ಮಳೆ ಹಿನ್ನೆಲೆ: ಬೋರ್‌ವೆಲ್‌ ಕೊರೆಸದಂತೆ ಸೂಚನೆ

KannadaprabhaNewsNetwork |  
Published : May 23, 2024, 01:06 AM IST

ಸಾರಾಂಶ

ಬೋರವೆಲ್ ದುರಸ್ತಿಗಾಗಿ ಅನುದಾನ ಮಂಜೂರಾತಿ ಮಾಡಲಾಗಿದ್ದು ದುರಸ್ತಿ ಪೂರ್ಣಗೊಳಿಸದ ೧೮೭ ಬೋರವೆಲ್‌ಗೆ ನೀಡಿದ ಹಣವನ್ನು ಹಿಂಪಡೆಯಲಾಗುವುದು. ಅರ್ಹ ರೈತರಿಗೆ ಬರಪರಿಹಾರ ಬಿಡುಗಡೆ

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಬರ ಪರಿಹಾರದಡಿಯಲ್ಲಿ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ೪೯೨ ಕೊಳವೆ ಬಾವಿಗಳಿಗೆ ಅನುಮೋದನೆ ನೀಡಲಾಗಿತ್ತು. ಅದರಲ್ಲಿ ಈವರೆಗೆ ೩೦೫ ಪೂರ್ಣಗೊಂಡಿದ್ದು, ೧೮೭ ಬಾಕಿ ಇವೆ. ಎಲ್ಲೆಡೆ ಇತ್ತೀಚೆಗೆ ಮಳೆಯಾಗುತ್ತಿದ್ದು, ಬೋರ್ ವೆಲ್ ಕೊರೆಯಿಸುವುದು ಸೇರಿದಂತೆ ಯಾವುದೇ ಕೆಲಸ ಮಾಡಬಾರದೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಹಾಗೂ ನಿರ್ವಹಣೆ ಮತ್ತು ಮುಂಗಾರು-ಪೂರ್ವ ಮುಂಗಾರಿನ ಸಿದ್ಧತೆ ಸಂಬಂಧ ಕೈಗೊಂಡ ಕ್ರಮದ ಬಗ್ಗೆ ಸಭೆಯಲ್ಲಿ ಮಾತನಾಡಿದರು.ಬೋರ್‌ವೆಲ್‌ ದುರಸ್ತಿಗೆ ಹಣ

ಬೋರವೆಲ್ ದುರಸ್ತಿಗಾಗಿ ಅನುದಾನ ಮಂಜೂರಾತಿ ಮಾಡಲಾಗಿದ್ದು ದುರಸ್ತಿ ಪೂರ್ಣಗೊಳಿಸದ ೧೮೭ ಬೋರವೆಲ್‌ಗೆ ನೀಡಿದ ಹಣವನ್ನು ಹಿಂಪಡೆಯಲಾಗುವುದು. ಬೋರ್‌ವೆಲ್ ದುರಸ್ತಿ ಕುರಿತು ವರದಿ ನೀಡಲು ತಾಲೂಕಾವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಅವರಿಂದ ವರದಿ ಬಂದ ಮೇಲೆ ಮಿಕ್ಕ ಹಣವನ್ನು ಮಂಜೂರು ಮಾಡಲಾಗುವುದು ಎಂದರು.

ಜಿಲ್ಲೆಯ ಒಟ್ಟು ೫೦,೩೫ ಅರ್ಹ ರೈತರುಗಳಿಗೆ ಹತ್ತು ಕಂತುಗಳಲ್ಲಿ ರೂ ೨೩.೯೩ ಕೋಟಿ ಬೆಳೆ ಪರಿಹಾರ ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ವಿತರಿಸಲಾಗಿದೆ. ಮುಂಗಾರು ಋತುವಿನಲ್ಲಿ ಜಿಲ್ಲೆಯಲ್ಲಿ ಹಾನಿಯಾಗಿರುವ ಬೆಳೆಗಳಿಗೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿ ಆಧಾರದ ಮೇರೆಗೆ ಪಹಣಿ ಜೋಡಣೆಯಾಗಿರುವ ರೈತರುಗಳಿಗೆ ನೇರ ಹಣ ಸಂದಾಯದ ಮೂಲಕ ಮಾರ್ಗಸೂಚಿ ಪ್ರಕಾರ ಬೆಳೆ ಹಾನಿ ಪರಿಹಾರವನ್ನು ವಿತರಿಸಲಾಗಿದೆ ಎಂದರು.

ಮೇವಿನ ಕೊರತೆ ಇಲ್ಲ

ಆಧಾರ್ ಕಾರ್ಡ್ ಮಿಸ್‌ಮ್ಯಾಚ್, ಆಧಾರ್ ಕಾರ್ಡ್ ಗೆ ಮ್ಯಾಪ್ ಆಗದೇ ಇರುವ, ನಿಷ್ಕ್ರಿಯವಾಗಿರುವ, ಅಮಾನ್ಯ ರುಜುವಾತು ಖಾತೆ ಹಾಗೂ ಇನ್ನಿತರ ತಾಂತ್ರಿಕ ಕಾರಣಗಳಿಂದ ೧೪೩೮ ಜನರಿಗೆ ಬರ ಪರಿಹಾರವನ್ನು ವಿತರಿಸಿಲ್ಲ. ಜಿಲ್ಲೆಯಲ್ಲಿ ಈವರೆಗೆ ೧೧೩೫೪೫ ಟನ್ ಮೇವು ಲಭ್ಯವಿದೆ. ಜಿಲ್ಲೆಗೆ ೧೩೨೮೦ ಮಿನಿ ಮೇವಿನ ಕಿಟ್ ಗಳನ್ನು ಖರೀದಿಸಿ, ೬೫೦೦ ಅರ್ಹ ರೈತರಿಗೆ ವಿತರಿಸಲಾಗಿದೆ. ಇನ್ನೂ ೨೦,೦೦೦ ಮಿನಿ ಮೇವಿನ ಕಿಟ್ ಗಳ ಖರೀದಿಗೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಕೃಷಿ ಜಂಟಿ ನಿರ್ದೇಶಕಿ ಸುಮಾ, ತೋಟಗಾರಿಕಾ ಉಪನಿರ್ದೇಶಕ ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಶ್ರೀನಿವಾಸನ್ ಇದ್ದರು.

ಕೋಟ್‌......

ಆಧಾರ್ ಕಾರ್ಡ್ ಜೋಡಣೆ ಆಗದಿರುವ, ನಿಷ್ಕ್ರಿಯವಾಗಿರುವ, ಅಮಾನ್ಯ ರುಜುವಾತು ಖಾತೆ ಹಾಗೂ ಇನ್ನಿತರ ತಾಂತ್ರಿಕ ಕಾರಣಗಳಿಂದ ೧೪೩೮ ಜನರಿಗೆ ಬರ ಪರಿಹಾರವನ್ನು ವಿತರಿಸಿಲ್ಲ.

--ಅಕ್ರಂ ಪಾಷ, ಜಿಲ್ಲಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ