ಕನ್ನಡಪ್ರಭ ವಾರ್ತೆ ಮೈಸೂರು
ನಗರದಲ್ಲಿ ನಡೆದ ಮೈಸೂರು ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನಗಿಸುವವನ ಮನದ ಮಾತು ಗೋಷ್ಠಿಯಲ್ಲಿ ತಮ್ಮ ಜೀವನದ ಅನೇಕ ಘಟನೆಗಳನ್ನು ತೆರೆದಿಡುತ್ತ, ತಾವು ಹಾಸ್ಯ ಜಗತ್ತಿಗೆ ಬಂದ ಕಥೆಯನ್ನು ಹೇಳಿದರು. ಒಂದೊಂದು ಅನುಭವಗಳ ಬಗ್ಗೆ ಮಾತನಾಡುತ್ತಲೇ, ತಣ್ಣನೆಯ ಹಾಸ್ಯವನ್ನು ತೇಲಿಬಿಟ್ಟರು.
ಗೋಷ್ಠಿ ನಿರ್ವಹಿಸುತ್ತಿದ್ದ ಲೇಖಕಿ ಮಾಧುರಿ ಕುಲಕರ್ಣಿ ಅವರು, ಹಾಸ್ಯ ಪ್ರಜ್ಞೆ ಎಂದರೆ ಏನು ಎಂದು ಪ್ರಶ್ನಿಸಿದಾಗ, ಮನುಷ್ಯ ಸ್ವತಃ ತನ್ನನ್ನೆ ಗಮನಿಸಿ ನಕ್ಕಾಗ ಅದು ಹಾಸ್ಯಪ್ರಜ್ಞೆ, ಇತರರನ್ನು ಗಮನಿಸಿ ನಕ್ಕರೆ ಅದು ಕ್ರೂರವಾಗುತ್ತದೆ. ಸ್ವವಿಮರ್ಶೆಯ ಲವಲವಿಕೆಯ ರೂಪವೇ ಹಾಸ್ಯ ಎಂದರು.ನಾನು ಪುಸ್ತಕ ಓದಲು ಆರಂಭಿಸಿದ್ದೇ ನನ್ನ ತಾಯಿಯಿಂದ. ಆಕೆ ಪುಸ್ತಕಗಳನ್ನು ಎರವಲು ಪಡೆದು ಮನೆಗೆ ತರುತ್ತಿದ್ದಳು. ಆಕೆ ಇಷ್ಟೊಂದು ನೆಚ್ಚಿ ಓದುತ್ತಿದ್ದಾಳೆಂದರೆ. ಇದರಲ್ಲೇನಿದೆ ಎಂಬ ಕುತೂಹಲ ನನ್ನನ್ನು ಓದಿನತ್ತ ದೂಡಿತು. ಬೀಚಿ ನನ್ನ ನೆಚ್ಚಿನ ಲೇಖಕರಾದರು, ಅವರನ್ನು ಓದಿದ್ದು, ಜೀವನಕ್ಕೆ ಒಂದು ದಾರಿ ನೀಡಿತು. ಪುಸ್ತಕಗಳೊಂದಿಗಿನ ಓಡನಾಟ ನಿಮ್ಮನ್ನು ಉನ್ನತ ಸ್ಥಾನಕ್ಕೇರಿಸುತ್ತದೆ ಎಂದರು.
ಲೇಖಕಿ ಮಾಧುರಿ ಕುಲಕರ್ಣಿ ಇದ್ದರು.
ಕನ್ನಡಪ್ರಭ ವಾರ್ತೆ ಮೈಸೂರುನಗರದಲ್ಲಿ ನಡೆದ ಮೈಸೂರು ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ದಿವಾಕರ ಹೆಗಡೆ ಮತ್ತು ತಂಡದವರು ರಾವಣನ ತಂಗಿ ಏಕವ್ಯಕ್ತಿ ತಾಳಮದ್ದಲೆ ಪ್ರಸ್ತುತಪಡಿಸಿದರು.
ರಾಮನ ರೂಪಕ್ಕೆ ಮನಸೋತು ಅವನಲ್ಲಿ ಪ್ರೇಮ ನಿವೇದನೆ ಮಾಡುತ್ತಾಳೆ. ರಾಮ ಲಕ್ಷ್ಮಣನ ಕಡೆಗೆ ತೋರಿಸುತ್ತಾನೆ. ಆ ಸಂದರ್ಭದಲ್ಲಿ ಲಕ್ಷ್ಮಣನಿಂದ ಅವಮಾನಿತಳಾದ ಶೂರ್ಪನಖಿಯೂ ಸೀತೆಯನ್ನು ಹೊತ್ತೊಯ್ದು ರಾಮನ ದಾಂಪತ್ಯವನ್ನು ಕೆಡಿಸುವ ಪ್ರತಿಜ್ಞೆ ಮಾಡುತ್ತಾಳೆ. ಈ ಸಂದರ್ಭವನ್ನು ತಾಳಮದ್ದಳೆ ಮೂಲಕ ಆಶು ನಾಟಕ ರೂಪದಲ್ಲಿ ನಡೆಸಿಕೊಟ್ಟರು.ಇವರಿಗೆ ಭಾಗವತರಾದ ಪ್ರಸನ್ನ ಹೆಗಡೆ ಮತ್ತು ಮದ್ದಲೆಯಲ್ಲಿ ಚಿನ್ಮಯ್ ಸಾಥ್ ನೀಡಿದರು.