ಕನ್ನಡಪ್ರಭ ವಾರ್ತೆ ಚಿಂಚೋಳಿ
ಬೇಸಿಗೆ ದಿನ ಆಗಿರುವುದರಿಂದ ಗ್ರಾಮಗಳಲ್ಲಿನ ಬೋರ್ವೆಲ್ಗಳಲ್ಲಿ ನೀರು ಬರುತ್ತಿಲ್ಲ ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿವೆ. ದನಕರುಗಳಿಗೆ ನೀರು ಹಾಕುವುದು ತುಂಬಾ ಕಷ್ಟಕರವಾಗಿದೆ ಎಂದು ಗ್ರಾಮಸ್ಥರು ತಹಸೀಲ್ದಾರವರಿಗೆ ಎಂದು ಅಳಲು ತೋಡಿಕೊಂಡರು.
ಚಂದ್ರಂಪಳ್ಳಿ ಜಲಾಶಯದ ಮುಖ್ಯಕಾಲುವೆಗೆ ನೀರು ಹರಿದು ಬಿಟ್ಟರೆ ದನಕರುಗಳಿಗೆ ಮತ್ತು ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಅನೇಕ ಸಲ ಕಂದಾಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ರೈತರು ಹೇಳಿದರು.ತಹಸೀಲ್ದಾರ ವೆಂಕಟೇಶ ದುಗ್ಗನ ಮಾತನಾಡಿ, ದನಕರುಗಳಿಗೆ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರು ಹರಿದು ಬಿಡುವಂತೆ ರೈತರ ಬೇಡಿಕೆಯಂತೆ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆಯಲಾಗುವುದು ಎಂದು ಹೇಳಿದರು.
ಜಿಪಂ ಎಇಇ ರಾಹುಲ ಕಾಂಬಳೆ, ರೈತರಾದ ಶರಣಬಸಪ್ಪ ಮಮಶೆಟ್ಟಿ, ಬಕ್ಕಪ್ಪ ಕೊಳ್ಳುರ, ಭೀಮರೆಡ್ಡಿ, ಶಿವಕುಮಾರ ಪೋಚಾಲಿ, ಕಂದಾಯ ನಿರಿಕ್ಷಕ ರವಿಕುಮಾರ ಪಾಟೀಲ ಇನ್ನಿತರಿದ್ದರು.