ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರದಲ್ಲಿ ಗುರುವಾರ ಮಾರ್ಗದರ್ಶಿ-25, ವಿದ್ಯಾರ್ಥಿ- ಅಧಿಕಾರಿ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪ್ರವೇಶಾತಿ, ಅಂಕಪಟ್ಟಿ, ನೈಜ ಪ್ರಮಾಣಪತ್ರ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿರುತ್ತವೆ. ಅವರು ಕರೆ ಮಾಡಿದಾಗ ಮಾಹಿತಿ ಒದಗಿಸುವುದು ಸವಾಲಿನ ಕೆಲಸ ಎಂದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಕಲಿಕಾರ್ಥಿ ಕಲ್ಯಾಣ ಕೇಂದ್ರ ತೆರೆದು, ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಾನು ದೇಶದ ಬೇರೆ ಬೇರೆ ಮುಕ್ತ ವಿವಿಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಿಯೂ ಕೂಡ ಈ ರೀತಿಯ ಸೌಲಭ್ಯಗಳಿಲ್ಲ. ಇದನ್ನು ಸಿಬ್ಬಂದಿ ಸದುಪಯೋಗ ಮಾಡಿಕೊಂಡು, ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಬೇಕು. ಸಮಸ್ಯೆಗಳೇ ಇಲ್ಲದಂತೆ ಕಾರ್ಯನಿರ್ವಹಿಸಬೇಕು ಎಂದರು.ನಮ್ಮ ವಿವಿಯು ಬೀದರ್ನಿಂದ ಚಾಮರಾಜನಗರದವರೆಗೆ ಇಡೀ ರಾಜ್ಯವ್ಯಾಪಿ ಕಾರ್ಯಕ್ಷೇತ್ರ ಹೊಂದಿದೆ. ದೂರದೂರಿನಿಂದ ವಿದ್ಯಾರ್ಥಿಗಳು ಕೇಂದ್ರ ಸ್ಥಾನಕ್ಕೆ ಬರಬೇಕಾದರೆ ಮೂರ್ನಾಲ್ಕು ದಿನಗಳು ಬೇಕಾಗುತ್ತದೆ. ಇದನ್ನು ತಪ್ಪಿಸಲೆಂದೆ ಈ ಕೇಂದ್ರ ಆರಂಭಿಸಲಾಗಿದೆ ಎಂದರು.
ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ ಮಾತನಾಡಿ, ಕಲಿಕಾರ್ಥಿ ಕಲ್ಯಾಣ ಕೇಂದ್ರದ ಸಿಬ್ಬಂದಿ ತುಂಬಾ ಸಕ್ರಿಯವಾಗಿ ಕೆಲಸ ಮಾಡಬೇಕು. ಇದೊಂದು ಸಂವಹನ ಪ್ರಕ್ರಿಯೆ. ಆದ್ದರಿಂದ ವಿದ್ಯಾರ್ಥಿಗಳಿಂದ ಬರುವ ಪ್ರತಿಯೊಂದು ಕರೆಯನ್ನು ಸ್ವೀಕರಿಸಬೇಕು. ಕರೆ ಕಡಿತವಾದರೆ, ಮಿಸ್ಡ್ ಕಾಲ್ ಇದ್ದರೆ ಮರು ಕರೆ ಮಾಡಬೇಕು. ಅತ್ಯಂತ ತಾಳ್ಮೆಯಿಂದ ಉತ್ತರಿಸಬೇಕು ಎಂದು ಸಲಹೆ ಮಾಡಿದರು.
ಕೇಂದ್ರ ಈವರೆಗಿನ ಸಾಧನೆ ಸಮಾಧಾನಕರವಾಗಿದ್ದು, ಇಷ್ಟಕ್ಕೇ ನಾವು ತೃಪ್ತಿಪಡಬಾರದು. ಅತ್ಯುತ್ಯಮ ಎನಿಸಿಕೊಳ್ಳಲು ವಿದ್ಯಾರ್ಥಿ- ಅಧಿಕಾರಿಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.ಯ
ಪರೀಕ್ಷಾ ವಿಭಾಗದ ಉಪ ಕುಲಸಚಿವ ಸತೀಶ್ ಮಾತನಾಡಿ, ಚುನಾವಣೆ ಮತ್ತಿತರ ತುರ್ತು ಸಂದರ್ಭದಲ್ಲಿ ಮಾತ್ರ ಪರೀಕ್ಷೆಗಳು ವಿಳಂಬವಾಗುತ್ತವೆ. ಇದನ್ನು ಹೊರತುಪಡಿಸಿದರೆ ಎಲ್ಲವೂ ವೇಳಾಪಟ್ಟಿಯಂತೆಯೇ ನಡೆಯುತ್ತವೆ ಎಂದರು.
ಕೇಂದ್ರದ ಸಂಯೋಜಕ ಡಾ.ಸುಧಾಕರ ಹೊಸಳ್ಳಿ ಪ್ರಾಸ್ತಾವಿಕ ಭಾಷಣ ಮಾಡಿ, ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿ, ನಿವಾರಣೆ ಮಾಡುತ್ತಿದೆ. ಪ್ರವೇಶಾತಿ ಪೂರ್ವ ಸಮಾಲೋಚನೆ, ಶೈಕ್ಷಣಿಕ ಸಮಾಲೋಚನೆ, ಪರೀಕ್ಷಾ ವಿಭಾಗಕ್ಕೆ ಸಂಬಂಧಿಸಿದ ಮಾಹಿತಿ ನೀಡುತ್ತಿದೆ. ದೂರವಾಣಿ, ಇ-ಮೇಲ್, ಖುದ್ದು ಬರುವವರಿಗೂ ಕೂಡ ಮಾಹಿತಿ ನೀಡಲಾಗುತ್ತಿದೆ. ಈ ರೀತಿಯ ವ್ಯವಸ್ಥೆ ನಮ್ಮಲ್ಲಿ ಹೊರತುಪಡಿಸಿ ಇತರೆಡೆ ಇಲ್ಲ ಎಂದರು.