ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನ ಉಕ್ಕಡಗಾತ್ರಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ದೇವಸ್ಥಾನ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಹಾತ್ಮರು ಸಮಾಜದ ಒಳಿತಿಗಾಗಿಯೇ ಧಾರೆ ಎರೆದ ತಪೋಭೂಮಿ ಬಾರತ ದೇಶ. ಹುಟ್ಟು ಮತ್ತು ಸಾವಿನ ನಡುವೆ ಜೀವವೆಂಬ ದೀಪ ಇತರರಿಗೆ ಬೆಳಕಿನ ದಾರಿ ತೋರಿಸಿ ಸಾರ್ಥಕ್ಯ ಪಡೆಯಬೇಕು. ಈ ಜಗತ್ತಿಗೆ ರಾಮನ ಆದರ್ಶವನ್ನು ತಿಳಿಸಿದ ಮಹರ್ಷಿ ವಾಲ್ಮೀಕಿ ಎಂದೆಂದಿಗೂ ಅಜರಾಮರ ಎಂದು ತಿಳಿಸಿದರು.ರಟ್ಟಿಹಳ್ಳಿ ಕಬ್ಬಿಣ ಕಂತಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀ ಮಾತನಾಡಿ, ರಾಮ ಮತ್ತು ರಾಮಾಯಣ ವಾಲ್ಮೀಕಿಯ ರಚನೆ ಜಗತ್ತಿಗೆ ನೀಡಿದ ಕೊಡುಗೆಯಾಗಿದೆ. ಕ್ರೂರ ಮಾನವತ್ವ ಹೊಂದಿದ ವ್ಯಕ್ತಿ ದೈವತ್ವವನ್ನು ಪಡೆದು ಮಹರ್ಷಿ ವಾಲ್ಮೀಕಿಯಾದ. ಸುಸಂದರ್ಭದಲ್ಲಿ ಗುರುವಿನ ಮಾರ್ಗದರ್ಶನದಿಂದ ಎಲ್ಲವೂ ಸಾಧ್ಯ. ಗುರು ಪರಂಪರೆಯೇ ಇಂದಿನ ಪ್ರತಿಷ್ಠಾಪನೆ ಎಂದರು.
ಶಾಸಕ ಬಿ.ಪಿ. ಹರೀಶ್ ದೇವಸ್ಥಾನ ಉದ್ಘಾಟಿಸಿದರು. ಹರಿಹರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಶಾಸಕ ಎಸ್ ರಾಮಪ್ಪ ಮೆರವಣಿಗೆ ಉದ್ಘಾಟಿಸಿದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಿಗಳಿ ಆನಂದಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ. ಕುಬೇರಪ್ಪ, ಡಾ ಎನ್ ನಾಗರಾಜ್ ಜಿಗಳಿ, ಸೋಮಣ್ಣ ದಾಸರ, ಬಿ ಎಂ ವಾಗೀಶ ಸ್ವಾಮಿ, ಕೆ ಆರ್ ರಂಗಪ್ಪ, ಪಾರ್ವತಿ, ಇತರರು ಇದ್ದರು.