ರಾಣಿ ಚೆನ್ನಮ್ಮ, ಅಬ್ಬಕ್ಕರ ಕೊಡುಗೆಸಮಾಜಕ್ಕೆ ಅಪಾರ:ನಟಿ ತಾರಾ

KannadaprabhaNewsNetwork |  
Published : Sep 07, 2025, 01:00 AM IST
Veera rani | Kannada Prabha

ಸಾರಾಂಶ

ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ನೆರಳೂರಿನ ಎಸ್‌ವಿವಿಎನ್‌ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ವೀರರಾಣಿ ಅಬ್ಬಕ್ಕ ದೇವಿಯವರ 500ನೇ ಜಯಂತ್ಯುತ್ಸವದ ರಥ-02 ಕಾರ್ಯಕ್ರಮವನ್ನು ಹಿರಿಯ ನಟಿ ತಾರಾ ಅನುರಾಧ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಮಾಜಕ್ಕೆ ಅಹಲ್ಯಾಬಾಯಿ ಹೋಳ್ಕರ್, ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಅವರಂತಹ ಮಹಾನ್ ಮಹಿಳೆಯರ ಕೊಡುಗೆಗಳು ಅಪಾರ ಎಂದು ಚಲನಚಿತ್ರ ಹಿರಿಯ ನಟಿ ತಾರಾ ಅನುರಾಧ ಅಭಿಪ್ರಾಯಪಟ್ಟರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ನೆರಳೂರಿನ ಎಸ್‌ವಿವಿಎನ್‌ ಪಿಯು ಕಾಲೇಜಿನಲ್ಲಿ ವೀರರಾಣಿ ಅಬ್ಬಕ್ಕ ದೇವಿಯವರ 500ನೇ ಜಯಂತ್ಯುತ್ಸವದ ರಥ-02 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾನ್‌ ಸಾಧಕ ಮಹಿಳೆಯರನ್ನು ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿಯರ ಜೀವನವನ್ನು ಪ್ರಚುರಪಡಿಸುತ್ತಿರುವ ಎಬಿವಿಪಿ ಸಂಘಟನೆಯನ್ನು ನಾನು ಅಭಿನಂದಿಸುತ್ತೇನೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವಿದ್ಯಾರ್ಥಿ ಶಕ್ತಿಯನ್ನು ರಾಷ್ಟ್ರ ಶಕ್ತಿಯಾಗಿ ರೂಪಿಸುತ್ತಿರುವ ಸಂಘಟನೆಯಾಗಿದೆ. ಸುಮಾರು 75 ವರ್ಷಗಳಿಂದ ಈ ಸಂಘಟನೆ ವಿದ್ಯಾರ್ಥಿಗಳ ಹಿತಕ್ಕಾಗಿ ಕೆಲಸ ಮಾಡುತ್ತಿದ್ದು ಈ ರಥಯಾತ್ರೆ ಆನೇಕಲ್‌ನಿಂದ ಆರಂಭವಾಗುತ್ತಿರುವುದರಿಂದ ಇದನ್ನು ಉದ್ಘಾಟಿಸಲು ಬಹಳ ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾದ ನಾ.ತಿಪ್ಪೇಸ್ವಾಮಿ ಮಾತನಾಡಿ, ಇಂತಹ ಮಹಾನ್ ವ್ಯಕ್ತಿತ್ವಗಳನ್ನು ಸಮಾಜಕ್ಕೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಹಿಂದೆಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯು ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜಯಂತಿ ಆಚರಿಸಿತ್ತು. ಈ ವರ್ಷ ರಾಣಿ ಅಬ್ಬಕ್ಕನವರ 500ನೇ ಜಯಂತಿಯನ್ನು ಆಚರಿಸುತ್ತಿದೆ ಎಂದು ಹೇಳಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರವಣ್‌ಕುಮಾರ್‌, ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಮಣಿಕಂಠ ಕಳಸರ, ದಕ್ಷಿಣ ಪ್ರಾಂತದ ಅಧ್ಯಕ್ಷ ಡಾ.ರವಿ ಮಂಡ್ಯ, ರಾಜ್ಯ ಸಹಕಾರ್ಯದರ್ಶಿ ಜ್ಞಾನಾ, ಜಿಲ್ಲಾ ಸಂಚಾಲಕ ಗಗನ್‌, ಎಸ್‌ವಿವಿಎನ್‌ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ನಾಗರಾಜ್‌ರೆಡ್ಡಿ, ಹಿರಿಯ ಕಾರ್ಯಕರ್ತರಾದ ಹರ್ಷ ನಾರಾಯಣ, ಭರತ್, ವರುಣ್‌ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!