ಉಡುಪಿ: ಮಟ್ಕ ದಂಧೆ ಮೇಲೆ ದಾಳಿ, 12 ಬುಕ್ಕಿಗಳು ಅಂದರ್‌

KannadaprabhaNewsNetwork |  
Published : Jun 04, 2025, 12:31 AM IST
೩೨ | Kannada Prabha

ಸಾರಾಂಶ

ಜಿಲ್ಲೆಗೆ ಹೊಸ ಎಸ್ಪಿಯಾಗಿ ಹರಿರಾಮ್ ಶಂಕರ್ ಅಧಿಕಾರ ಸ್ವೀಕರಿಸುತಿದ್ದಂತೆ, ಕಾನೂನುಬಾಹಿರ ಮಟ್ಕಾ ದಂಧೆಯ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರಂತೆ ಸೋಮವಾರ 12 ಮಂದಿ ಮಟ್ಕಾ ಬುಕ್ಕಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಗೆ ಹೊಸ ಎಸ್ಪಿಯಾಗಿ ಹರಿರಾಮ್ ಶಂಕರ್ ಅಧಿಕಾರ ಸ್ವೀಕರಿಸುತಿದ್ದಂತೆ, ಕಾನೂನುಬಾಹಿರ ಮಟ್ಕಾ ದಂಧೆಯ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರಂತೆ ಸೋಮವಾರ 12 ಮಂದಿ ಮಟ್ಕಾ ಬುಕ್ಕಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಹಿರಿಯಡ್ಕ ಸಮೀಪದ ಪಂಚನಬೆಟ್ಟು ಗ್ರಾಮದ ಪ್ರಕಾಶ್‌ ಮೂಲ್ಯ (43), ಕೊಡವೂರು ಗ್ರಾಮದ ರತ್ನಾಕರ ಅಮೀನ್ (48), ಬಡಗುಬೆಟ್ಟು ಗ್ರಾಮದ ಇಂದಿರಾನಗರದ ನಾಗೇಶ್ (56) ಬ್ರಹ್ಮಾವರದ ಕಾರ್ಕಡ ಗ್ರಾಮದ ವಿಜಯ ನಾಯರಿ (50), ಚೇರ್ಕಾಡಿ ಗ್ರಾಮದ ದಿವಾಕರ ಪೂಜಾರಿ (42), ಉಡುಪಿಯ ಮಠದಬೆಟ್ಟು ನಿವಾಸಿ ರಾಮ್‌ರಾಜ್‌ (44) ಕುಂಜಿಬೆಟ್ಟು ನಿವಾಸಿ ಜಗದೀಶ್‌ (39) ಮೂಲತಃ ಕೊಪ್ಪಳ ಜಿಲ್ಲೆಯವರಾಗಿದ್ದು ಪ್ರಸ್ತುತ ಉಡುಪಿಯ ಅಂಬಾಗಿಲಿನ ನಿವಾಸಿ ಚಿದಾನಂದ (35) ಕೊಡವೂರು ಗ್ರಾಮದ ತಿಪ್ಪೆಸ್ವಾಮಿ (52) ಸಂತೆಕಟ್ಟೆ ನಿವಾಸಿ ರಾಘವೇಂದ್ರ (41) ಉಡುಪಿ ಪುತ್ತೂರಿನ ಉದಯ ಎಸ್‌. ಭಂಡಾರಿ (45) ಮತ್ತು ಕಾಪು ತಾಲೂಕಿನ ಬಡಾ ಗ್ರಾಮದ ಮನೋಜ್ ಕುಮಾರ್(39) ಎಂದವರೇ ಜೈಲು ಸೇರಿದ ಮಟ್ಟಾ ದಂಧೆಕೋರರು.ಭಾನುವಾರ ಶಿರ್ವದಲ್ಲಿ ವಿಠಲ ದೇವಾಡಿಗ ಎಂಬ ಮಟ್ಕ ಬುಕ್ಕಿಯನ್ನು ಪೊಲೀಸರು ಬಂಧಿಸಿದ್ದರು. ಆತ ತನ್ನ ಸಹವರ್ತಿಗಳಾದ ಈ 12 ಮಂದಿ ಮಟ್ಕಾ ಬುಕ್ಕಿಗಳ ಹೆಸರು ಹೇಳಿದ್ದು, ಅದರಂತೆ ಅವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ