸಾಧನ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಸುವ ಆದೇಶ ರದ್ದುಪಡಿಸಬೇಕೆಂದು ಆಗ್ರಹಿಸಿ ಉತ್ತರ ಕರ್ನಾಟಕ ಮ್ಯಾಕ್ಸಿಕ್ಯಾಬ್ ಮತ್ತು ಮೋಟರ್ ಕ್ಯಾಬ್ ಚಾಲಕರ ಹಾಗೂ ಮಾಲೀಕರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಜಿಪಿಎಸ್ ಸಾಧನ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆಯ ಆದೇಶ ನುಂಗಲಾರದ ತುಪ್ಪವಾಗಿದೆ. ಅವೈಜ್ಞಾನಿಕ ಈ ಸಾಧನಗಳನ್ನು ಅಳವಡಿಸಲು ₹ 6 ಸಾವಿರ ವೆಚ್ಚವಾಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಆದರೆ, ಸಾರಿಗೆ ಇಲಾಖೆ ತಮಗೆ ಬೇಕಾದ 12 ಕಂಪನಿಗಳಿಗೆ ಈ ಯಂತ್ರ ನೀಡಲು ಟೆಂಡರ್ ನೀಡಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದರು.

ಈಗಾಗಲೇ ಸರ್ಕಾರ ಶೇ. 3ರಷ್ಟು ತೆರಿಗೆ ಹೆಚ್ಚಳ ಮಾಡಿದ್ದು, ಡೀಸೆಲ್ ದರ ಕೂಡ ಹೆಚ್ಚಿಸಲಾಗಿದೆ. ಇದರಿಂದ ಮ್ಯಾಕ್ಸಿ ಕ್ಯಾಬ್ ಹಾಗೂ ಮೋಟರ್ ಕ್ಯಾಬ್ ಅವಲಂಬಿಸಿದವರಿಗೆ ಜೀವನ ನಡೆಸುವುದು ದುಸ್ತರವಾಗಿದೆ. ಕೂಡಲೇ ಆದೇಶ ಹಿಂದಕ್ಕೆ ಪಡೆಯಬೇಕೆಂದು ಜಿಲ್ಲಾಧಿಕಾರಿ ಮೂಲಕ ಸಾರಿಗೆ ಸಚಿವ ರಾಮಲಿಂಗಾರಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಮಹೇಶ ಪಾಟೀಲ, ಜಗದೀಶ ಮೊರಬ, ಬಸವರಾಜ ಅಕ್ಕಿಮರಡಿ, ರಾಜು ಅಗಸಿನಮನಿ, ಸುರೇಶ ಬಡಗಿ, ಸತೀಶ ಪಾಟೀಲ, ಯಲ್ಲಪ್ಪ ಒಡೆಯರ, ದೇವರಾಜ ಪಾಟೀಲ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!