ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಮಹಾನವಮಿ ದಿಬ್ಬದ ಎದುರು ಪತ್ತೆಯಾದ ಎರಡು ಪುರಾತನ ಜಲಕುಂಡಗಳ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಹಾನಿಗೊಳಗಾಗಿದ್ದ ಜಲಕುಂಡಗಳ ಮೇಲ್ಮೈಯನ್ನು ಎಚ್ಚರಿಕೆಯಿಂದ ಕಿತ್ತು ತೆಗೆದು, ಹೊಸ ಇಟ್ಟಿಗೆ ಜಲ್ಲಿ ಕಾಂಕ್ರಿಟ್ ಅಳವಡಿಸಲಾಗಿದೆ. ನಂತರ 1:2 ಅನುಪಾತದ ಸುಣ್ಣದ ಗಾರೆ ಬಳಸಲಾಗಿದೆ. ಈ ಗಾರೆಯ ಗುಣಮಟ್ಟ ಮತ್ತು ಬಾಳಿಕೆಯನ್ನು ಹೆಚ್ಚಿಸಲು ವಿಶೇಷ ಮುನ್ನೆಚ್ಚರಿಕೆ ವಹಿಸಲಾಗಿದೆ. ಸುಣ್ಣ ಬಳಕೆಗೆ ಮುಂಚಿತವಾಗಿ 21 ದಿನಗಳ ಕಾಲ ನೆನೆಸಿ ಹದಗೊಳಿಸಲಾಗಿತ್ತು. ಜತೆಗೆ ಸಾಂಪ್ರದಾಯಿಕ ಸಂಯೋಜಕಗಳಾದ ಗಾರೆಯ ಬಳಸಿ ಮತ್ತಷ್ಟು ಗಟ್ಟಿಗೊಳಿಸಲಾಗಿದೆ. ಈ ಸಂರಕ್ಷಣಾ ಕಾರ್ಯಕ್ಕೆ ಅಂದಾಜು ₹80 ಸಾವಿರ ವೆಚ್ಚದಲ್ಲಿ ಸಂರಕ್ಷಣೆ ಮಾಡಲಾಗಿದೆ ಎಂದು ಭಾರತೀಯ ಪುರಾತ್ವತ ಸರ್ವೇಕ್ಷಣಾ ಇಲಾಖೆಯ ಪುರಾತತ್ವ ಅಧೀಕ್ಷ ಕೆ. ರಾಮಕೃಷ್ಣ ರೆಡ್ಡಿ ತಿಳಿಸಿದ್ದಾರೆ.
ಹಂಪಿಯ ಮಹಾನವಮಿ ದಿಬ್ಬದ ಎದುರಿನಲ್ಲಿ ಪತ್ತೆಯಾದ ಎರಡು ಪುರಾತನ ಜಲಕುಂಡಗಳ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.