ತ್ವರಿತ ಎಸ್ಐಆರ್ ಮ್ಯಾಪಿಂಗ್‌ ಪೂರ್ಣ: ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ

KannadaprabhaNewsNetwork |  
Published : Jun 04, 2026, 01:15 AM IST
ಡಿಸಿ | Kannada Prabha

ಸಾರಾಂಶ

ಚಿಕ್ಕಮಗಳೂರುಚಿಕ್ಕಮಗಳೂರು ಜಿಲ್ಲೆಯಲ್ಲಿ 89.27 ರಷ್ಟು ಎಸ್‌ಐಆರ್‌ ಮ್ಯಾಪಿಂಗ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ಒಂದು ವಾರದಲ್ಲಿ ತ್ವರಿತವಾಗಿ ಮತ್ತಷ್ಟು ಮ್ಯಾಪಿಂಗ್‌ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದು ಜಿಲ್ಲಾಧಿಕಾರಿ ಭನ್ವರ್‌ಸಿಂಗ್‌ ಮೀನಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯಲ್ಲಿ 89.27 ರಷ್ಟು ಎಸ್‌ಐಆರ್‌ ಮ್ಯಾಪಿಂಗ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ಒಂದು ವಾರದಲ್ಲಿ ತ್ವರಿತವಾಗಿ ಮತ್ತಷ್ಟು ಮ್ಯಾಪಿಂಗ್‌ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದು ಜಿಲ್ಲಾಧಿಕಾರಿ ಭನ್ವರ್‌ಸಿಂಗ್‌ ಮೀನಾ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 9.67 ಲಕ್ಷ ಮತದಾರರಿದ್ದು, ಈವರೆಗೆ 8.63 ಮತದಾರರ ಮ್ಯಾಪಿಂಗ್‌ ಕಾರ್ಯ ಪೂರ್ಣಗೊಳಿಸಲಾಗಿದೆ. ಇನ್ನೂ 1.03 ಲಕ್ಷ ಮಂದಿ ಮ್ಯಾಪಿಂಗ್‌ ಬಾಕಿ ಇದ್ದು, ಮುಂದಿನ ಕೆಲವು ದಿನಗಳಲ್ಲಿ ತ್ವರಿತವಾಗಿ ಮ್ಯಾಪಿಂಗ್‌ ಮಾಡಲಾಗುವುದು ಎಂದರು.

ಎಸ್‌ಐಆರ್‌ ಮ್ಯಾಪಿಂಗ್‌ ಕಾರ್ಯಕ್ಕೂ ಮತ್ತು ಎಸ್‌ಐಆರ್‌ (ಮತದಾರ ಒಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ) ಗೂ ನೇರವಾದ ಸಂಬಂಧವಿಲ್ಲ. ಆದರೆ, ಮ್ಯಾಪಿಂಗ್‌ ಮಾಡುವುದರಿಂದ ಎಸ್‌ಐಆರ್‌ ಪ್ರಕ್ರಿಯೆ ನಡೆಸು ವುದಕ್ಕೆ ಸರಳವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಜೂ. 20ರಿಂದ 29ರವರೆಗೆ ತರಬೇತಿ ನಡೆಯುತ್ತಿದ್ದು, ಜೂ 30ರಿಂದ ಜುಲೈ 29ರವರೆಗೆ ಬಿಎಲ್‌ಓ ಗಳು ಮನೆಮನೆಗಳಿಗೆ ಭೇಟಿನೀಡಿ ಇನುಮರೇಶನ್ ಫಾರಂ ಗಳನ್ನು ಮತದಾರರಿಗೆ ನೀಡಲಿದ್ದಾರೆ. ಆ ಫಾರಂ ತುಂಬಿಕೊಟ್ಟರೆ, ಅದನ್ನು ಪರಿಶೀಲನೆ ಮಾಡಿ ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಅಪ್‌ ಲೋಡ್‌ ಮಾಡಲಾಗುವುದು ಎಂದು ತಿಳಿಸಿದರು.

ಆ ನಂತರ ಚುನಾವಣಾ ಆಯೋಗ ಕರಡು ಮತದಾರ ಪಟ್ಟಿ ಪ್ರಕಟಿಸಲಿದ್ದು, ಆಕ್ಷೇಪಣೆ ಸಲ್ಲಿಸುವುದಕ್ಕೆ ಅವಕಾಶ ನೀಡಲಿದೆ. ಮತದಾರ ಪಟ್ಟಿಯಿಂದ ಹೆಸರು ಬಿಟ್ಟು ಹೋದವರು, ಚುನಾವಣಾ ಆಯೋಗ ಸೂಚಿಸಿದ 12ಪ್ರಕಾರ ದಾಖಲೆಗಳಲ್ಲಿ ಯಾವುದಾರೂ ಒಂದು ದಾಖಲೆ ಸಲ್ಲಿಕೆ ಮಾಡಿದರೆ ಸಾಕು ಮತದಾರ ಪಟ್ಟಿಗೆ ಹೆಸರು ಸೇರಿಸಲಾಗುತ್ತದೆ ಎಂದು ವಿವರಿಸಿದರು.

ಪ್ರತಿ ಮತಗಟ್ಟೆಗೆ ಒಬ್ಬರಂತೆ ಪ್ರತಿ ರಾಜಕೀಯ ಪಕ್ಷಗಳಿಂದ ಬೂತ್ ಮಟ್ಟದ ಏಜೆಂಟ್ ನೇಮಕ ಮಾಡ ಬೇಕಾಗಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪರಿಶೀಲನಾ ಕೇಂದ್ರಗಳನ್ನು ತಾಲೂಕು ಕಚೇರಿ, ನಾಡಕಚೇರಿ, ಗ್ರಾಪಂ, ಗ್ರಾಮ ಆಡಳಿತಾಧಿಕಾರಿಗಳ ಕಚೇರಿ ಮತ್ತು ನಗರ ಮತ್ತು ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳಲ್ಲಿ ಸೂಕ್ತ ಮೂಲಸೌಕರ್ಯಗಳೊಂದಿಗೆ ಸ್ಥಾಪಿಸಲಾಗಿರುತ್ತದೆ ಎಂದು ತಿಳಿಸಿದರು.

ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಜಿತೇಂದ್ರಕುಮಾರ್ ದಯಾಮ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಅಪರಜಿಲ್ಲಾಧಿಕಾರಿ ನಂಜುಂಡೇಗೌಡ ಇದ್ದರು.

-- ಬಾಕ್ಸ್ --

ಚಿಕ್ಕಮಗಳೂರು ಜಿಲ್ಲೆಯ ಮ್ಯಾಪಿಂಗ್‌ ವಿವರ

ವಿಧಾನಸಭಾ ಕ್ಷೇತ್ರ 2025ರ ಮತದಾರರ ಸಂಖ್ಯೆಮ್ಯಾಪಿಂಗ್‌ ಪೂರ್ಣಶೇಕಡವಾರು ಮ್ಯಾಪಿಂಗ್ ಬಾಕಿ

ಶೃಂಗೇರಿ1,57,7151,57,18899.7210,527

ಮೂಡಿಗೆರೆ1,68,8731,53,70791.0215,166

ಚಿಕ್ಕಮಗಳೂರು2,28,9631,82,63079.7946,333

ತರೀಕೆರೆ1,93,1821,79,16993.1613,013

ಕಡೂರು2,08,5201,89,93491.0918,586

ಒಟ್ಟು9,57,2538,63,47389.271,03,625

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪಪ್ರಚಾರ ಸಹಿಸಲ್ಲ: ಕಾಂಗ್ರೆಸ್‌ಗೆ ಎಸ್‌ಡಿಪಿಐ ಎಚ್ಚರಿಕೆ
2 ತಿಂಗಳಲ್ಲಿ 5 ಕೋಟಿ ಸಸಿ ನೆಡುವ, ಕೆರೆಗಳ ಪುನಶ್ಚೇತನ ಅಭಿಯಾನ