ಕನ್ನಡಪ್ರಭ ವಾರ್ತೆ ಹಾವೇರಿ
ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಹಂಚಿನಮನಿ ಆರ್ಟ್ ಗ್ಯಾಲರಿ ಆಶ್ರಯದಲ್ಲಿ ಜರುಗಿದ ತಮ್ಮ ಕವಿತೆಗಳ ವಾಚನ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಐವತ್ತು ವರ್ಷಗಳಿಂದ ಕಾವ್ಯ ರಚಿಸುತ್ತಿರುವೆ. ಮೊದಲ ಕವಿತೆ ಬೇರಿನಿಂದ ಇತ್ತೀಚಿನ ಅಮೆರಿಕಾ ಕವಿತೆವರೆಗೆ ಕಾವ್ಯ ಲೋಕದಲ್ಲಿ ಪಯಣಿಸಿರುವೆ. ಆಯಾ ಕಾಲಕ್ಕೆ ಸಂಬಂಧಿಸಿದ ಕವಿತೆಗಳು ಇಂದಿಗೂ ಜೀವಂತಿಕೆ ಉಳಿಸಿಕೊಂಡಿವೆ ಎಂಬ ಸಂತೃಪ್ತ ಭಾವ ನನ್ನದು ಎಂದರು.
ಲೇಖಕಿ ಮಹಾದೇವಿ ಕಣವಿ ಮಾತನಾಡಿ, ಸಾಹಿತಿ ಸತೀಶ ಕುಲಕರ್ಣಿ ಹೆಂಗರುಳಿನ ಕವಿ. ಅದಕ್ಕಾಗಿ ಅವರ ಕಾವ್ಯಗಳಲ್ಲಿ ಸ್ತ್ರೀ ಸಂವೇದನೆಯಿದೆ. ಹೆಣ್ಣಿನ ಬದುಕಿನ ಸೂಕ್ಷ್ಮತೆಯಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಿವಿಲ್ ಎಂಜಿನಿಯರ್ ಎಚ್.ಎಸ್. ಮಹದೇವ ಮಾತನಾಡಿ, ಸಮಯಪ್ರಜ್ಞೆ, ತ್ಯಾಗ, ಅರ್ಪಣಾ ಮನೋಭಾವದ ಸತೀಶ ಕುಲಕರ್ಣಿ ಅವರನ್ನು ಚಿಕ್ಕಂದಿನಿಂದಲೂ ಬಲ್ಲೆ. ಅವರಲ್ಲಿನ ಸಾಮಾಜಿಕ ಬದ್ಧತೆ ಮೆಚ್ಚುವಂಥದ್ದು ಎಂದರು.
ಕೆಪಿಎಸ್ಸಿ ಸದಸ್ಯ ಡಾ. ಎಚ್.ಎಸ್. ನರೇಂದ್ರ ಚಾಲನೆ ನೀಡಿದರು. ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟಿ ವಿ.ಎನ್. ತಿಪ್ಪನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಸತೀಶ ಕುಲಕರ್ಣಿ ಮತ್ತು ಕಾಂಚನಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.