ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಹೈಕೋರ್ಟ್ ಸೂಚನೆಯಂತೆ ಅಂಚೆ ಮತಪತ್ರದ ಮರು ಎಣಿಕೆ ನಡೆಸಲು ಚುನಾವಣಾ ಆಯೋಗದ ಸೂಚನೆ ಮೇಲೆ ಜಿಲ್ಲಾ ಚುನಾವಣಾಧಿಕಾರಿಗಳಿಂದ ಸಕಲ ಸಿದ್ಧತೆ ಮಾಡಲಾಗಿದೆ. ನಗರದ ಐಡಿಎಸ್ಜಿ ಕಾಲೇಜಿನ ಮೊದಲ ಮಹಡಿಯ ಕೊಠಡಿ ಸಂಖ್ಯೆ 12 ರಲ್ಲಿ ಮತ ಎಣಿಕೆ ನಡೆಯಲಿದೆ.
ಈ ನಿಟ್ಟಿನಲ್ಲಿ ಶನಿವಾರ ಬೆಳಗ್ಗೆ 6 ರಿಂದ ಸಂಜೆ 5ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಮರುಮತ ಎಣಿಕೆ ಕೇಂದ್ರದ ಸುತ್ತಲೂ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಮತ ಮರು ಎಣಿಕೆ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ಎಣಿಕೆ ಹಾಗೂ ಬಂದೋ ಬಸ್ತ್ ಗೆ ನೇಮಕವಾದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಚುನಾವಣಾ ಅಧಿಕಾರಿಗಳನ್ನು ಹೊರತುಪಡಿಸಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.ಮರು ಮತ್ತು ಎಣಿಕೆ ಕೇಂದ್ರದಲ್ಲಿ ಸುತ್ತಲೂ ಆಯುಧ. ಅಪಾಯಕಾರಿ ವಸ್ತುಗಳನ್ನು ತರುವುದನ್ನು ಪ್ರತಿಬಂಧಿಸಲಾಗಿದೆ. ಎಣಿಕೆ ಕೇಂದ್ರದ ವ್ಯಾಪ್ತಿಯಲ್ಲಿ ವಾದ್ಯಬಾರಿಸುವುದು, ಘೋಷಣೆ ಕೂಗುವುದನ್ನೂ ನಿಷೇಧಿಸಲಾಗಿದೆ.ಮೂರು ಮತ ಎಣಿಕೆ ಕೇಂದ್ರದ ಸುತ್ತಲೂ ಇರುವ ಸೈಬರ್ ಕೆಫೆ ಜೆರಾಕ್ಸ್ ಅಂಗಡಿ ಹಾಗು ಇನ್ನಿತರ ಅಂತರ್ಜಾಲ ಕೇಂದ್ರ ಗಳನ್ನು ನಿಷೇಧಜ್ಞೆ ಅವಧಿಯಲ್ಲಿ ಕಡ್ಡಾಯವಾಗಿ ಮುಚ್ಚಲು ಆದೇಶಿಸಲಾಗಿದೆ.
ಪೊಲೀಸರಿಗೆ ಶುಕ್ರವಾರ ತರಬೇತಿ
ಅಭ್ಯರ್ಥಿಗಳಿಗೆ ಮತ್ತು ಏಜೆಂಟ್ಗೆ ಮಾತ್ರ ಪ್ರವೇಶಕ್ಕೆ ಅವಕಾಶ
ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಹಾಗೂ ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಮತ ಎಣಿಕೆಕೇಂದ್ರಕ್ಕೆ ತೆರಳಿ ಅಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿದರು.
ಟೈಮ್ ಲೈನ್
ಬೆಳಗ್ಗೆ 9ಕ್ಕೆ ಅಂಚೆ ಮತ ಪರಿಶೀಲನೆ ಆರಂಭ, ಎಣಿಕೆ ಮಕ್ತಾಯದ ಬಳಿಕ ಫಲಿತಾಂಶ ಪ್ರಕಟ---ಬಾಕ್ಸ್---
ಒಟ್ಟು ಅಂಚೆ ಮತ ಪತ್ರ:1822
ಮಾನ್ಯಗೊಂಡ ಅಂಚೆ ಮತ ಪತ್ರ:1540ತಿರಸ್ಕೃತ ಅಂಚೆ ಮತಪತ್ರ: 279
ನೋಟಾ ಅಂಚೆ ಮತಪತ್ರ:03ಫೋಟೋಅಂಚೆ ಮತ ಮರು ಎಣಿಕಾ ಕೇಂದ್ರದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಶುಕ್ರವಾರ ತರಬೇತಿ ನೀಡಿ, ಶನಿವಾರದ ಕರ್ತವ್ಯಕ್ಕೆ ನಿಯೋಜನೆ ಮಾಡಲಾಯಿತು.