ಅಧ್ಯಾಪಕರು ಹೊಸ ಜ್ಞಾನ, ತಂತ್ರಜ್ಞಾನ ಕಲಿಯಬೇಕು: ಆ್ಯಂಟನಿ ಪ್ರಕಾಶ್ ಮೊಂತೇರೊ

KannadaprabhaNewsNetwork |  
Published : Aug 23, 2026, 02:45 AM IST
ಫೋಟೋ: ೨೧ಪಿಟಿಆರ್-ಫಿಲೋಮಿನಾ ಫಿಲೋಮಿನಾ ಕೃತಕ ಬುದ್ಧಿಮತ್ತೆ ಮತ್ತು ಐಸಿಟಿ ಮೂಲಕ ಬೋಧನಾ-ಕಲಿಕಾ ಪದ್ಧತಿಗಳ ಪರಿವರ್ತನೆ ಕುರಿತು ೫ ದಿನಗಳ ಎಫ್ ಡಿ ಪಿ ನಡೆಯಿತು. | Kannada Prabha

ಸಾರಾಂಶ

ಬದಲಾಗುತ್ತಿರುವ ಶಿಕ್ಷಣ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಅಧ್ಯಾಪಕರು ನಿರಂತರವಾಗಿ ಹೊಸ ಜ್ಞಾನ ಮತ್ತು ತಂತ್ರಜ್ಞಾನ ಕಲಿಯಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ವಂ.ಡಾ.ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.

ಪುತ್ತೂರು: ಬದಲಾಗುತ್ತಿರುವ ಶಿಕ್ಷಣ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಅಧ್ಯಾಪಕರು ನಿರಂತರವಾಗಿ ಹೊಸ ಜ್ಞಾನ ಮತ್ತು ತಂತ್ರಜ್ಞಾನ ಕಲಿಯಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ವಂ.ಡಾ.ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.

ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗ ಹಾಗೂ ಐಕ್ಯುಎಸಿ ಸಹಯೋಗದಲ್ಲಿ ಟ್ರಾನ್ಫಾರ್ಮಿಂಗ್ ಟೀಚಿಂಗ್ ಲರ್ನಿಂಗ್ ಪ್ರಾಕ್ಟೀಸಸ್ ಥ್ರೂ ಐಸಿಟಿ ಡ್ ಎಐ ವಿಷಯದ ಕುರಿತು ಐದು ದಿನಗಳ ಎಫ್ ಡಿ ಪಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಐದು ದಿನಗಳ ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಎಐ ಆಧಾರಿತ ಬೋಧನೆ, ವಿಷಯ ರಚನೆ, ಮೌಲ್ಯಮಾಪನ, ವಿದ್ಯಾರ್ಥಿ ತೊಡಗಿಸಿಕೊಳ್ಳುವಿಕೆ, ದೃಶ್ಯ ವಿಷಯ ರಚನೆ, ಸಂವಾದಾತ್ಮಕ ಬೋಧನೆ, ಎಐ ಅನಾಲಿಟಿಕ್ಸ್ ಹಾಗೂ ಡಿಜಿಟಲ್ ಪೋರ್ಟ್ಫೋಲಿಯೊ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು.

ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಕಂಪ್ಯೂಟರ್ ಅಪಲಿಕೇಶನ್ ವಿಭಠಾಗಗಳ ಡೀನ್ ಡಾ. ವಿನಯಚಂದ್ರ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಗೀತಾ ಪೂರ್ಣಿಮಾ ಕೆ, ಅಕ್ಷತಾ ಬಿ, ಸುರಕ್ಷಾ ಎಸ್. ಫಾತಿಮಾತ್ ಸಾನಿದ, ನಿರೀಕ್ಷಾ ಆರ್ ವಿವಿಧ ಎಐ ಅಪ್ಲಿಕೇಶನ್ ಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಅಕ್ಷತಾ ಬಿ., ರಶ್ಮಿ ವಿ. ಮತ್ತು ಚೈತನ್ಯ ತರಬೇತುದಾರರಾಗಿದ್ದರು. ಕಾರ್ಯಕ್ರಮದಲ್ಲಿ ಅಧ್ಯಾಪಕರಿಗೆ ವಿವಿಧ ಎಐ ಪರಿಕರಗಳನ್ನು ಪ್ರಾಯೋಗಿಕವಾಗಿ ಬಳಸುವ ಅವಕಾಶ ಕಲ್ಪಿಸಲಾಯಿತು.

ಪಾಠಯೋಜನೆ, ಬೋಧನಾ ಸಂಪನ್ಮೂಲಗಳು, ಮೌಲ್ಯಮಾಪನ, ದೃಶ್ಯ ವಿಷಯಗಳು ಹಾಗೂ ಡಿಜಿಟಲ್ ಪೋರ್ಟ್ಫೋಲಿಯೊಗಳನ್ನು ಸ್ವತಃ ಸಿದ್ಧಪಡಿಸುವ ಮೂಲಕ ತರಬೇತಿಯನ್ನು ಅನುಭವಾತ್ಮಕವಾಗಿ ರೂಪಿಸಲಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ.ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು, ಅಧ್ಯಾಪಕರು ಸದಾ ಹೊಸ ವಿಚಾರಗಳು ಮತ್ತು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ನಿರಂತರ ಪ್ರೋತ್ಸಾಹ: ಕಾಲೇಜಿನಲ್ಲಿ ನವೀನ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹವಿದ್ದು, ಅಧ್ಯಾಪಕರು ಕೈಗೊಳ್ಳುವ ಪ್ರತಿಯೊಂದು ಪ್ರಯತ್ನವೂ ಅಂತಿಮವಾಗಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ಉತ್ತಮ ಫಲಿತಾಂಶವನ್ನು ನೀಡಬೇಕು ಎಂದರು. ಪ್ರಾಧ್ಯಾಪಕರ ಕೌಶಲ್ಯಾಭಿವೃದ್ಧಿಗೆ ಕಾಲೇಜು ನಿರಂತರ ಪ್ರೋತ್ಸಾಹ ನೀಡುತ್ತಿದೆ ಎಂದರು.

ಕಾಲೇಜಿನ ಐಕ್ಯುಎಸಿ ಸಂಯೋಜಕರಾದ ಡಾ.ಎಡ್ವಿನ್ ಎಸ್ ಡಿಸೋಜ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು.

ಡಾ.ವಿನಯಚಂದ್ರ ವಂದಿಸಿದರು. ಡಾ. ಗೀತಾ ಪೂರ್ಣಿಮಾ ಕೆ. ಕಾರ್ಯಕ್ರಮ ನಿರೂಪಿಸಿದರು. ಎಫ್‌ಡಿಪಿಯಲ್ಲಿ ಭಾಗವಹಿಸಿದ ಡಾ. ಭಾರತಿ ಎಸ್ ರೈ, ಡಾ. ರಾಧಾಕೃಷ್ಣ ಗೌಡ ವಿ, ಜಾನ್ಸನ್ ಡೇವಿಡ್ ಸಿಕ್ವೇರಾ, ಧನ್ಯ ಪಿ ಟಿ, ತೇಜಸ್ವಿ ಭಟ್, ಹಾಗೂ ಶಿವಾನಿ ಮಲ್ಯ ಅನಿಸಿಕೆ ವ್ಯಕ್ತಪಡಿಸಿದರು. ಐದು ದಿನಗಳ ಈ ಎಫ್ ಡಿ ಪಿ ಅಧ್ಯಾಪಕರಲ್ಲಿ ತಂತ್ರಜ್ಞಾನ ಆಧಾರಿತ ಬೋಧನಾ ಕೌಶಲ್ಯ, ಎಐ ಬಳಕೆಯ ಸಾಮರ್ಥ್ಯ ಹಾಗೂ ನವೀನ ಬೋಧನಾ ವಿಧಾನಗಳ ಕುರಿತು ಅರಿವು ಹೆಚ್ಚಿಸುವಲ್ಲಿ ಮಹತ್ವದ ವೇದಿಕೆಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಲಸೌಕರ್ಯ ಅಭಿವೃದ್ಧಿ: ಆಯುಕ್ತರಿಂದ ವಿವಿಧೆಡೆ ಪರಿಶೀಲನೆ
ತಾರ್ಕಿಕ ಚಿಂತನೆಯಿಂದ ಗಣಿತ ಅರ್ಥೈಸುವಿಕೆ ಸುಲಭ: ಡಾ.ಟಿ.ಪ್ರಕಾಶ್ ಪ್ರಭು