ಅಣ್ಣಿಗೇರಿ:
ಇದೇ ವೇಳೆ ಶಾಸಕರು, ಮೇಲ್ಸೇತುವೆಯಿಂದ ಆಗಿರುವ ಸಮಸ್ಯೆಯನ್ನು ತಕ್ಷಣವೇ ನಿವಾರಿಸಿ ಮಳೆನೀರು ಪಟ್ಟಣದೊಳಗೆ ನುಗ್ಗದಂತೆ ಕ್ರಮಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಸೂಚಿಸಿದರು.
ಸಭೆ ಕರೆಯಿರಿ:ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿದ ಬೈಪಾಸ್ ರಸ್ತೆ, ಡಾ. ಬಿ.ಆರ್ ಅಂಬೇಡ್ಕರ್ ನಗರಗಳಿಗೆ ಗಟಾರ ಹಾಗೂ ಸರ್ವೀಸ್ ರಸ್ತೆ ನಿರ್ಮಿಸದೆ ಇರುವುದು, ರೈಲ್ವೆ ಇಲಾಖೆಯಿಂದ ಹಳ್ಳಿಕೇರಿ ರಸ್ತೆ ಹತ್ತಿರ ಅಂಡರ್ ಪಾಸ್ ಅಗಲೀಕರಣ, ನವಲಗುಂದ ರಸ್ತೆಗೆ ಮೇಲ್ಸೇತುವೆ ನಿರ್ಮಿಸುತ್ತಿರುವ ಕಾಮಗಾರಿ, ಕೊಂಡಿಕೊಪ್ಪ ಅಂಡರ್ ಪಾಸ್ ಸರಿಯಾಗಿ ಡಿಪಿಆರ್ ಮಾಡದೆ ಅವೈಜ್ಞಾನಿಕ ಕಾಮಗಾರಿ ಆರಂಭಿಸಿದ ಪರಿಣಾಮ ಪಟ್ಟಣ ಜಲಾವೃತವಾಗಿದೆ. ಹೀಗಾಗಿ ತಕ್ಷಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಪಟ್ಟಣಕ್ಕೆ ನೀರು ಬರದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು. ಜತೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಬಾಕಿ ಉಳಿದ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕೋನರಡ್ಡಿ ಸೂಚಿಸಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಶಿವಾನಂದ ಬೆಳಗಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಎನ್ಎಚ್ಐ ಅಧಿಕಾರಿ ಭುವನೇಶಕುಮಾರ, ರೈಲ್ವೆ ಅಧಿಕಾರಿ ಶ್ರೀಕಾಂತ, ಬಸವರಾಜ ಹುಬ್ಬಳ್ಳಿ, ರಾಷ್ಟ್ರೀಯ ಹೆದ್ದಾರಿ ಕಾರ್ಯನಿರ್ವಾಹಕ ಎಂಜೀನಿಯರ್ ವಿ.ಎನ್. ಪಾಟೀಲ, ಎಇಇ ಸತೀಶ ನಾಗನೂರ, ಸೋಮನಗೌಡ ಪಾಟೀಲ, ತಹಸೀಲ್ದಾರ್ ಮಂಜುನಾಥ ದಾಸಪ್ಪನವರ ಸೇರಿ ಹಲವರಿದ್ದರು.