- ಶ್ರೀ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಪ್ರೌಢಶಾಲೆ ಕ್ರೀಡೆ-ಸಾಂಸ್ಕೃತಿಕ ಸಂಘ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ವಿನೋಬ ನಗರದಲ್ಲಿರುವ ಶ್ರೀ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಪ್ರೌಢಶಾಲೆಯಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನಳಂದ ವಿಶ್ವವಿದ್ಯಾಲಯದ ಗ್ರಂಥಾಲಯ 16 ಸಾವಿರ ಗ್ರಂಥಗಳನ್ನು ಹೊಂದಿತ್ತು. ಅದರ ಪ್ರಯೋಜನೆಯನ್ನು ಜಗತ್ತಿನ ಹಲವು ಪ್ರಮುಖರು ಭೇಟಿ ನೀಡಿ ಪಡೆದಿದ್ದಾರೆ. ನಾಳಿನ ಪ್ರಜೆಗಳಾದ ನೀವುಗಳು ಪುಸ್ತಕಗಳನ್ನು ಓದುವುದು ಕಲಿಯಿರಿ. ಓದಿ ಜ್ಞಾನವಂತರಾಗಿ ಬೆಳೆಯಿರಿ ಸಲಹೆ ನೀಡಿದರು.ಸಂಸ್ಥೆ ಕಾರ್ಯದರ್ಶಿ ಮನೋಹರ ಚಿಗಟೇರಿ ಮಾತನಾಡಿ, ಶ್ರದ್ಧೆಯಿಂದ ಕಲಿಯಬೇಕು. ಉತ್ತಮ ಅಂಕ ಗಳಿಸಿದರೆ ನೀವುಗಳೂ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಲು ಸಾಧ್ಯ. ಭವಿಷ್ಯದ ಸಮಾಜದಲ್ಲಿ ಗೌರವ ಸ್ಥಾನ ಪಡೆದು ಹೆತ್ತ ತಂದೆ-ತಾಯಿ ಹಾಗೂ ಕಲಿತ ಶಾಲೆಗೆ ಕೀರ್ತಿ ತರಬೇಕು ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಾರ್ಯದರ್ಶಿ ಹೇಮಯ್ಯ ಮಠಪತಿ, ಸಹ ಕಾರ್ಯದರ್ಶಿ ವಿ.ಅನುಷಾ, ಎಚ್.ಪಿ.ಜ್ಯೋತಿ, ಪಿ.ಅನಿತಾ ಹಾಗೂ ವಿದ್ಯಾರ್ಥಿ ಸಂಘ ಪದಾಧಿಕಾರಿಗಳು ಇದ್ದರು.
- - - -27ಕೆಡಿವಿಜಿ40ಃ:ದಾವಣಗೆರೆಯಲ್ಲಿ ಶ್ರೀ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಪ್ರೌಢಶಾಲೆ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಜಯವಿಭವ ವಿದ್ಯಾಸಂಸ್ಥೆ ಸಹ ಕಾರ್ಯದರ್ಶಿ ಸೌಮ್ಯ ಬಸವರಾಜ ಉದ್ಘಾಟಿಸಿದರು.