ಕನ್ನಡಪ್ರಭ ವಾರ್ತೆ ಹಲಗೂರು
ಮಂಗಳವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ಮಹಾಸಂಕಲ್ಪ, ರಕ್ಷಾಬಂಧನ, ಪಂಚಗವ್ಯ, ಅಂಕುರಾರ್ಪಣ ವಾಸ್ತು ಪೂಜಾ, ಹವನ, ಬಲಿ, ರಕ್ಷಣಾ ಹೋಮ, ದಿಕ್ ಬಲಿ, ಋತ್ವಿಕ್ ವರಣ ಯಾಗ ಶಾಲಾ ಪ್ರವೇಶ, ಪ್ರಸಾದ ಶುದ್ದಿ, ಪರ್ಯಗ್ನಿ ಕರಣ ಕಾರ್ಯಕ್ರಮ ನಡೆದ ನಂತರ ನೆರದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ಜೂ.4ರ ಬೆಳಗ್ಗೆ ಗಂಗಾ ಪೂಜೆ, ನೂತನ ಬಿಂಬಗಳಿಗೆ ನೇತ್ರೋನ್ಮಿಲನ, ಬಿಂಬ ಶುದ್ಧಿ, ಜಲಾಧಿವಾಸ ಧಾನ್ಯದಿವಾಸ, ಚತುರ್ ದ್ವಾರಾರ್ಚನೆ, ವೇದ ಪಾರಾಯಣ, ಪೂರ್ವಕ ವೇದಿಕಾರ್ಚನೆ ಕಳಶಾರಾಧನೆ ಅಗ್ನಿ ಪ್ರತಿಷ್ಠೆ, ಪ್ರತಿಷ್ಠ ಹೋಮ, ಆರಂಭ, ಗಣಪತಿ, ನವಗ್ರಹ ಹವನ ನಡೆಸಿ ಸಂಜೆ ದುರ್ಗಾ ದೀಪ ನಮಸ್ಕಾರ ಆಧಿವಾಸ ಹೋಮ, ಅಸ್ತ್ರ ಹೋಮ, ಪ್ರತಿಷ್ಠಾಂಗ ಶೋಡಷ ರತ್ನ ನ್ಯಾಸ, ಮಂತ್ರನ್ಯಾಸ, ಗರ್ಭನ್ಯಾಸ, ಹೋಮ ನಡೆಸಿ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.ಜೂ.5ರ ಬೆಳಗ್ಗೆ ಯಾಗಶಾಲಾರ್ಚನೆ, ಪ್ರತಿಷ್ಠ ದೇವತ ಹೋಮ, ಭೂತ ಶುದ್ಧಿ ಪೂರ್ವಕವಾಗಿ ಗರ್ಭಗೃಹದಲ್ಲಿ ಬಿಂಬಗಳಿಗೆ ಪ್ರಾಣ ಪ್ರತಿಷ್ಠೆ, ನಾಡಿ ಸಂಧಾನ, ಕಲಾಹೋಮ ತತ್ವ ಹೋಮ, ತತ್ ನ್ಯಾಸಗಳು ಪ್ರಾಯಶ್ಚಿತ ಹೋಮ, ನಂತರ ಪೂರ್ಣಾಹುತಿ ಯಾಗ ಶಾಲಾಸ್ಥಿತ ಕಳಸಗಳ ಉತ್ತರ ಪೂಜೆ, ಕುಂಭಾಭಿಷೇಕ ಅಭಿಷೇಕಗಳು ಮತ್ತು ದೇವರಿಗೆ ಅಲಂಕಾರ, ನೈವೇದ್ಯ, ಮಹಾ ಮಂಗಳಾರತಿ, ಗೋಪೂಜೆ, ಸಭಾ ವಂದನೆ, ಮುಗಿದ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಲಿದೆ.