ಕನ್ನಡಪ್ರಭ ವಾರ್ತೆ ಬೆಂಗಳೂರು
ರನ್ಯಾ ರಾವ್ ಒಡೆತನದ ಸ್ಟೀಲ್ ಟಿಎಂಟಿ ಬಾರ್ ಉತ್ಪಾದನಾ ಸಂಸ್ಥೆಗೆ ಕೆಐಎಡಿಬಿಯಿಂದ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಹಂಚಿಕೆ ಮಾಡಲಾಗಿದೆ ಎಂಬ ವಿವಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಂ. ಮಹೇಶ್, 2023ರ ಜನವರಿ 24ರಂದು ನಡೆದ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ರನ್ಯಾ ರಾವ್ಗೆ ಸಂಬಂಧಿಸಿದ ಸ್ಟೀಲ್ ಟಿಎಂಟಿ ಬಾರ್ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮೋದನೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಉತ್ಪಾದನಾ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಶಿರಾದಲ್ಲಿ 12 ಎಕರೆ ಭೂಮಿ ನೀಡುವಂತೆಯೂ ಕೋರಿದ್ದರು.
ಭೂಮಿ ಹಂಚಿಕೆಗೆ ಸಂಬಂಧಿಸಿದಂತೆ ಕೆಐಎಡಿಬಿ ಪ್ರತಿ ಎಕರೆ ಭೂಮಿಗೆ 65 ಲಕ್ಷ ರು. ನಿಗದಿ ಮಾಡಿತ್ತು. ಆದರೆ, ರನ್ಯಾ ರಾವ್ ಸಂಸ್ಥೆಯಿಂದ ಯೋಜನೆಗೆ ಅನುಮೋದನೆ ಪಡೆದ ನಂತರ ಭೂಮಿ ಹಂಚಿಕೆಗೆ ಯಾವುದೇ ಪ್ರಸ್ತಾವನೆ ಅಥವಾ ಹಣ ಸಂದಾಯವಾಗಲಿಲ್ಲ. ಹೀಗಾಗಿ ರನ್ಯಾ ರಾವ್ ಸಂಸ್ಥೆಗೆ ಭೂಮಿ ಹಂಚಿಕೆಯನ್ನು ಕೆಐಎಡಿಬಿಯಿಂದ ಕೈಬಿಡಲಾಯಿತು ಎಂದು ಹೇಳಿದರು.----
ರನ್ಯಾಗೆ ಜಮೀನು ಕೊಟ್ಟಿಲ್ಲರನ್ಯಾ ರಾವ್ಗೆ ಸಂಬಂಧಿಸಿದ ಸ್ಟೀಲ್ ಟಿಎಂಟಿ ಉತ್ಪಾದನಾ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮೋದನೆ ನೀಡಿತ್ತು. ಅದಕ್ಕೆ ಸಂಬಂಧಿಸಿದಂತೆ ಶಿರಾ ಕೈಗಾರಿಕಾ ಪ್ರದೇಶದಲ್ಲಿ 12 ಎಕರೆ ಭೂಮಿ ಮಂಜೂರು ಮಾಡಲು ನಿರ್ಧರಿಸಲಾಗಿತ್ತು. ಆದರೆ, ನಿಗದಿತ ಸಮಯದಲ್ಲಿ ಹಣ ಪಾವತಿಸದ ಕಾರಣ ಜಮೀನು ಹಂಚಿಕೆ ಮಾಡಿಲ್ಲ.
- ಎಂ.ಬಿ. ಪಾಟೀಲ್, ಕೈಗಾರಿಕಾ ಸಚಿವ