ಕನ್ನಡಪ್ರಭ ವಾರ್ತೆ ಜಮಖಂಡಿ
2026ರ ಕರಡು ಅಧಿಸೂಚನೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಗಣಕ ವಿಜ್ಞಾನ ಶಿಕ್ಷಕರು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿಗೆ ಉದ್ದೇಶಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ಒಟ್ಟು 400 ಅಂಕಗಳ 3 ಪತ್ರಿಕೆ ಬರೆಯಬೇಕು ಎಂದು ನಿಯಮ ರಚಿಸಲಾಗಿದೆ. ಆದರೆ, 3ನೇ ಪತ್ರಿಕೆಯು 100 ಅಂಕಗಳ ಭಾಷಾ ಪ್ರಾವೀಣ್ಯತೆಗೆ ಆದ್ಯತೆ ನೀಡಲಾಗಿದೆ. ಅದರಲ್ಲಿ 50 ಅಂಕಗಳ ಕನ್ನಡ ಭಾಷೆಗೆ, 50 ಅಂಕಗಳ ಇಂಗ್ಲಿಷ್ ಭಾಷೆಯಲ್ಲಿ ವಿವರಣಾತ್ಮಕ ಬರೆಯಬೇಕೆಂಬ ನಿಯಮ ರೂಪಿಸಲಾಗಿದೆ. ಇಂಗ್ಲಿಷ್ ಭಾಷೆಯ 50 ಅಂಕಗಳ ವಿವರಣಾತ್ಮಕ ಬರೆಯಬೇಕೆಂಬ ನಿಯಮವು ಗ್ರಾಮೀಣ ಭಾಗದ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ಕೂಡಲೇ ನಿಯಮವನ್ನು ಬದಲಾಯಿಸಿ ಪತ್ರಿಕೆ -3 ಅನ್ನು ರದ್ದು ಮಾಡಬೇಕು. ಇಲ್ಲವೇ 50 ಅಂಕಗಳ ಇಂಗ್ಲಿಷ್ ಬದಲಾಗಿ 100 ಅಂಕಗಳ ಕನ್ನಡ ಪರೀಕ್ಷೆಯನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.
ರಾಜಕುಮಾರ ಪಾಟೀಲ, ಭರತೇಶ ಪಾನಕ್ಕನ್ನವರ, ಗುಲಾಬ ತೇರದಾಳ, ದಲಿತ ಸೇನೆ ಅಧ್ಯಕ್ಷ ಲಿಂಗರಾಜ ಬೆಳ್ಳನವರ ಇತರರು ಇದ್ದರು.